ಹೊಸ ದಿನಚರಿ.
ಉರುಳಿತು ಕಾಲ ಚಕ್ರ
ಕಳೆದದ್ದು ದಿನಚರಿ ಮಾತ್ರ
ಆಸೆ ಆಕಾಂಕ್ಷೆಗಳ ಹೊತ್ತು
ಬಂದಿತು ಹೊಸ ದಿನಚರಿ ಹತ್ರ.
ನೋವು ನಲಿವುಗಳು ಬೆನ್ನಟ್ಟಿ
ನೆನಪುಗಳ ಬುತ್ತಿ ಕಟ್ಟಿ
ಸಾಗಲೇ ಬೇಕು ನಾವುಗಳು
ಸಮಾಧಾನದ ಕಟ್ಟೆ ಕಟ್ಟಿ .
ನಿತ್ಯವೂ ಅದೇ ಮನನ
ಹೊಸತನ ಎನ್ನುವ ಕಾನನ
ನಡೆವಾಗ ಮತ್ತದೆ ತಲ್ಲಣ
ಭರವಸೆ ಒಂದೇ ಜೀವನ.
ನಲಿವಿನ ನಾಳೆಯ ಗೆಳೆಯ
ಹರಿಸಲಿ ಪ್ರೀತಿಯ ಹೊಳೆಯ
ಮುಳುಗಿ ತೇಲಿ ಮೇಲೆದ್ದು
ಬರೆಯೋಣ ಹೊಸ ಆಶಯ .
ಒಳಿತು ಕೆಡುಕುಗಳ ಸ್ಮರಿಸಿ
ಸತ್ಪಲಗಳ ಸೋಸಿ ಆರಿಸಿ
ಜೀವನ ಪಾಠದಿ ಹರಿಸಿ
ತುಂಬು ಜೀವನ ನಡೆಸಿ.
–ಡಾ.ಮಹೇಂದ್ರ ಕುರ್ಡಿ.
ನಕ್ಕರದುವೆ ಸ್ವರ್ಗ.
ನಗಬೇಕು ಮನವರಳಿಸಿ
ನವ ಬಾಳಿಗೆ ಹರ್ಷ ಬಯಸಿ
ಬಯಕೆಯ ತೊಟ್ಟಿಲ ತೂಗಿಸಿ
ಮನದ ಚಿಂತೆಯ ಅಳಸಿ
ಮುನಿಸೇತಕೆ ಮನಬಿಚ್ಚಿ ನಗಬಾರದೆ
ಚಿಂತೆಯೇತಕೆ ರಾತ್ರಿ ಕಳೆದು ಹಗಲಾಗದೆ
ದುಗುಡವೇತಕೆ ಕಪ್ಪು ಮೋಡ ಮಳೆ ಸುರಿಸದೆ
ಕೊರತೆಯೇನಿದೆ ಪ್ರಕೃತಿ ಸಹಾಯಮಾಡದೆ.
ಮುಚ್ಚಿಬಿಡು ದು:ಖದ ಬಾಗಿಲು
ತೆರೆದಿಡು ಆನಂದದ ಹೆಬ್ಬಾಗಿಲು
ಇರುವಷ್ಟು ದಿನ ನಗುನಗುತಿರು
ಜೀವನವನು ಸಂಭ್ರಮಿಸುತಿರು
ಮನದ ರೋಗಕೆ ನಗು ಮದ್ದು
ನಗತಿದ್ದರೆ ನೀ ಎಲ್ಲರಿಗೂ ಆಗುವೆ ಮುದ್ದು
ನೀ ನಗುತ್ತಿದ್ದರೆ ನಿನ್ನ ವೈರಿಗದುವೆ ಗುದ್ದು
ನೀನಾಗ ಬರಬಹುದು ಎಲ್ಲರ ಮನಗೆದ್ದು
ನಕ್ಕರದುವೆ ಸ್ವರ್ಗ ಸ್ವರ್ಗ ಪಡೆವ ಪಯಣ
ಅಳುವ ನುಂಗಿ ನಗುತಿರು ನಗುವೆ ಭೂಷಣ
ತುಟಿಕಚ್ಚಿ ಹಿಡಿಯದೆ ಬಿಚ್ಚಿ ನಗು ಸಂಪೂರ್ಣ
ಆಗ ಬಾಳು ಎಂದಿಗೂ ಆಗದು ಸಂಕೀರ್ಣ.
– ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ.ಗದಗ.