ಒಲವಿನ ದೀಪ
ಕತ್ತಲ ಮಡಿಲಲ್ಲಿ ಬೆಳಕಿನ ಸಿರಿಯುಓಟು
ದೇಗುಲಕ್ಕೆ ಕೈ ಮುಗಿಯೋಣ ಬನ್ನಿ
ಹಸಿರ ಉಸಿರುಟ್ಟು ಹಕ್ಕಿ ಹಾಡುತಾವ
ಜಗದ ಸೊಬಗ ನೋಡಬನ್ನಿ …
ಬನ್ನಿ…… ಬನ್ನಿ ಬನ್ನಿ…!
ತ್ಯಾಗದ ಮಹಿಮೆಗೆ ಜೋಗದ ಸಿರಿಬಂತು
ನೂರು ನೋವಿಗೂ ನಗೆ ಬೀರಿ ಬಾಳೋಣ
ಒಡಲ ಕಿಚ್ಚಿನ ಬೆಂಕಿ ಆರಿಸಿ
ಒಲವಿನ ದೀಪ ಹಚ್ಚೋಣ ಬನ್ನಿ..
ಬನ್ನಿ ಬನ್ನಿ ಬನ್ನಿ ಬನ್ನಿ…!!
ಹೆತ್ತ ಒಡಲಿನ ತುಂಬ ಮುತ್ತು ಸುರಿವ ಬನ್ನಿ
ಹಾಲುಂಡ ತವರ ನೆನೆಯೋಣ ಬನ್ನಿ
ಎದೆಯ ತುಂಬ ಉಕ್ಕಿ ಹರಿಯಲಿ ಪ್ರೀತಿ
ಹೊಸ ಯುಗಕ್ಕೆ ಮುನ್ನುಡಿ ಬರೆವ ಬನ್ನಿ…
ಬನ್ನಿ ! ಬನ್ನಿ !! ಬನ್ನಿ !!!
ಅಶೋಕ ಎಂ. ಬಿ.
ಕವಿ / ಕಲಾವಿದ
ಜವಾಹರ ನವೋದಯ ವಿದ್ಯಾಲಯ. ದಕ್ಷಿಣ ಕನ್ನಡ