ಕೆಂಬಾಳೆ.
ಬದುಕಿನ ಮುದ ಮುಂಬೆಳಗಿನ ಹದ ಹೊಂಬಾಳೆ
ಮರೆಯದೆ ಹೊಸನಾಳೆಯ ಬಯಸಿದೆ ಕೆಂಬಾಳೆ. ।
ಕರಿ ನೆಲದಲ್ಲಿ ತರತರ ಗರಿಗೆದರಿದೆ ಸೀರಿಮರಿ
ಸುಲಿದಸ್ಟು ಸಲಿಸು ಸಿರಿಗನ್ನಡದ ಈ ಬಾಳೆ ಸಲಿಗೆ
ಮೆಲೆಯಲು ಸವಿಗನ್ನಡದಂತದು ಮದು ಮೆತ್ತಗೆ
ಬಯಲಿನ ಬನಸಿರಿಗದು ಹೊಸ ಹೆಸರದು ಕೆಂಬಾಳೆ. ।
ಸವಿಮಾತಿಗೆ ಸದಾ ಮನ ಸೋತಿದೆ ಮೈಮರೆತು
ತಿರುಳು ಕೆನ್ನೆಯಲಿ ಬಾಗಿದ ಗೋನೆಗೆ ಮನಸೋತು
ನಾಟಿದ ನೋಟಕ್ಕೆ ಅಪ್ಪಿದೆ, ತಪ್ಪದೆ ತಂಪಾಯಿತು
ಬರುವಗೆ ಹೊನ್ನಗೆಯಲಿ ಮನ್ನಿಸಿ ಕರೆಯಿತು. ।
– ದೇವೇಂದ್ರ ಕಟ್ಟಿಮನಿ.ಕಮಲಾಪುರ