Oplus_131072

ಸರಳ ಸಜ್ಜನಿಕೆಯ ಸಾಹಿತಿ -ವೀರಶೆಟ್ಟಿ ಭಾವುಗೆ

ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಕತೆ ಕವನ,ಲೇಖನ ಆಧುನಿಕ ವಚನ, ಜೀವನ ಚರಿತ್ರೆ ಸೇರಿದಂತೆ ಮೊದಲಾದ ಪುಸ್ತಕಗಳನ್ನು ಪ್ರಕಟಿಸಿ ಸೃಜನಶೀಲ ಕವಿ,ಸಾಹಿತಿಯಾಗಿ ಗುರುತಿಸಿಕೊಂಡವರೆಂದರೆ ವೀರಶೆಟ್ಟಿ ಭಾವುಗೆಯವರು.
ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಧನ್ನೂರಾ (ಎಸ್) ಗ್ರಾಮದ ಪ್ರಭುಶೆಟ್ಟಿ ಮತ್ತು ಸುಶೀಲಾಬಾಯಿ ದಂಪತಿಗಳಿಗೆ ದಿನಾಂಕ 1-6-1961 ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್ .ಎಂ.ಎಡ್. ಪದವಿಧರರಾದ ಇವರು 1982 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಗಣೇಶಪೂರವಾಡಿ,ಚಿಟ್ಟಾ,ಖಾನಾಪೂರ ತಾಂಡಾ,ಭಾಗ್ಯನಗರ,ದಾಡಗಿ
ಗ್ರಾಮಗಳಲ್ಲಿ ಬಹುಕಾಲ ಸೇವೆ ಸಲ್ಲಿಸಿ,ಭಾಲ್ಕಿಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸಿದ ಇವರು ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿದ ಇವರು ಕೆಲ ವರ್ಷಗಳ ನಂತರ 2007 ರಲ್ಲಿ ಪ್ರೌಢ ಶಾಲೆಗೆ ಬಡ್ತಿ ಹೊಂದಿ ಸದ್ಯ ಭಾಲ್ಕಿ ತಾಲೂಕಿನ ಡೊಣಗಾಪೂರ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿದ್ದರಿಂದ ಅವರು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ.
ಅವುಗಳೆಂದರೆ, ‘ ಹೃದಯ ತರಂಗಗಳು’ ‘ ನೊಂದ ಬೆಂದವರು ‘ ಇವು ಅವರ ಕವನ ಸಂಕಲನಗಳಾದರೆ, ‘ಬೆಳಗಿನೊಳಗಣ ಬೆಳಗು’
ಇದು ಇವರ ಆಧುನಿಕ ವಚನ ಸಂಕಲನವಾಗಿದೆ. ಈ ಕೃತಿಗೆ 2005 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಿಂದ
ಜಿ.ಆರ್. ರೇವಯ್ಯ ದತ್ತಿ ಪ್ರಶಸ್ತಿ ಪಡೆದುಕೊಂಡಿದೆ
‘ ವೈರಾಗ್ಯ ನಿಧಿ ಲಿಂಗಾಂಗಯೋಗಿ ಶತಾಯುಷಿ ಡಾ.ಚನ್ನಬಸವ ಪಟ್ಟದ್ದೆವರು’ ಮತ್ತು ‘ಕಲ್ಯಾಣ ಶ್ರೀ ‘ ಇವು ಅವರು ರಚಿಸಿದ ಜೀವನ ಚರಿತ್ರೆಗಳಾಗಿವೆ.ಹಾಗೂ ‘ವಚನ ಜ್ಯೋತಿ’ ‘ವಚನ ಸಿರಿ’ ‘ದಾಸೋಹದ ವಚನಗಳು’ ‘ಸಾಹಿತ್ಯ ಜ್ಯೋತಿ’ ‘ಶಿವಕಳೆ’ ‘ಕನ್ನಡದ ದಿಗ್ಗಜರು’ ಮೊದಲಾದ 17 ಕೃತಿಗಳು ಸಂಪಾದಿಸಿದ್ದಾರೆ. ಇವರ ಬರಹಗಳು ಕೆಲವು ಪ್ರಮುಖ ಪತ್ರಿಕೆಗಳಾದ ವಿಶ್ವ ಕಲ್ಯಾಣ, ಶಾಂತಿ ಕಿರಣ, ‘ಪಬ್ಲಿಕ್, ಖಡ್ಕೆ ಪತ್ರಿಕೆ, ಉತ್ತರ ಕರ್ನಾಟಕ, ಬೆಳಕಿಂಡಿ,
ಬೀದರ ರಹಸ್ಯ, ಬಸವ ಬೆಳಗು ಮೊದಲಾದ ಪತ್ರಿಕೆಗಳಲ್ಲಿ ಇವರ ಕವನ ಲೇಖನಗಳು ಪ್ರಕಟವಾಗಿವೆ.
ಹಾಗೂ ಕಲಬುರಗಿ ಆಕಾಶವಾಣಿಯಿಂದಲೂ ಇವರ ಕವನ, ಉಪನ್ಯಾಸಗಳು ಪ್ರಸಾರವಾಗಿವೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳೂರು, ಬಿಜಾಪುರಗಳಲ್ಲಿ ಭಾಗವಹಿಸಿ, ಕವಿಗೊಷ್ಠಿಗಳಲ್ಲಿ ಕವನ ವಾಚನವು ಮಾಡಿದ್ದಾರೆ.
1995 ರಲ್ಲಿ ಭಾಲ್ಕಿಯ ಕಸಾಪದ ಗೌರವ ಕಾರ್ಯದರ್ಶಿಯಾಗಿ,
ಉಪಾಧ್ಯಕ್ಷರಾಗಿ,ಮತ್ತು ಸಂಸ್ಕೃತಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು 2008 ರಲ್ಲಿ ಭಾಲ್ಕಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತಾಲೂಕಿನಲ್ಲಿ ಪ್ರಥಮ ಸಾಹಿತ್ಯ ಸಮ್ಮೇಳನ ಮಾಡಿ ಖ್ಯಾತರಾಗಿದ್ದಾರೆ
ಮತ್ತು ಗ್ರಾಮ ಸಮ್ಮೇಳನ,ಹೊಬಳಿ ಸಮ್ಮೇಳನ, ಗಡಿನಾಡು ಉತ್ಸವ ಮೊದಲಾದ ನೂರಾರು ಕಾರ್ಯಕ್ರಮಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.ಮತ್ತು ಕಸಾಪ ಆಡಳಿತದ ಅವಧಿಯಲ್ಲಿ ಕೆಲವು ವಿನೂತನ ಕಾರ್ಯಕ್ರಮಗಳನ್ನು ಮಾಡಿ ಕನ್ನಡಿಗರಿಗೆ ಮನೆ ಮಾತಾಗಿದ್ದಾರೆ.
ಇವರು ಮಾಡಿದ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದ ಸಾಧನೆಗೆ
‘ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಮತ್ತು ಕಸಾಪ ಜಿ.ಆರ್.ರೇವಯ್ಯಾ ದತ್ತಿ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಇವರಿಗೆ 2014 ರಲ್ಲಿ ಭಾಲ್ಕಿ ತಾಲೂಕಿನ ದ್ವಿತೀಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಿದ್ದಾರೆ.

ಮಚ್ಚೇಂದ್ರ ಪಿ ಅಣಕಲ್.

ಕೃಪೆ- ‘ಬೀದರ ಜಿಲ್ಲಾ ಸಾಹಿತಿಗಳ ಪರಿಚಯ’ ಎಂಬ ಪುಸ್ತಕ ದಿಂದ ಆರಿಸಿಕೊಳ್ಳಲಾಗಿದೆ.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *