ಮದುವೆಯೆಂಬುದು ಆಟವೇ ?
ಜಾತಿ ಹತ್ತು ಹಲವು ಇದ್ದರೂ
ಎರಡು ಅಕ್ಷರಗಳ ಎರಡು ಜಾತಿಗಳು ಒಂದು ಗಂಡು ಇನ್ನೊಂದು ಹೆಣ್ಣು ಇರುವುದು
ಗಂಡು ಹೆಣ್ಣಿಗೆ ಒಲವು ತೋರಿ
ಹೆಣ್ಣು ಗಂಡಿಗೆ ಪ್ರೀತಿ ತೋರಿ
ಒಂದಾಗಿ ಸೇರಿ ಕೊಂಡು
ಪ್ರೀತಿ ಪ್ರೇಮದಿಂದ ಕೂಡಿ
ಬಾಳು ಬಂಗಾರವೆಂದು
ನಾನು -ನೀನು ,ನೀನು- ನಾನು
ಎಂದು ಜಾತಿಗಳು ಮೀರಿ ಮದುವೆಯಾದರು.
ವಾಸ್ತವಿಕ ಬದುಕು ಒಂದಾಗದೆ ನೆಮ್ಮದಿಯಾಗಿ ಬದುಕದೆ
ಕೋರ್ಟ್ ಕಚೇರಿಗಳಿಗೆ ಲಗ್ಗೆಹಾಕಿ
ವಿಚ್ಛೇದನ ಪಡೆಯಲು ಅರ್ಜಿ ಹಾಕಿ
ಬಲ್ಲ ಕಲಹಗಳ ನಿರ್ಮಿಸಿ
ಸಂಬಂಧ ಸೇತುವೆ ಸಂಪರ್ಕ ಕಡಿದು
ಇಬ್ಬರ ನಡುವೆ ಹೊಂದಾಣಿಕೆ ಇಲ್ಲದೆ
ವೈವಾಹಿಕ ಸಂಬಂಧಗಳು
ಅದೇಷ್ಟೋ ಲೆಕ್ಕವಿಲ್ಲದೆ.ಕುಟುಂಬಗಳು ಮುರಿದುಹೋಗಿವೆ !
ಅವಳ್ವೊಂದು ನಗುವಿಗೆ ಸೋತು
ಅವನ ಮಾತಿಗೆ ಮರುಳಾಗಿ ಒಬ್ಬರನ್ನೊಬ್ಬರು ಒಂದಾಗಿ
ಪ್ರೇಮಾ ಮಜನೂ ಲೈಲಾಗಳಾಗಿ
ಕೆಲ ದಿನಗಳೇ ಕಳೆದರೂ
ಒಬ್ಬರನ್ನೊಬ್ಬರು ವೈಮನಸ್ಸು ತಾಳಿ ನರಳುವರು
ದಿನವಿಡೀ ಪರದಾಟ ತೂರಾಟ ನಡೆದಿರುವುದು ಹೋರಾಟ
ಇದರಿಂದ ಮದುವೆಯ ಕೂಟ
ಬಂಧ, ಸಂಬಂಧಗಳು ಮುರಿದುಹೋಗಿವೆ
ಮದುವೆ ಎಂಬುದು
ಈಗ ಬರಿ ಆಟವೇ ?
–ಸಂಗಮೇಶ್ವರ ಎಸ್. ಮುರ್ಕೆ ಹೊಳೆಸಮುದ್ರ
ತಾಲೂಕು ಕಮಲನಗರ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು
ಕವಿ ಪರಿಚಯ:

ಸಂಗಮೇಶ್ವರ ಮುರ್ಕೆ ಯವರು ಬೀದರ ಜಿಲ್ಲೆ ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ವರು. ಬಿ,ಎ, ಡಿ.ಇಡಿ, ಪದವಿಧರರಾಗಿದ್ದು ಸದ್ಯ ಕೃಷಿಯಲ್ಲಿ ತೊಡಗಿದ್ದಾರೆ. ‘ಶ್ರೀ ಸುಕ್ಷೇತ್ರ ಭಕ್ತ ಮುಡಿ ತಪೋವನ’, “ಸಂತ ಶ್ರೀ ಹರಿನಾಥ ಚರಿತ್ರೆ’, ‘ಸಾಧಕರು’ (ವ್ಯಕ್ತಿ ಚಿತ್ರ) ‘ಹನಿ ಹನಿ ಜೇನ ಹನಿ‘ (ಹನಿಗವನ ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಕನ್ನಡ ಮರಾಠಿ ಹಿಂದಿ ಈ ಮೂರು ಭಾಷೆಗಳಲ್ಲಿ ತುಂಬ ಪಾಂಡಿತ್ಯ ಹೊಂದಿರುವ ಇವರು ಗ್ರಾಮದ ಮರಾಠಿ ಸಾಹಿತಿ, ಅನಂತ ಚಂಪಾಯಿ ಮಾಧವ ಕದಂ ‘ ಅವರೊಂದಿಗೆ ಸೇರಿ ‘ಶ್ರೀ ಸದ್ಗುರು ಹರಿನಾಥ ಮಹಾರಾಜ ಯಾತ್ರಾ ವಿಶೇಷಾಂಕ‘ ಎಂಬ ಕೃತಿ ಸಂಪಾದಿಸಿದ್ದಾರೆ. ಇವರ ಬರಹಗಳು ನಾಡಿನಾದ್ಯಂತ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.