ಓ ವಿಧಿಯೇ ನೀನೆಷ್ಟು ಕ್ರೂರಿ ?
ರೆಕ್ಕೆ ಬಲಿಯುವ ಮುನ್ನ ತಂದೆಯ ಕಿತ್ತುಕೊಂಡೆ,
ಬೆನ್ನಬಿದ್ದವರ ಭಾರ ಹೆಗಲಲ್ಲಿ ಹೊತ್ತುಕೊಂಡೆ,
ಆದರೂ ಮನವ ಮಾಡಿದೆ ಕಲ್ಲು ಬಂಡೆ,
ಇಂದೇಕೆ ಹೀಗಾಯ್ತು?
ಓ ವಿಧಿಯೇ ನೀನೆಷ್ಟು ಕ್ರೂರಿ!
ಜೇನುಗೂಡಿನ ಕನಸು ಕಂಡಿದ್ದೆ ಅಂದು,
ಒಂದಾಗಿ ಬಾಳುವ ಆಸೆ ನುಚ್ಚು ನೂರಾಯಿತಿಂದು,
ಮಡಿಲಲ್ಲಿ ಸಾಕಿ ಬೆಳೆಸಿದ್ದ ಕೂಸುಗಳಿಂದು,
ಒಡಲನ್ನು ಒದ್ದು ಮುಂದೆ ಸಾಗುತಿಹರಿಂದು,
ಓ ವಿಧಿಯೇ ನೀನೆಷ್ಟು ಕ್ರೂರಿ!
ತಾಯಿಗಾಗಿ ಸವದಿಹ ದೇಹ,
ತಾಯಿಗಾಗಿ ಮಿಡಿದಿಹ ಹೃದಯ,
ತಾಯ ಪ್ರೀತಿಯ ಬಯಸಿದ ಜೀವ,
ತಾಯಿ ಇದ್ದರೂ ತಬ್ಬಲಿಯಾಗಿದೆ,
ಯಾರ ಬಳಿ ಹೇಳಲಿ ನೋವಾ?
ಓ ವಿಧಿಯೇ ನೀನ್ ಎಷ್ಟು ಕ್ರೂರಿ!
ಕಮಲ ಜಯರಾಮ್
ಸಹಶಿಕ್ಷಕರು
ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ಮೂರ್ಜೆ ದಕ್ಷಿಣ ಕನ್ನಡ