Oplus_131072

ಮಲೆನಾಡ ಕವಿ

ಮಲೆನಾಡಿನ ತಂಪಲ್ಲಿ ಅರಳಿದರು
ಹಚ್ಚ ಹಸಿರಲೆ ಮಧ್ಯೆ ಉಸಿರಾದರು
ಸಾಹಿತ್ಯ ಕ್ಷೇತ್ರಕ್ಕೆ ದಾಪುಗಾಲ ಹಾಕಿದರು
ಸವಿನುಡಿ ಜೇನಿನಂತೆ ಸಾಹಿತ್ಯ ಬರೆದರು

ಓದುವ ವಿಷಯ ಸಾಹಿತ್ಯ ಬೆರೆಸಿ ಓದಿದರು
ಆಂಗ್ಲ ಭಾಷೆ ಕನ್ನಡಕ್ಕೆ ಅನುವಾದ ಮಾಡಿದರು
ಮೊದಲ ಸಾಹಿತ್ಯ ರಚಿಸಿ ಹೇಳಿದರು
ಜನಪ್ರಿಯ ಕವಿತೆಯಾಗಿ ಹೊರಹೊಮ್ಮಿದರು

ಕನ್ನಡ ದಿನಪತ್ರಿಕೆ ಸೇವೆ ಮಾಡುತ್ತಾ
ಕನ್ನಡ ಸಾಹಿತ್ಯ ಅಭಿವೃದ್ಧಿಯತ್ತ ತರುತ್ತಾ
ಶ್ರೀ ರಾಮಾಯಣ ದರ್ಶನಂ ಕೃತಿ ಅರ್ಪಿಸುತ್ತಾ
ಜ್ಞಾನಪೀಠ ಪ್ರಶಸ್ತಿಗೆ ಬಾಜನರಾಗುತ್ತಾ
ಕನ್ನಡವೇ ಉಸಿರು ಕನ್ನಡವೇ ಹಸಿರು ಎನ್ನುತ್ತಾ

ಕಾವ್ಯದ ರಸ ಚಿಲುಮೆ ಉಣಬಡಿಸಿ
ಯುಗದ ಕವಿ ಜಗದ ಕವಿ ಎಂದೆನಿಸಿ
ಸೀತಮ್ಮ ವೆಂಕಟಪ್ಪ ಅವರ ಪುತ್ರರೇನಿಸಿ
ಕರುನಾಡಿನ ಕಂದ ಕುವೆಂಪು ಅವರಿಗೆ ನಮನ ಸಲ್ಲಿಸಿ

ಕು. ಕವಿತಾ ಎಮ್ ಮಾಲಿ ಪಾಟೀಲ.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *