Oplus_131072

ಸಂವಿಧಾನ ಶಿಲ್ಪಿ.

  ಸಂವಿಧಾನ ಶಿಲ್ಪಿ ಭೀಮ ದೇವರು.                    ದೇಶಕ್ಕೆ ಹೆಸರಾಯಿತು ನಿನ್ನ ಹೆಸರು ಅಮರ                         (ಪ)

ಹಲವು ಧರ್ಮವ ತಿಳಿದಿ ಪೂರ, ವಿಶ್ವ ಘಟನಾ ಓದಿದಿ ಮಹಾ ಶೂರ, ಭಾರತದ ಭವನ ಅರಿತ ಧೀರ ಶ್ರೇಷ್ಠ ಘಟನಾ ಬರದಿ ಮಹಾವೀರ. [1]

ಸಂವಿಧಾನ ರಚನಾ ಸಮಿತಿಯ ಧೀರ, ಕರುಡು ಸಮಿತಿಗೆ ಆದರು ಅಧ್ಯಕ್ಷರು, ಸಮಾನತೆಯ ತತ್ವ ಹಿಡಿದ ದಲಿತ ಜನಕ್ಕೆಲ್ಲ ಉದ್ಧಾರ ಮಾಡಿದರು [2]

ಹಗಲಿರುಳು ಬರೆದರು ಭೀಮ ದೇವರು, ಮೂರು ವರ್ಷ ಬರೆದು ಮುಗಿಸಿದರು, ಆರೋಗ್ಯದ ಗಮನ ಮರೆತರು ದೇಶದ ಜನಕ್ಕೆಲ್ಲ ಕಾನೂನು ತಿಳಿಸಿದ [3]

ಪ್ರಧಾನಿಗೆ ಘಟನೆ, ಒಂದೇ ಓಟು ಒಂದೇ ಮೌಲ್ಯ ಅಂದಿದಾರ, ದೇಶದಾಟ ಇದರಿಂದ ಪುರಾ, ಕೆಲವು ಜನರಿಗೆ ಕಷ್ಟ ಎಂದಿದ್ದರು. [4]

ಮಾತಿನಿಂದ ಕ್ರಾಂತಿ ಮಾಡಿದ ಧೀರ, ಕಾನೂನು ಮುರಿಯುವ ಜನರಿಂದ ಎಚ್ಚರ, ನಿತ್ಯ ನೆನೆಯಬೇಕು ಬಾಬಾಗೆ ಭಾರತ ಜನರ, ಬರೆದ ಶಿವನುಡಿಗೆ ಇರಲಿ ಮಮಕಾರ. [5]

– ಎಸ್.ಬಿ.ಕುಚಬಾಳ್.

ಕವಿ ಪರಿಚಯ:

ಎಸ್.ಬಿ.ಕುಚಬಾಳ್ ‘

ಸಾಹಿತಿ ಎಸ್.ಬಿ.ಕುಚಬಾಳ್ ‘ ರವರು ಮೂಲತಃ ‌ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ವರಾಗಿದ್ದು, ಇವರು ಶಿಕ್ಷಣ ಇಲಾಖೆಯ ಅಧಿಕಾರಿ ಯಾಗಿ ಸೇವೆ ಸಲ್ಲಿಸಿ ನಿವೃತ್ತ ರಾಗಿದ್ದಾರೆ. ಸದ್ಯ ಬೀದರದ ನಿವಾಸಿ. ಇವರು ‘ಜನಪದ ಜ್ಯೋತಿ, ‘ಭೀಮ ಕಿರಣ’, ‘ಸರ್ವ ಶಿಕ್ಷಣ ಅಭಿಯಾನ’, ‘ತಿಳಿದು ನಡಿರಿ ಇನ್ನ’, ‘ರೈತ ಚೂಡಾಮಣಿ’, (ಕವನ ಸಂಕಲನಗಳು) ‘ಅಚ್ಚು ಮೆಚ್ಚಿನ ಬಿಚ್ಚು ಹೂಗಳು’ (ಹನಿಗವನ ಸಂಕಲನ) ‘ಕಲಿಯುಗದ ಕಾಲೇಜಿನ ಹುಡಗಿ’ (ಕಾದಂಬರಿ) ‘ಜಾಗೃತಿ ಜೀವಿ ಪಂಚಶೀಲ ಗವಾಯಿ’ ಮತ್ತು ‘ಜಾನಪದ ದುಂದುಬಿ ಕುಚಬಾಳ’ (ತತ್ವಪದ) ಎಂಬ ಇತ್ಯಾದಿ ಕೃತಿಗಳು ಪ್ರಕಟಿಸಿದ್ದಾರೆ.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

One thought on “ಸಂವಿಧಾನ ಶಿಲ್ಪಿ.(ಕವಿತೆ)”
  1. ಸಂವಿಧಾನ ಶಿಲ್ಪಿ ಕವಿತೆ ಚನ್ನಾಗಿದೆ ಅಭಿನಂದನೆಗಳು

Leave a Reply

Your email address will not be published. Required fields are marked *