Oplus_131072

ಒಲ್ಲೆನೆನಬೇಡ.

ನೆನಪಿನಂಗಳದಲ್ಲಿ ಮುತ್ತು ರತ್ನಗಳುಂಟು
ಹೆಕ್ಕೋಣ ಬಾ ಗೆಳೆಯ ಒಲ್ಲೆನೆನಬೇಡ
ಚಿಕ್ಕದಾಗಲಿ ದೊಡ್ಡದಾಗಿರಲಿ ಬಿಡಬೇಡ
ಮಿಕ್ಕಿದರು ಸರಿಯೆ ದಣಿವಾಯಿತೆನಬೇಡ ||೧||

ನಮಗಂಟಿಕೊಂಡಿರುವ ವಾಸ್ತವದ ಬದುಕಿಂದ
ತುಸು ಹೊರಗೆ ನೀ ನೋಡು ಒಮ್ಮೆಬಂದು
ಅಕ್ಕಪಕ್ಕದ ಜಾಡು ಹಸಿರು ಹೊನ್ನಿನ ಮಾಡು
ಗೊಂದಲಕೆ ವಿರಾಮವದು ನಿಂದು ನೋಡು ||೨||

ಕಪ್ಪು ಮೋಡದ ಮಾತು ಕಠಿಣವಾದರು ಏನು
ನಿಷ್ಕಲ್ಮಶದಿ ಬಂದ ಭಾವಗೀತೆ
ಮಂಕಾದ ಮುಗಿಲಲ್ಲೆ ಮೊಳೆವ ಬೀಜಗಳುಂಟು
ಕಣ್ಮುಚ್ಚಿ ಕೂರದಿರು
ಚಿಂತೆ ||೩||

ಹತ್ತಾರು ಕನಸುಗಳ ಗೆಜ್ಜೆ ಸದ್ದಿನ ಕತೆಗೆ
ಮುನ್ನುಡಿಯ ದೀವಟಿಗೆ ನೀನಾಗು ಬಾ
ಮಾಗಿರುವ ಹಣ್ಣಲ್ಲೆ ಹೊಸತನದ ಭವಿಷ್ಯವು
ಬೇಗುದಿಯ ತೊರೆದುದಯಮುಖಿಯಾಗಿ ಬಾ ||೪||

ನಾಗರತ್ನಾತ್ಮಜೆ
(ಮಂಜಮ್ಮ ಎ ಬಿ) ಹೊಳೆಸಿರಿಗೆರೆ ಹರಿಹರ ತಾಲ್ಲೂಕು ದಾವಣಗೆರೆ ಜಿಲ್ಲೆ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *