Oplus_131072

               ಹಸಿರೇ ಉಸಿರು

ಮನುಜ ಸ್ವಾರ್ಥಕ್ಕೆ ಅರಣ್ಯ ನಾಶ ಮಾಡುವ
ಗಿಡ ಮರ ಕಡಿದು ಪರಿಸರ ಕಲ್ಮಶ ಮಾಡುವ
ಮಳೆ ಇಲ್ಲದೇ ಜೀವಜಲ ಉಂಟೆ
ಬೆಳೆ ಇಲ್ಲದೆ ಮನುಕುಲ ಉಂಟೆ.

ದಟ್ಟವಾದ ಹೊಗೆಯಿಂದ ವಾಯು ಮಾಲಿನ್ಯ
ಅಶಿಸ್ತಿನಿಂದ ಪರಿಸರಕ್ಕೆ ಸಂಚಕಾರ
ಹಸಿರು ನಿಸರ್ಗದ ಸೌಂದರ್ಯದ ಕೊಡುಗೆ
ನಮ್ಮ ಆರೋಗ್ಯದ ಕಡೆಗೆ.

ಶುದ್ಧ ವಾಯು ಶುದ್ಧ ಜಲ ನಮ್ಮ ಆರೋಗ್ಯಕ್ಕೆ ಹಿತಕರ
ಹಸಿರಿನ ಸಿರಿಯಿಂದ ಶುದ್ಧ ಉಸಿರು
ಇಲ್ಲ ಗಿಡ ಮರ ಬೆಳೆಸಿರಿ ಉಳಿಸಿ
ಹಸಿರೇ ಉಸಿರು.

ವಾಯುಮಾಲಿನ್ಯವ ನಿಯಂತ್ರಿಸೋಣ
ಗಿರಿ ಬನಗಳು ಸಂರಕ್ಷಿಸೋಣ
ನಾವೆಲ್ಲರೂ ಆರೋಗ್ಯವಂತರಾಗಿ ಬಾಳೋಣ
ಎಲ್ಲರೂ ಜೀವ ಜಲಕ್ಕಾಗಿ ದುಡಿಯೋಣ.

ಪ್ರತಿ ಮನೆ ಮುಂದೆ ಒಂದು ಗಿಡ ಹಾಕಿ ಬೆಳೆಸೋಣ.
ಅದ ಮಗುವಂತೆ ಪೋಷಿಸೋಣ.
ಸಾಲು ಸಾಲುಮರ ನೆಡೋಣ.
ಸಾಲುಮರದ ತಿಮ್ಮಕ್ಕನ ಕನಸು ನನಸಾಗಿಸೋಣ.
ನಮ್ಮ ದೇಶವನ್ನು ಆರೋಗ್ಯವಂತ ದೇಶವನ್ನಾಗಿ ಮಾಡೋಣ.

ಸುಶೀಲ ಬಸವರಾಜ
ಪ್ರಾಧ್ಯಾಪಕರು
ದಾವಣಗೆರೆ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *