Oplus_131072

ಕನಕ

ನನಗೇಕೆ ಬೇಕು ಧನ ಕನಕ
ನಿನ್ನ ಕೃಪೆ ಇರಲಿ ನನಗೆ ಕನಕ
ದಾಸರ ದಾಸ ಶ್ರೀ ಕೃಷ್ಣನ ಸೇವಕ
ನಿಮಗಿತ್ತು ಹರಿಯನು ಸೇರುವ ತವಕ//

ಬಾಡ ಗ್ರಾಮದಲಿ ಜನಿಸಿ
ಕಾಗಿನೆಲೆಯಲ್ಲಿ ನೀ ನೆಲಸಿ
ಆದಿಕೇಶವರಾಯರ ಸೇವಿಸಿ
ಹರಿದಾಸರಾದಿರಿ ಈ ಭೂಮಿಗವತರಿಸಿ//

ಬೀರಮ್ಮ ಬಚ್ಚಮ್ಮ ರ ಪ್ರೇಮದ ಸುತ
ಕರುನಾಡ ಕಂಡ ಅದ್ಭುತ ಹರಿ ಸಂತ
ಹತ್ತು ಹಲವು ಕೀರ್ತನೆಗಳನು ರಚಿಸುತ
ಬೆಳೆಸಿದಿರಿ ಕನ್ನಡ ಸಾಹಿತ್ಯ ಲೋಕ ಸಾರಸ್ವತ //

ವ್ಯಾಸರಾಯರ ಪರಮ ಶಿಷ್ಯ
ಅರಿವಿತ್ತು ಅವರಿಗೂ ನಿಮ್ಮೊಳಗಿನ ವಿಷ್ಯ /
ಸ್ವರ್ಗ ಕ್ಕೆ ನಾನು ಹೋದರೆ ಹೋದೇನು ಎಂದಿರಿ/
ನಿಮ್ಮ ನುಡಿಯಿಂದ ಗುರು ಚಕಿತರಾಗುವಂತೆ ಮಾಡಿದಿರಿ//

ಏನಿದ್ದರೇನು ಎಷ್ಟಿದ್ದರೇನು
ನಿಮ್ಮ ಸ್ಮರಣೆ ಒಂದು ಸಾಕು/
ನಿಮ್ಮ ಚರಣದಡಿಯಲ್ಲಿ ನಾನು ಧೂಳಾದರೆ ಸಾಕು/
ಎಷ್ಟು ಜನ್ಮಗಳನು ಹೊತ್ತು ತಿರುಗಿದರೇನು? ಬಂತು
ಮುಕ್ತಿ ಮಂಟಪದೊಳಗೆ ಜಾಗ ವಿದ್ದರೆ ಸಾಕು //

ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ.ಗದಗ

 

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *