ಮಾನವ ಜನ್ಮ ದೊಡ್ಡದು.
– ಓಂಕಾರ ಪಾಟೀಲ ಬೀದರ
ನದಿ ಸಾಗರ ಸೇರುವದು ಹೇಗೆ ಎಷ್ಟೂ ಸತ್ಯವೋ ! ಹಾಗೆ ಮನುಷ್ಯನ ಹುಟ್ಟು ಅನಿಷಿತ, ಸಾವು ಖಚಿತವೆನ್ನುವುದು ಅಷ್ಟೇ ಸತ್ಯ. ಹಾಗಾಗಿ ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ನರಜನ್ಮ ಸಾರ್ಥಕವಾಗಬೇಕಾದರೆ ನಾವುಗಳು ಸಮಾಜಕ್ಕೆ ಎನಾದರೂ ನಮ್ಮ ಕೈಲಾದಷ್ಟು ಕೊಡುಗೆ ನೀಡಬೇಕು.
ಜಗತ್ತಿನ ಸಕಲ ಚರಾಚರ ಜೀವರಾಶಿಗಳಲ್ಲಿ ಅಂಡಜ, ಪಿಂಡಜ ಜಲಜ ಎಂಬ ಮೂರು ಪ್ರಕಾರದ ಜೀವ ಜಂತುಗಳನ್ನು ಕಾಣುತ್ತೇವೆ. ಅದರಲ್ಲಿ ಮಾನವ ಜನ್ಮವು ಒಂದು .ಈ ಜನ್ಮಕ್ಕೆ ಆ ದೇವರು ಬಹಳ ಉನ್ನತ ಸ್ಥಾನ ಕೊಟ್ಟಿದ್ದಾನೆ. ಎಲ್ಲ ಜನ್ಮಗಳಿಗಿಂತ ಮನುಷ್ಯ ಜನ್ಮವೇ ಶ್ರೇಷ್ಟ ಎಂದು ಕೂಡ ಕರೆಯಲಾಗಿದೆ.
“ಜಂತುನಾಮ್ ನರ ಜನ್ಮ್ ದುರ್ಲಭಂ” ಎನ್ನುವಂತೆ ಈ ಮನುಷ್ಯ ಜನ್ಮ ಬಹು ಸುಲಭವಾಗಿ ಸಿಕ್ಕಿದ್ದಲ್ಲ. ಹಲವಾರು ಜನ್ಮಗಳ ಪುಣ್ಣ್ಯದ ಪ್ರತಿಫಲದಿಂದಾಗಿ ಈ ಜನ್ಮ ಪಡೆದದ್ದಾಗಿದೆ. ಎನ್ನುವುದು ವೇದ ಪುರಾಣ ಆಗಮ ಶಾಸ್ತ್ರ ಮತ್ತು ವಿವಿಧ ಧರ್ಮ ಗ್ರಂಥಗಳಿಂದ ತಿಳಿದು ಬರುತ್ತದೆ. ಹಾಗಾಗಿ ದಾಸರಲ್ಲಿ ಪುರಂದರ ದಾಸರು
“ಮಾನವ ಜನ್ಮ ದೊಡ್ಡದ್ದು ಇದು ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ ” ಎಂದು ಹಾಡಿ ಮಾನವ ಕುಲದ ಶ್ರೇಷ್ಠತೆಯನ್ನು ಎತ್ತಿ ಕೊಂಡಾಡಿದ್ದಾರೆ.
ನದಿ ಸಾಗರ ಸೇರುವದು ಹೇಗೆ ಎಷ್ಟೂ ಸತ್ಯವೋ ! ಹಾಗೆ ಮನುಷ್ಯನ ಹುಟ್ಟು ಅನಿಷಿತ, ಸಾವು ಖಚಿತವೆನ್ನುವುದು ಅಷ್ಟೇ ಸತ್ಯ. ಹಾಗಾಗಿ ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ನರಜನ್ಮ ಸಾರ್ಥಕವಾಗಬೇಕಾದರೆ ನಾವುಗಳು ಸಮಾಜಕ್ಕೆ ಎನಾದರೂ ನಮ್ಮ ಕೈಲಾದಷ್ಟು ಕೊಡುಗೆ ನೀಡಬೇಕು.
ಅದಕ್ಕಾಗಿ ನಾವುಗಳು ನಮ್ಮ ಜೀವನ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಮನಸ್ಸನ್ನು ನಿಯಂತ್ರಣಗೊಳಿಸಿ ಆದ್ಯಾತ್ಮಿಕತೆಗೆ ಒಗ್ಗಿಕೊಳ್ಳುವ ಮೂಲಕ ನಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕು.
ಆಧ್ಯಾತ್ಮ ಅನ್ನುವುದು ಪುಸ್ತಕದ ಬದನೆಕಾಯಿ ಎಂಬುದು ಹಲವರ ವಾದ.“ಆಧ್ಯಾತ್ಮ ಕೇವಲ ವಯಸ್ಸಾದವರಿಗೆ” ಅನ್ನುವುದು ಅದು ತಪ್ಪುಅಭಿಪ್ರಾಯ.ಆದರೆ,ಮನುಷ್ಯನಲ್ಲಿ ಇರಲೇಬೇಕಾದ ಗುಣವೇ ಆಧ್ಯಾತ್ಮ ಚಿಂತನೆ. ಅಷ್ಟಕ್ಕೂ ಏನಿದೆ ಈ ಬದುಕಿನಲ್ಲಿ..?
“ವೇದಾಂತಿ ಹೇಳಿದನ್ನು ಹೊನ್ನೆಲ್ಲ ಮಣ್ಣು ಮಣ್ಣು.
ಕವಿಯೊಬ್ಬ ಹಾಡಿದನ್ನು ಮಣ್ಣೆಲ್ಲ ಹೊನ್ನು ಹೊನ್ನು” ಅಂತ ಕವಿ ಪಿ.ಬಿ.ಶ್ರೀನಿವಾಸ ಅವರು ಹಾಡಿದ್ದಾರೆ
ಅಧಿಕಾರವಿರುವವರು ಹೇಳಬಹುದು ಅಧಿಕಾರವಿದೆ.
ಹಣವಿರುವವರು ಹೇಳಬಹುದು ಹಣವಿದೆ. ನೂರು ಜನ ನೂರು ಕಾರಣಗಳನ್ನು ಹೇಳಬಹುದು.ನಿಜ..ಎಲ್ಲವೂ ಇದೆ.ಆದರೆ ಮನದಲ್ಲಿ ಅವ್ಯಕ್ತ ಆನಂದವಿಲ್ಲ. ಆ ಅವ್ಯಕ್ತ ಆನಂದವೆಲ್ಲಿ ಸಿಗಬಹುದು..? ಅದು ಅಧ್ಯಾತ್ಮ ಮತ್ತು ಧ್ಯಾನದಲ್ಲಿ ಮಾತ್ರ ಸಿಗುತ್ತದೆ
ನಿಜ ಅದು ಕೇವಲ ಸಿಗುವುದು ಆಧ್ಯಾತ್ಮದಲ್ಲಿ.
ನಮ್ಮ ಶರಣರ, ಸಂತರ ದಾರ್ಶನಿಕರ ಪ್ರಕಾರ ಶರೀರ,ಪಂಚೇಂದ್ರಿಯಗಳು,ಮನಸ್ಸು ಪ್ರಮುಖವಲ್ಲ.ಹೆಚ್ಚಿನ ಪ್ರಾಮುಖ್ಯತೆ ಆತ್ಮಕ್ಕೇ ಸಾಕ್ಷಿಯಾಗಿದೆ.
.“ಆತ್ಮಾ ಏವ ಸತ್”
ಆತ್ಮವನ್ನು ಸಮೀಪಿಸುವುದು ಆಧ್ಯಾತ್ಮ. ಆತ್ಮಕ್ಕೆ ಸುಖವಿಲ್ಲ, ಕಷ್ಟವಿಲ್ಲ,ಸಾವು,ನೋವುಗಳೂ ಇಲ್ಲ.ಆತ್ಮವನ್ನು ಅರಿತವನಿಗೂ ಸುಖ- ದುಃಖಗಳಿಲ್ಲ. ಆತ್ಮವನ್ನು ಅರಿತವನು ಆತ್ಮ ತತ್ವಜ್ಞಾನಿ.ಆತ್ಮ ತತ್ವಜ್ಞಾನಿಗೆ ಭಯ,ದುಃಖ, ನೋವುಗಳಿಲ್ಲ. ಆತ ಸದಾನಂದ.ಅಂತವರಿಗೆ ಈ ಪ್ರಪಂಚದ,ಚರಾಚರವಸ್ತುಗಳಲ್ಲಿ ಬೇಧವಿಲ್ಲವೆನಿಸುತ್ತದೆ.ಸಮಸ್ತ ವಿಶ್ವವೂ ನಮ್ಮದೆಂದೆನಿಸುತ್ತದೆ. ಅಂತಹ ಆತ್ಮ ತತ್ವದ ಸಿದ್ಧಾಂತವು ನಮ್ಮ ಜ್ಞಾನವನ್ನರಿಯುವ ಪ್ರಯತ್ನದತ್ತ ಸಾಗಲೆಂದು ಹಾರೈಸುವೆ.
– ಓಂಕಾರ ಪಾಟೀಲ
(ಕಾರ್ಯದರ್ಶಿ. ಮಕ್ಕಳ ಸಾಹಿತ್ಯ ಪರಿಷತ್ತು ಬೀದರ)