Oplus_131072

ರಾಷ್ಟ್ರ ಕವಿಗೆ ನಮನ.

– ಜಿ.ಎಸ್.ಗಾಯತ್ರಿ

1904 ನೇ ಇಸ್ವಿ ಡಿಸೆಂಬರ್ 29, ನಮ್ಮ ರಾಷ್ಟ್ರಕವಿ ಕುವೆಂಪು ರವರ ಹುಟ್ಟು ಹಬ್ಬವಾಗಿದೆ. ಇದು ಅವರ 120 ನೇ ಹುಟ್ಟು ಹಬ್ಬವಾಗಿದೆ. ಅವರ ಜನ್ಮ ದಿನದ ಪ್ರಯುಕ್ತವಾಗಿ ಈ ಕವಿತೆ ಪ್ರಕಟಿಸಲಾಗಿದೆ- ಸಂ.

 

ಬೀರಿದರು ಕನ್ನಡದ ಕಸ್ತೂರಿಯ ಕಂಪು
ಕರುನಾಡ ಕಣ್ಮಣಿಯು‌ ರಾಷ್ಟ್ರ ಕವಿ ಕುವೆಂಪು
ಮಲೆನಾಡಿನ ಕವಿಯು ಕನ್ನಡದ ಹಿರಿಮೆ
ಕಾವ್ಯಧಾರೆಯ ಹರಿಸಿ ತೋರಿಸಿದರು ಒಲುಮೆ.

ಬಾರಿಸಿದರು ರಸ ಋಷಿಗಳು ಕನ್ನಡದ ಡಿಂಡಿಮ
ಸಾರಸ್ವತ ಲೋಕಕೆ ಇವರ ಸೇವೆ ಅನುಪಮ
ಜೈ ಭಾರತ ಜನನಿಯ ತನುಜಾತೆಯನ್ನು
ಪೂಜಿಸುತ ಪಡೆದರು ಅವಳ ಕೃಪೆಯನ್ನು.

ಕನ್ನಡಕೆ ಕೈ ಎತ್ತಿ ಕಲ್ಪವೃಕ್ಷವಾಗಿಹರು
ಕರುನಾಡಿಗೆ ಕೊರಳೆತ್ತಿ ಪಾಂಚಜನ್ಯ ಮೊಳಗಿಸಿದರು
ಹರಿಸಿದರು ಕನ್ನಡದಲಿ ಕಾವ್ಯಧಾರೆಯ
ಧರಿಸಿದರು ಪ್ರಶಸ್ತಿಗಳ ಸರಮಾಲೆಯ.

‘ಜ್ಞಾನಪೀಠ’ವ ಪಡೆದ ‘ರಾಮಾಯಣ ದರ್ಶನ’
ನೀಡುವುದದು ಮನುಜರಿಗೆ ಮಾರ್ಗದರ್ಶನ
ಮಾಡಿಸುವುದು ನಮಗೆಲ್ಲ ಶ್ರೀ ರಾಮನ ದರುಶನ
ಅದನೋದಿದಾಗಲೇ ನಮ್ಮ ಬದುಕು ಪಾವನ.

ಭೂಷಣಕೆ ಭೂಷಣ ‘ಪದ್ಮಭೂಷಣ’
‘ಕರ್ನಾಟಕ ರತ್ನ’ನಿಗೆ ಇದು ಸಂದ ಕಾರಣ
‘ಯುಗದ ಕವಿ ಜಗದ ಕವಿ’ ಕನ್ನಡದ ಚೇತನ
ವಿಶ್ವಮಾನವತೆ ಸಾರಿದ ಕವಿಗೆ
ಇದೋ ನಮ್ಮ ನಮನ
ಇದೋ ಅನಂತ ನಮನ.

ಜಿ.ಎಸ್.ಗಾಯತ್ರಿ
ಶಿಕ್ಷಕಿ
ಬಾಪೂಜಿ ಶಾಲೆ
ಹರಿಹರ.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *