Oplus_131072

ಅರಿವು

ಮನಗತ್ತಲು ಕಳೆಯಲು ಬೆಳಕನು ಹರಡಲು
ಜ್ಞಾನದ ದೀವಿಗೆ ಹಚ್ಚೋಣ
ಮೂಢನಂಬಿಕೆ ಕಂದಾಚಾರದ ಬೇರನು
ಬುಡದಿಂದಲಿ ಕಿತ್ತೆಸೆಯೋಣ

ಭೇದ ಭಾವ ವೈಮನಸಿನ ಕಂದಕಕೆ
ಬಾಂಧವ್ಯದ ಬೆಸುಗೆ ಬೆಸೆಯೋಣ
ತಾರತಮ್ಯದ ವೇದನೆಗಳಿಸುತ
ಸಮಾನತೆಯ ಸಂತಸ ಬಡಿಸೋಣ

ಮಡಿಮೈಲಿಗಳ ಮನಗಳ ತೊಳೆಯುತ
ಮನುಷ್ಯತ್ವದ ಮೆರಗನು ಬರಿಸೋಣ
ವೈಚಾರಿಕ ಪ್ರಜ್ಞೆಯ ಕಂಪು ಹರಡುತ
ವೈಜ್ಞಾನಿಕ ಅರಿವು ಬಿತ್ತೋಣ

ಮಾನವರೆಲ್ಲರು ಒಂದೆನ್ನುವ ಮಂತ್ರವು
ಮನದಾಳದಿಂದಲಿ ಉಲಿಯೋಣ
ಸಹಪಂಕ್ತಿಭೋಜನವು ಕೂಡಿಮಾಡುತ
ಭಕ್ಷಗಳ ರುಚಿಯನು ಸವಿಯೋಣ

ಸಮಸಮಾಜದ ನಿರ್ಮಾಣಕೆ ಸಕಲರು
ಬೆವರಿನ ಹನಿಗಳ ಹರಿಸೋಣ
ಸಾಮರಸ್ಯದ ಹೊಸ ಬದುಕನು ಸಾಗಿಸುತ
ನವಬಾಳಿನ ನಾಂದಿಗೆ ಸಂವಿಧಾನವ ನೆನೆಯೋಣ

ಮಾಣಿಕ ನೇಳಗಿ ತಾಳಮಡಗಿ.ಬೀದರ

 

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *