Oplus_131072

ಪೇಪರ್ ಹುಡುಗನ ಕಥೆ

– ವಿಜಯಕುಮಾರ ಚಟ್ಟಿ.

ಒಂದು ಊರಿನಲ್ಲಿ ಬಸ್ ಸ್ಟಾಂಡ್ ಹತ್ತಿರದಲ್ಲಿ ಬುಕ್ ಸ್ಟಾಲ್ ಅಂಗಡಿ ಒಳಗೆ ವಿದ್ಯಾರ್ಥಿಗಳು ಬಹಳ ವ್ಯಾಪಾರ ಮಾಡ್ತಿದ್ದರು ಅಲ್ಲಿ ಒಬ್ಬ ಪೇಪರ್ ಹುಡುಗ ಇದ್ದನು. ಅವನ ಹೆಸರು ಶಂಕರ್ ಅಂತ.
ಆ ಅಂಗಡಿಯೊಳಗೆ ಹುಡುಗ ನಿಷ್ಠಾವಂತನಾಗಿ ಕಾಯಕ ಮಾಡುತ್ತಿದ್ದನು .
ಅಲ್ಲಿಗೆ ಹೋದ ಒಂದು ದಿನ ನಾನು ಅಂಗಡಿಯ ಮಾಲೀಕರ ಜೊತೆಯಲ್ಲಿ ಟೀ ಕಾಫಿ ಕುಡಿತಿದ್ದೆ. ಆ ಸಮಯದಲ್ಲಿ ಪೇಪರ ಮಾರುವ ಆ ಹುಡುಗ ಅಂಗಡಿ ಒಳಗೆ ಬಂದಿದ್ದನು.
ಆ ಅಂಗಡಿಯ ಮಾಲೀಕರು ಆ ಪೇಪರ್ ಹುಡುಗನಿಗೆ ನನ್ನ ಕುರಿತು ಪರಿಚಯ ಮಾಡಿ ಹೀಗೆ ಹೇಳಿದರು. “ಲೋ ಗುಂಡಾ, ಇವರು ಸಾಹಿತಿಗಳು ಮತ್ತು ನನ್ನ ಸ್ನೇಹಿತರು ಇವರಿಗೆ ಪ್ರತಿದಿನ ಅವರ ಮನೆಗೆ ಹೋಗಿ ಪೇಪರ್ ಹಾಕಬೇಕು” ಅಂತ ಸಲಹೆ ಕೊಟ್ಟರು.

ಮರುದಿನ ಬೆಳಿಗ್ಗೆ ಪೇಪರ್ ಆ ಹುಡುಗ ನಮ್ಮ ಓಣಿಯಲ್ಲಿ ಪೇಪರ್ ಹಾಕಲು ಬಂದಾಗ ನಾನು ವಾಕಿಂಗ್ ಹೋಗುತ್ತಿದ್ದೆ ಆತ ನನಗೆ ನೋಡಿ ” ಎಲ್ಲಿ ಸರ್ ನಿಮ್ಮ ಮನೆ ? ಸಿಗುತ್ತಾ ಇಲ್ಲ . ಪ್ಲೀಸ್ ದಯವಿಟ್ಟು ನಿಮ್ಮ ಮನೆ ತೋರಿಸಿಬಿಡಿ” ಎಂದಾಗ ನಾನು
“ಹೇ ಹುಡುಗ ! ನಮ್ಮ ಮನೆ ವೈಕುಂಠ ಮನೆಯಲ್ಲಿ ಇದೆ” ಎಂದೆ.
” ವೈಕುಂಠ ಎಲ್ಲಿದೆ ಸರ್ ?”

“ಹೇ ಹುಡುಗ ! ವೈಕುಂಠ ಹೋಗುತ್ತೀಯಾ ನೀನು ?

“ಹೌದು ಸರ್ !
“ಹೇ ಹುಡುಗ !
ನೀನು ಟೂ ವೀಲರ್ ಗಾಡಿ ಚಲಿಸುವಾಗ ಎರಡು ಕೈಯ ಬಿಟ್ಟು ನೀನು ಚಲಿಸಿ ನೋಡು”

” ಅಯ್ಯೋ ಸರ್ !
ವೈಕುಂಠ ಬ್ಯಾಡ ನಿಮ್ಮ ಮನೆ ಬ್ಯಾಡ ಸರ್ “ಎಂದು ಹೊರಟ.

“ಹೇ ಹುಡುಗ ! ವೈಕುಂಠ ಹತ್ತಿರ ನಮ್ಮ ಮನೆಯಲ್ಲಿ ಪೇಪರ ಹಾಕಬೇಕು. ಇಲ್ಲವಾದರೆ ನಾನು ನಿನ್ನ ಮಾಲಿಕನಿಗೆ ಹೇಳುತ್ತೇನೆ” ಎಂದಾಗ.

” ಬೇಡ ಸರ್. ನಮ್ಮ ಮಾಲಕರಿಗೆ ಹೇಳಬೇಡಿ ಸರ್. ಪ್ಲೀಸ್. ನಿಮ್ಮ ಮಾತು ಕೇಳ್ತೇನೆ.”ಎಂದ

“ಹೇ ಹುಡುಗ ! ನಮ್ಮ ಮನೆ ಅಡ್ರೆಸ್ ಹೇಳುತ್ತೇನೆ . ನನ್ನ ಜೊತೆಯಲ್ಲಿ ಬಾ . ಇದು ವೈಕುಂಠ ಶ್ರೀನಿವಾಸರ ದೇವಾಲಯದ ಪಕ್ಕದಲ್ಲಿ ನಮ್ಮ ಮನೆ ಗೊತ್ತಾಯ್ತಾ ? ” ಎಂದು ಅವನಿಗೆ ನಮ್ಮ ಮನೆ ತೊರಿಸಿದೆ.

ಹುಡುಗ ಹೀಗೆ ಪ್ರತಿದಿನ ನಮ್ಮ ಮನೆಗೆ ಪೇಪರ್ ಹಾಕುವಾಗ ಪಕ್ಕದ ಮನೆಯ ಒಂದು ಹುಡುಗಿಗೆ ಪರಿಚಯ ಮಾಡಿಕೊಂಡಿದ.

ಕೆಲ ದಿನಗಳ ನಂತರ ಆತ ಆ ಹುಡುಗಿಯೊಂದಿಗೆ ಪ್ರೀತಿ ಪ್ರೇಮ ಪ್ರಣಯದಲ್ಲಿ ಮುಳುಗಿದ. ಆ ಹುಡುಗಿಯೊಂದಿಗೆ ನಗರದ ಉದ್ಯಾನ ವನಗಳಲ್ಲಿ ಸುತ್ತಾಡಿದ. ಅಲ್ಲಿ ಅವರು ಪ್ರೀತಿ ಪ್ರೇಮ ಪಿಸು ಮಾತುಗಳು ಹಂಚಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಒಂದು ದಿನ ಹುಡುಗಿಯ ಅಪ್ಪ ವಾಯು ವಿಹಾರಕ್ಕೆಂದು ಬಂದಾಗ ಇವರಿಬ್ಬರೂ ಪ್ರೇಮದ ಜೋಡಿ ಹಕ್ಕಿಗಳ ತರಹ ಪ್ರೀತಿ ಪ್ರೇಮದೊಂದಿಗೆ ಸಿಹಿ ಮುತ್ತನ ಚುಂಬನದೊಂದಿಗೆ ಮೈ ಮರೆತು ಪ್ರೀತಿಯ ನಿಶೆಯಲ್ಲಿ ತೆಲಾಡುತ್ತಿರುವಾಗ ಆ ಹುಡುಗಿ ತಂದೆ ನೋಡಿಯು ನೋಡದಂತೆ ಅಲ್ಲಿಂದ ತಮ್ಮ ಮನೆಗೆ ಹೊರಟು ಹೋದರು.

ಆದರೆ ಪೇಪರ್ ಹುಡುಗ ಆ ಹುಡುಗಿಯೊಂದಿಗೆ ಮುಂಬೈಗೆ ಪ್ರಯಾಣ ಮಾಡಿದ. ಹುಡುಗಿಯ ತಂದೆ ನನ್ನ ಮಗಳು ರಾತ್ರಿ ವೇಳೆ ಮನೆಗೆ ಬಂದಿಲ್ಲ ಎಂದು ದುಃಖ ಪಡುತ್ತಿದ್ದರು .
ಆ ಕ್ಷಣದಲ್ಲಿ ಅವನು ಪೊಲೀಸ್ ಸ್ಟೇಷನ್ ಗೆ ಕಂಪ್ಲೆಟ್ ಕೊಟ್ಟು ಮನೆಗೆ ಬಂದನು.

ಮರುದಿನ ಬೆಳಿಗ್ಗೆ ಎಲ್ಲ ಪತ್ರಿಕೆಗಳಲ್ಲಿ
ಪೊಲೀಸರ ಸೂಚನೆ ಪ್ರಕಟಣೆಯಾಗಿತ್ತು. ಅದೇನೆಂದರೆ ” ಇಬ್ಬರು ಪ್ರೇಮದ ಜೋಡಿಹಕ್ಕಿಗಳು ಪಾರಾಗಿದ್ದಾರೆ ಇವರೆಲ್ಲಾದರೂ ಸಿಕ್ಕರೆ ಸಂಪರ್ಕಿಸಿ ” ಅಂತ ಕನ್ನಡ ಹಿಂದಿ ಮರಾಠಿ ಪತ್ರಿಕೆಗಳಲ್ಲಿ ಪ್ರಕಟಿಸಿದರು. ಈ ಸುದ್ದಿ ನೋಡಿದ ಮುಂಬೈ ಪೋಲಿಸುವರು ಅವರನ್ನು ಹುಡುಕುವ ಕಾರ್ಯ ಚುರುಕುಗೊಳಿಸಿದರು.
ಇದನ್ನು ತಿಳಿದ ಆ ಪ್ರೇಮಿಗಳು ಹೇದರಿ ಮುಂಬೈ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದರು.

ಕೆಲ ಸಮಯದ ನಂತರ ಲಾಡ್ಜ್ ವೊಂದರ ಮಾಲೀಕರು ಇವರ ಹೆಣವನ್ನು ಪೊಲೀಸರಿಗೆ ಒಪ್ಪಿಸಿದರು.
ಆ ಕ್ಷಣದಲ್ಲಿ ಹುಡುಗಿ ಅಪ್ಪನಿಗೆ ನಿನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಎಂದು ಪೊಲೀಸರು ತಿಳಿಸಿದರು.
ಈ ಸುದ್ದಿ ತಿಳಿಯುತಿದ್ದಂತೆ ಹುಡುಗಿಯ ತಂದೆಗೆ ಬರ ಸಿಡಿಲು ಬಡಿದಂತಾಗಿ ನೆಲಕ್ಕೆ ಕುಸಿದನು.

– ವಿಜಯಕುಮಾರ ಚಟ್ಟಿ .
ತಾ. ಹುಮನಾಬಾದ ಜಿ.ಬೀದರ
ಮೊ. 9141949392

ಲೇಖಕರ ಪರಿಚಯ:

ವಿಜಯಕುಮಾರ ಚಟ್ಟಿ.

ವಿಜಯಕುಮಾರ ಚಟ್ಟಿ ಯವರು ಬೀದರ ಜಿಲ್ಲೆ ಹುಮನಾಬಾದಿನವರು. ಬಿ.ಕಾಂ.ಪದವಿಧರರು.  ಹುಮನಾಬಾದ‌ ನಗರದ ಬೋಧಿವೃಕ್ಷ ಪದವಿ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಇವರು ಬರೆದ ಕತೆ ಕವನ ಲೇಖನಗಳು ನಾಡಿನಾದ್ಯಂತ ಕೆಲ ಪತ್ರಿಕೆಗಳಲ್ಲಿ ಮತ್ತು ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *