Oplus_131072

ವಿಶ್ವಮಾನವ ಸಂದೇಶ ಸಾರಿದ ಲೌಕಿಕ ಕವಿ- ಸಂತೆಯೊಳಗಿದ್ದೆ ಸಂತನಾದ ಶ್ರೀ ವೇಮನ.

 

– ವೀರಂತರೆಡ್ಡಿ ಜಂಪಾ ಹುಮನಾಬಾದ

 

ಭಾರತೀಯ ಆಧ್ಯಾತ್ಮಿಕ ಇತಿಹಾಸದಲ್ಲಿ ಮಹಾಯೋಗಿ ವೇಮನರು ಸ್ಮರಣೀಯರು. ಅವರು ತತ್ವಜ್ಞಾನಿಯಾಗಿ, ಯೋಗಿಯಾಗಿ, ದಾರ್ಶನಿಕರಾಗಿ, ಬಂಧುವಾಗಿ ನಮಗೆ ಕಾಣುತ್ತಾರೆ.ಮಹಾಯೋಗಿ ವೇಮನರು 15 ನೆಯ ಶತಮಾನದಲ್ಲಿ ತೆಲುಗು ನಾಡಿನಲ್ಲಿ ಅವತರಿಸಿದ ಈ ಭೂಮಂಡಲ ಕಂಡ ಅಪರೂಪದ ಶ್ರೇಷ್ಠ ಸಂತ ಕವಿ, ಪರಮಜ್ಞಾನಿಯಾಗಿದ್ದವರು.

ಭವ್ಯ ಭರತ ಭೂಮಿಯಲ್ಲಿ ಸಾಧು-ಸಂತರು ಸತ್ಪುರುಷರು ಯೋಗಿಗಳೂ ಅವತರಿಸಿದ ನೆಲವನ್ನು ಪಾವನ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಅಂತಹ ಮಹಾ ಸತ್ಪುರುಷರಲ್ಲಿ ಮಹಾಸಂತ ಯೋಗಿ ವೇಮನ ಒಬ್ಬರಾಗಿದ್ದಾರೆ.

ಕ್ರಿ.ಶ.1421ರಲ್ಲಿ ಆಂಧ್ರಪ್ರದೇಶದ ಮುಗಚಿ ಪಲ್ಲಿಯ ಕೋಮಗಿರಿ ವೇಮಭೂಪಾಲ ಮತ್ತು ಮಲ್ಲಮಾಂಬೆ ಎಂಬ ದಂಪತಿಗಳ ಉದರದಲ್ಲಿ ವೇಮನರ ಜನನವಾಯಿತು. ರಾಜ ಕುಟುಂಬಕ್ಕೆ ಸೇರಿದ ವೇಮನ ಅವರು ವೈಭೋಗದ ಜೀವನವನ್ನು ತ್ಯಾಗಮಾಡಿ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡು ಅಸ್ಪೃಶ್ಯತೆ, ಜಾತಿಪದ್ಧತಿ, ಅಸಮಾನತೆಯ ವಿರುದ್ಧದ ಹೋರಾಟದಲ್ಲಿ ಶ್ರೇಷ್ಠ ದಾರ್ಶನಿಕರಾಗಿ ಗುರುತಿಸಿಕೊಳ್ಳುತ್ತಾರೆ. ಮನುಕುಲದ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಅವರ ತ್ಯಾಗ ಸದಾ ಸ್ಮರಣೀಯವಾದದ್ದು…

ಪಾಶ್ಯಾತ್ಯ ವಿದ್ವಾಂಸ ಸಿ.ಪಿ. ಬ್ರೌನ್ ಅವರು ವೇಮನ್ ಅವರನ್ನು ಇಡೀ ಜಗತ್ತಿಗೆ ಪರಿಚಯಿಸಿಕೊಟ್ಟರು. ಪ್ರತಿಯುಗದಲ್ಲೂ ಅನಾಗರಿಕತೆ,ಅನ್ಯಾಯ ಅಸತ್ಯ,ಅಧರ್ಮ, ಹೆಚ್ಚಾದಾಗ ಜ್ಞಾನಿಗಳ ಮಾರ್ಗದರ್ಶನದಲ್ಲಿ ನಡೆದರೆ ಸಮಾಜ ಸುಭಿಕ್ಷವಾಗಿರುತ್ತದೆ.

ವೇಮನರು 15 ನೇ ಶತಮಾನದಲ್ಲಿ ಆಂಧ್ರಪ್ರದೇಶದಲ್ಲಿ ವಚನಕಾರರಲ್ಲಿ ಶ್ರೇಷ್ಠ ವಚನಕಾರರು, ಕವಿಗಳು,ಸಮಾಜ ಚಿಂತಕರು ಮಾನವಕುಲದ ಏಳಿಗೆಗಾಗಿ ಶ್ರಮಿಸಿದವರು..

ಕನ್ನಡದಲ್ಲಿ ಸರ್ವಜ್ಞ..ತಮಿಳಿನ ತಿರುವಳ್ಳರ್.. ಕಲ್ಯಾಣ ಸಿರಿಗನ್ನಡ ಸಾಹಿತ್ಯ ಅಂತಜಾ೯ಲ ತಾಣಕ್ಕೆ ಬೇಟಿ ನೀಡಿ ಅವರಂತೆ ತೆಲುಗಿಗೆ ವೇಮನರು ವಚನಕಾರರು. ಮಹಾಕವಿ ಮಹಾಯೋಗಿ ಆಗಿದ್ದಾರೆ.
ವೇಮನ ಸಿದ್ದಾಪುರ ಸಮೀಪದ ಕುಮಾರಗಿರಿ ಒಡಹುಟ್ಟಿದವರಿಂದ, ಸಂಬಂಧಿಕರಿಂದ ಅನಾದರಕ್ಕೆ ಗುರಿಯಾಗಿ ದುಶ್ಚಟಗಳ ದಾಸನಾಗುತ್ತಾನೆ. ಪರಸ್ತ್ರೀ ಸಂಘದಲ್ಲಿ ವಿಷಯಾಸಕ್ತನಾದ ವೇಮನು ಮನೆಯ ಸಂಪತ್ತೆಲ್ಲ ಹಾಳು ಮಾಡುತ್ತಾನೆ. ಅತ್ತಿಗೆಯಾಗಿ ಬಂದ ಹೇಮರೆಡ್ಡಿ ಮಲ್ಲಮ್ಮ ವೇಮನ ಮನಸ್ಸನ್ನು ತಿದ್ದಿ ಸರಿದಾರಿಗೆ ತರುತ್ತಾಳೆ..

ವೇಮನು ತನ್ನ ಪ್ರೇಯಸಿಯ ನಗ್ನ ಶರೀರವನ್ನು ಕಂಡೊಡನೆ ಅವನೊಳಗೆ ಭಯಂಕರವಾದ ಜಿಗುಪ್ಸೆ ಅಸಹ್ಯ ಭಾವನೆ ಆವರಿಸಿ ಒಡನೆಯೇ ಗಾಬರಿಗೊಂಡು ಕಣ್ಮುಚ್ಚಿ

ತಾಯಿಯ ಗರ್ಭದಿಂದ ತಾಂ ಬರುವ ಸಮಯದಿ
ವಸ್ತ್ರಮಿಲ್ಲ,ತುದಿಗುಮಿಲ್ಲ.
ನಡುವೆ ಬಟ್ಟೆ ಉಡುವುದೇಕೆಂದು ತಿಳಿಯಿರಿ ವಿಶ್ವತೋಭಿರಾಮ ಕೇಳೋ ವೇಮಾ”

ಎಂದು ತತ್ವಜ್ಞಾನ ಹೇಳುತ್ತ ತಾನೂ ನಗ್ನನಾಗಿ ವೈರಾಗಿಯಂತೆ ಕಾಲ್ತೆಗೆದು ಹೊರಟನು. ಮುಂದೆ ತನ್ನ ಸಾಧನೆಯಿಂದ ಮಹಾಯೋಗಿ ಆಗುವನು..

15 ನೇ ಶತಮಾನದಲ್ಲಿ ತನ್ನ ತ್ರಿಪದಿಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸರಿದಾರಿಗೆ ತರಲು ಯತ್ನಿಸಿದ ಮಹಾಯೋಗಿ ವೇಮನು ತೆಲುಗು ಭಾಷೆಯಲ್ಲಿ ಲೋಕಾನುಭವವನ್ನು ಸೇರಿಸಿ ಕಂಡಿದ್ದನ್ನು ಕಂಡಹಾಗೆ ಕವನಗಳನ್ನು ಕಟ್ಟುವ ಮೂಲಕ ಜನರ ತಪ್ಪು ಒಪ್ಪುಗಳನ್ನು ತಿಳಿಸಿ ಸರಿದಾರಿಗೆ ತರಲು ಯತ್ನಿಸಿದ್ದಾನೆ..

ಎಲೆಯ ಮೇಲೆ ಬರಹ ಎಲ್ಲರಿಗೂ ತಿಳಿವುದು ಹಸ್ತದೊಳಿಹ ಬರಹ ಹೇಳಬಹುದು. ಚರ್ಮದಡಿಯ ಬರಹ ಬ್ರಹ್ಮ ತಾನರಿವನೈ ವಿಶ್ವಧಾಭಿರಾಮ ಕೇಳೋ ವೇಮಾ”

ಹಲ್ಲಿ ನುಡಿಯ ಕೇಳಿ ಜನರು ತಮ್ಮ ಕೆಲಸವೆಲ್ಲ ಸಫಲವೆಂದು ಸಂತಸಗೊಳ್ಳುವರು.ಆಗದ ಕೆಲಸಕ್ಕೆ ತಮ್ಮ ಕರ್ಮವೆಂದೆನ್ನುವರು. ವಿಶ್ವಧಾಭಿರಾಮ ಕೇಳೋ ವೇಮಾ

ಅವರ ತತ್ವಪೂರಿತ ವಚನಗಳಲ್ಲಿ…

ತಂದೆ-ತಾಯರಲಿ ದಯೆ ತೋರದ ಪುತ್ರ ಹುಟ್ಟಲೇನು? ಮತ್ತೆ ಸತ್ತರೇನು?
ಹುತ್ತದಲಿ ಗೆದ್ದಲು ಹುಟ್ಟುವೇ ?ಸಾಯವೇ ವಿಶ್ವಧಾಭಿರಾಮ ಕೇಳೋವೇಮಾ”

ತಂದೆ ತಾಯಿಯ ಸೇವೆ ಮಾಡದ ಮಗ ಹುಟ್ಟಿದರೇನು ? ಸತ್ತರೇನು ? ಎಂದು ಕೇಳುವ ವೇಮನರೂ ಅಂತಹ ಮಕ್ಕಳನ್ನು ಗೆದ್ದಲು ಹುಳುಗಳು ಅಲ್ಲಿಯೇ ಹುಟ್ಟಿ ಅಲ್ಲಿಯೇ ಸಾಯುತ್ತವೆ.ಅವು ಯಾರಿಗೂ ಉಪಕಾರಿಯಲ್ಲವೆಂದು ವೇಮನರು ವಿವರಿಸಿದ್ದಾರೆ..

ಜನನ- ಮರಣಗಳಿಗೆ ಸ್ವತಂತ್ರ ನಾನಲ್ಲ!
ಮೊದಲು ಕರ್ತನಲ್ಲ ಕಡೆಗೂ ಅಲ್ಲ !
ನಡುವೆ ಕರ್ತನೆನಲು ನಗೆ ಕೇಡು ಅಲ್ಲವೇ !?
ವಿಶ್ವದಾಭಿರಾಮಾ ಕೇಳು ವೇಮಾ.!!

ಮನುಷ್ಯನಿಗೆ ಜನನವೂ ಅವನ ಕೈಯಲ್ಲಿಲ್ಲ,ಮರಣವೂ ಅವನ ಕೈಯಲಿಲ್ಲ. ಹೀಗಿದ್ದರೂ ಎಲ್ಲಾ ನಾನೇ ಮಾಡಿದ್ದೇನೆ ಎನ್ನುವ ಬಿಗುಮಾನ ಮಾತ್ರ ಅವನನ್ನು ಬಿಡುವುದೇ ಇಲ್ಲ…

ಕಾಶಿ ಕಾಶಿ ಎಂದು ಕಾತರಿಸಿ ಹೋಹರು !
ಅಲ್ಲಿ ಇರುವ ದೇವ ಇಲ್ಲಿಲ್ಲವೇ ?
ಇರುವನಲ್ಲಿ ಇಲ್ಲಿ ಇರಲು ಶುದ್ಧ ಹೃದಯ !
*ವಿಶ್ವದಾಭಿರಾಮಾ ಕೇಳು ವೇಮಾ !
“ತನಗೆ ಪ್ರಾಪ್ತಿಯಿರದೆ ದಾನವ ದೊರೆಯದು
ದೈವನಿಂದೆ ಹುಚ್ಚು ತನವು ತಾನೆ ?
ಕರ್ಮ ಜೀವಿಗಳೆಲ್ಲ ಕರ್ಮವಂ ಅರಿಯರು
ವಿಶ್ವಧಾಭಿ ರಾಮ ಕೇಳು ವೇಮಾ”

ಪ್ರಾಪ್ತಿಯಿದ್ದಲ್ಲಿ ಮಾತ್ರ ದಾನ ಸಿಗುವುದು. ಅದು ಇಲ್ಲದಿದ್ದಲ್ಲಿ ದಾನ ಸಿಗದು.ದಾನ ಸಿಗಲಿಲ್ಲವೆಂದು ಮೂರ್ಖರು ದೈವವನ್ನು ದೂರುವುರು ಇದು ಹುಚ್ಚುತನ.ಇದನ್ನು ಕರ್ಮಜೀವಿಗಳು ತಿಳಿಯಲಾರರು..

ಅಡವಿ ತಿರುಗಲುಸಿಗನು ಆಗಸದೊಳಿಲ್ಲ.
ಅವನಿ ತೀರ್ಥ ಯಾತ್ರೆ ಮಾಡಿದೊಳಿಲ್ಲ.
ಒಡಲ ಶುದ್ಧಿ ಮಾಡಿ ಒಡೆಯನ ಕಾಣಿರೋ…
ವಿಶ್ವಧಾಭಿ ರಾಮ ಕೇಳೋ ವೇಮಾ”

ಮನಸ್ಸನ್ನು ಶುದ್ಧಿ ಮಾಡಿಕೊಂಡು ಜಗದೊಡೆಯನನ್ನು ಕಾಣಿರೋ…ಎಂದು ಹೇಳುತ್ತ ಸಮಾಜಕ್ಕೆ ಸಂದೇಶ ನೀಡಿದ್ದಾರೆ..

ಅವರ ಕೃತಿ”ವೇಮನ ಶತಕಲು”ಎಂದು ಕರೆಯಲಾಗುತ್ತಿದ್ದು,ಸಿ.ಪಿ.ಬ್ರೌನ್ ವೇಮನರ ಕವನಗಳನ್ನು 19 ನೆಯ ಶತಮಾನದಲ್ಲಿ ಸಂಗ್ರಹಿಸಿ ಪ್ರಕಟಿಸಿದ್ದಾರೆ.

ವೇಮನ ಸಾಹಿತ್ಯವು ಮನಸ್ಸಿಗೆ ಸಂತೋಷವನ್ನು ನೀಡುತ್ತವೆ. ಜೀವನದಲ್ಲಿ ಪ್ರತಿಕೂಲ ಪ್ರಸಂಗ ಬಂದಾಗ ಅವರ ಕವಿತೆಗಳು ಸಾಂತ್ವನ ಹೇಳುತ್ತವೆ. ಸಮಾಜದಲ್ಲಿ ದಿನನಿತ್ಯ ನಡೆಯುವ ಜಾತಿ ಸಂಘರ್ಷ, ಮೇಲು-ಕೀಳುಗಳ ತಾರತಮ್ಯ, ನೋವು ಕ್ರೌರ್ಯಗಳಿಗೆ ವೇಮನರ ಸಾಹಿತ್ಯದಲ್ಲಿ ಉತ್ತರವಿದೆ. ಹಣ, ಆಸ್ತಿ ,ಕಾಮ, ಹಿಂಸೆಗಳಿಂದ ನಮ್ಮ ಕೌಟುಂಬಿಕ ವ್ಯವಸ್ಥೆ ಅಸ್ತವ್ಯಸ್ತವಾಗುವ ರೂಢಿಗತ ಶೋಷಣೆಯನ್ನು ವೇಮನರು ಧಿಕ್ಕರಿಸಿದ್ದಾರೆ.. ಎಲ್ಲಾ ಕಾಲಘಟ್ಟಕ್ಕೂ ಅನ್ವಯಿಸುವಂತೆ ವೇಮನರೂ ಕಾವ್ಯವನ್ನು ಬರೆದಿದ್ದಾರೆ. ತಪ್ಪು ಮಾಡುವವರಿಗೆ ಎಚ್ಚರಿಸಿದ್ದಾರೆ.. ಆದ್ದರಿಂದ ಅವರ ಕಾವ್ಯ ಎಲ್ಲ ಕಾಲಕ್ಕೂ ಎಲ್ಲ ಜನಾಂಗಕ್ಕೂಅನ್ವಯಿಸುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿರುವ ನ್ಯೂನ್ಯತೆಗಳನ್ನು ಎತ್ತಿ ತೋರಿಸುವುದಲ್ಲದೆ ಆ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಹೇಗೆ ಬದುಕಬೇಕೆಂದು ವೇಮನರ ಕವಿತೆಗಳು ನಮಗೆ ಮಾರ್ಗದರ್ಶನ ನೀಡುತ್ತವೆ..ಮೇಲು-ಕೀಳು,ಜಾತಿ ಪಧ್ಧತಿಯನ್ನು ಖಂಡಿಸಿ ಎಲ್ಲರೂ ಸಮಾನರು ಎಂದು ಸಾರಿದರು.
ಆಗಿನ ಕಾಲದಲ್ಲಿ ಸ್ಥಳೀಯರ ಅಸೂಯೆಯ ಮಧ್ಯಯು ವೇಮನರು ವಿಶ್ವಕವಿಯಾಗಿದ್ದರು.
ಅನಂತಪುರ ಜಿಲ್ಲೆಯ ಕದಿರು ತಾಲ್ಲೂಕಿನ ಕಟಾರುಪಲ್ಲಿಯಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದ ವೇಮನರು ಕ್ರಿ.ಶ.1480 ರಲ್ಲಿ ಐಕ್ಯರಾದರು.ಅವರ ಸಮಾಧಿ ಈಗಲೂ ಅಲ್ಲಿದೆ. ಅದೊಂದು ಪುಣ್ಯಕ್ಷೇತ್ರವಾಗಿ,ಶ್ರಧ್ದಾಕೇಂದ್ರವಾಗಿ ಮಾರ್ಪಟ್ಟಿದೆ.
ಸರಕಾರ ಪ್ರತಿ ವರ್ಷ ಎಲ್ಲ ಇಲಾಖೆಗಳಲ್ಲಿ ಜನವರಿ 19 ರಂದು ವೇಮನರ ಜಯಂತಿ ಆಚರಿಸಲು 2018ರಲ್ಲಿ ಆದೇಶಿಸಿದೆ.

ಇಂದು ನಾವೆಲ್ಲರೂ ಸಮಾಜದ ಒಳಿತಿಗಾಗಿ ಮುಂಬರುವ ಯುವ ಸಮುದಾಯಕ್ಕೆ ವೇಮನರ ಮೌಲ್ಯದ ನುಡಿಗಳು ಅವರ ಆದರ್ಶಗಳು ಮೈಗೂಡಿಸಿಕೊಂಡು ಬಾಳಿ‌ ಬದುಕೊಣ

ವೀರಂತರೆಡ್ಡಿ ಜಂಪಾ.
ಶಿಕ್ಷಕರು-ಸಾಹಿತಿಗಳು ಸ. ಪ.ಪೂ.ಕಾಲೇಜು ಬಾಲಕರ ಪ್ರೌಢಶಾಲೆ ಹುಮನಾಬಾದ.ಜಿ. ಬೀದರ

 

ಬೀದರ ಜಿಲ್ಲೆಯ ಸಾಹಿತಿಗಳು’ ಇಲ್ಲಿ ಕ್ಲಿಕ್ ಮಾಡಿ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *