ಕ್ಷಮಿಸಿ ನಾ ಹೋಗಿ ಬರುವೆ
ಉಳ್ಳವರ ಮುಂದೆ..
ಬಡವನ ಹಣೆಬರಹ ಅಳುತ್ತಿದೆ
ಕೋಪ ತಾಪಗಳಿಂದ ಕೊರಗಿ
ಮನಸು ಖಿನ್ನವಾಗಿದೆ!
ಜೀವನದ ಹೋರಾಟದಲ್ಲಿ
ಗೆದ್ದಾಗಿದೆ ಗೆದ್ದು ಸೋತಾಗಿದೆ
ಹಣೆಬರಹ ಕೆಟ್ಟುಹೋಗಿ
ಬದುಕು ಸೂತಕ ವಾಗಿದೆ!
ಆಸ್ತಿ ಅಂತಸ್ತಿನ ಅಮಲಿನಲ್ಲಿ
ಕರುಣೆ ಪ್ರೀತಿ ಮರೆಯಾಗಿದೆ
ದ್ವೇಷ ಅಸೂಯೆ ಜ್ವಾಲೆಯಿಂದ
ತಾಳ್ಮೆ ಸಹನೆ ಸುಟ್ಟು ಹೋಗಿದೆ!
ನೂರು ಚಿಂತೆಯು ಕಾಡಿ
ಚಿತೆಯೆರಲು ಬಯಸುತ್ತಿದೆ
ಹಣವಂತರ ಜಗವಿದು ನಿನ್ನದಲ್ಲ ಜಗ ತೊರೆಯನ್ನುತ್ತಿದೆ!
ಹುಟ್ಟು ಅನಿಶ್ಚಿತ ಸಾವು ಖಚಿತ
ನನ್ನ ಆಟ ಮುಗಿದಾಗಿದೆ
ಭಗವಂತ ಕರೆದಾಗಿದೆ
ಕ್ಷಮಿಸಿ ಹೋಗಿ ಬರುವೆ.
– ಓಂಕಾರ ಪಾಟೀಲ.ಬೀದರ
(ನಿರ್ದೇಶಕ ಗುರುಪ್ರಸಾದರವರ ಜೀವನದ ದುರಂತವನ್ನು ಕಂಡು ಬರೆದ ಕವನ.)