ಜನನಾಯಕ ಈಶ್ವರ ಖಂಡ್ರೆ .
– ಸಂಗಮೇಶ ಎನ್ ಜವಾದಿ ಚಿಟಗುಪ್ಪ.
ಕರ್ನಾಟಕ ರಾಜ್ಯದ ಆದರ್ಶ ನಾಯಕರು, ಬಡವರ ಬಂಧು, ರೈತರ ಆಶಾಕಿರಣ, ಕಲ್ಯಾಣ ಕರ್ನಾಟಕ ವಿಭಾಗದ ಸಮಗ್ರ ಅಭಿವೃದ್ಧಿಯ ಹರಿಕಾರರು, ಯುವಕರ ಕಣ್ಮಣಿ, ಗಂಭೀರ ಸ್ವಭಾವದ ಹೃದಯ ಶ್ರೀಮಂತಿಕೆಯ ನಿಸ್ವಾರ್ಥ ಸೇವಕರು. ಮಾತಿನಲ್ಲೇ ಚತುರತೆಯನ್ನು ತೋರುವ ಧೀಮಂತ ವ್ಯಕ್ತಿತ್ವದ ಸೌಜನ್ಯಕಾರರು. ಸರಳತೆಯ ಸಾಕಾರ ಮೂರ್ತಿ,ಸದಾ ಕ್ರಿಯಾಶೀಲ ಚಟುವಟಿಕೆಗಳ ಉತ್ಸಾಹಿ ನೇತಾರರು, ಹೇಳಿದ್ದನ್ನು ಮಾಡುವ ಎದೆಗಾರಿಕೆಯ ಛಲವಂತರು. ವಿಶ್ವಾಸ ಮತ್ತು ಪ್ರಾಮಾಣಿಕತೆಗೆ ಬದ್ಧರಾದವರು. ಪ್ರಬುದ್ಧತೆ, ನಿಷ್ಕಲ್ಮಶ ಮನಸ್ಸಿನ ವಿಶಾಲ ಹೃಯವಂತರು,ಕನ್ನಡ ನಾಡು ಕಂಡ ಅಪ್ರತಿಮ ಕೆಚ್ಚೆದೆಯ ಹೋರಾಟಗಾರರು, ಜನಸಾಮಾನ್ಯರ ಪ್ರೀತಿಯ ಅಕ್ಕರೆಯ ಜನನಾಯಕರು ಸನ್ಮಾನ್ಯ ಶ್ರೀ ಈಶ್ವರ ಭೀಮಣ್ಣ ಖಂಡ್ರೆಯವರು. ಈಶ್ವರ ಖಂಡ್ರೆ ರವರು ಕಲ್ಯಾಣ ಕರ್ನಾಟಕದ ಹೆಮ್ಮೆಯ ಸುಪುತ್ರರಾಗಿ ಕಂಗೊಳಿಸುತ್ತಾ, ಸೇವೆಯೇ ಶ್ರೇಷ್ಠ ಜೀವನದ ದಾರಿಯ ಪಥದಲ್ಲಿ ಹೆಜ್ಜೆ ಹಾಕುತ್ತಿರುವ ಮೌಲ್ಯಾಧಾರಿತ ಸಿದ್ಧಾಂತದ ರಾಜಕಾರಣಿ.
ಮೂಲತಃ ಬೀದರ ಜಿಲ್ಲೆಯ ಭಾಲ್ಕಿ ನಗರದಲ್ಲಿ 1962 ರ ಜನೆವರಿ 15 ರಂದು ತಂದೆ ಭೀಮಣ್ಣ ಖಂಡ್ರೆ ಮತ್ತು ತಾಯಿ ಲಕ್ಷ್ಮೀಬಾಯಿ ಖಂಡ್ರೆ ದಂಪತಿಗಳ ಮಗನಾಗಿ ಜನಿಸಿದ ಶ್ರೀಯುತರು ಪ್ರಾಥಮಿಕ,ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಶಿಕ್ಷಣವನ್ನು ಭಾಲ್ಕಿ ನಗರದಲ್ಲಿ ಪಡೆದುಕೊಂಡಿದ್ದಾರೆ. ಉನ್ನತ ಶಿಕ್ಷಣವನ್ನು 1985 ರಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪಾ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರೈಸಿದಾರೆ.
ಖಂಡ್ರೆಯವರು ವೃತ್ತಿಯಲ್ಲಿ ಕೃಷಿಕರಾಗಿದ್ದಾರೆ ಮತ್ತು ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ಸಾಮಾಜಿಕ ಸೇವಾ ಕೈಂಕರ್ಯಗಳು ಮಾಡಿ ಜನರಿಂದ ಮೆಚ್ಚುಗೆಯನ್ನು ಗಳಿಸಿದ್ದಾರೆ. ಅನೇಕ ಸಾಮಾಜಿಕ ಕೆಲಸಗಳಲ್ಲಿ ಕೈಜೋಡಿಸಿ,ಜನಪರ,ರೈತಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ನ್ಯಾಯ ಒದಗಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದಾರೆ.
ಈಶ್ವರ ಖಂಡ್ರೆ ರವರು ಶಾಂತಿವರ್ಧಕ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರಹ ಬದಲಾವಣೆಗಳಿಗೆ ಸಾಕ್ಷಿಕರಿಸಿ,ಹೊಸ ಹೊಸ ನಿಯಮ ಗಳನ್ನು ರೂಪಿಸಿ, ರಾಜ್ಯಕ್ಕೆ ಮಾದರಿ ಸೊಸೈಟಿಯನ್ನಾಗಿ ಸಿದ್ದಾರೆ. ಅಲ್ಲದೆ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ನಿಯಮಿತದ ಅಧ್ಯಕ್ಷರಾಗಿ ರೈತರ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ್ದಾರೆ.
ವೀರಶೈವ ಲಿಂಗಾಯತ ಮಾಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯಾದ್ಯಂತ ಸಂಚರಿಸಿ, ಸಂಘಟನೆಯನ್ನು ಬಲಿಷ್ಠಗೊಳಿಸಿ, ಸರ್ವಾಂಗೀಣ ಅಭಿವೃದ್ಧಿಯ ಕಾರ್ಯಗಳು ಮಾಡಿರುತ್ತಾರೆ. ಹೀಗೆ ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು, ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ. ಜನಸಾಮಾನ್ಯರ ಬವಣೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹತ್ತು ಹಲವು ವಿನೂತನ ಸೌಲಭ್ಯಗಳನ್ನು ಒದಗಿಸುವ ಕೆಲಸ ಸಹ ಅತ್ಯಂತ ಶ್ರದ್ಧಾ, ಭಕ್ತಿ, ದಕ್ಷತೆಯಿಂದ
ನಿರ್ವಹಿಸಿದ್ದಾರೆ. ಇನ್ನು ಇವರ ರಾಜಕೀಯ ಜೀವನವನ್ನು ನೋಡುವುದಾದರೆ, ರಾಜಕಾರಣ ಪಯಣ ಅತ್ಯಂತ ಬಲು ರೋಚಕವಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರಾಗಿ, ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ, ಬೀದರ ಕಾಂಗ್ರೆಸ್ ಸಮಿತಿಯ ಸೇವಾದಳದ ಜಿಲ್ಲಾ ಮುಖಂಡರಾಗಿ, ರಾಜ್ಯ ಮಟ್ಟದ ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯ ದರ್ಶಿ ಯಾಗಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಪಕ್ಷವನ್ನು ಕೆಳಮಟ್ಟದಿಂದ ಸಂಘಟಿಸಿ, ಯಶಸ್ವಿಯಾಗಿ ಸಂಘಟನೆ ಮಾಡಿರುತ್ತಾರೆ.
ಪ್ರಸ್ತುತ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ರಾಜ್ಯಾದ್ಯಂತ ಸಂಚರಿಸಿ ಸಂಘಟನೆಯನ್ನು ಬಲಪಡಿಸಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು/ತರುವಲ್ಲಿ ಇವರ ಪರಿಶ್ರಮ ಬಹಳ ದೊಡ್ಡ ಮಟ್ಟದಲ್ಲಿ ಇದೆ. ಇವರು ವ್ಯವಸ್ಥಿತವಾಗಿ ಪಕ್ಷ ಸಂಘಟನೆ ಮಾಡಿದ ಬಲದಿಂದಲೇ (ಫಲದಿಂದಲೇ) ಇಂದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಅಂದರೆ ಖಂಡಿತವಾಗಿಯೂ ತಪ್ಪಾಗಲಾರದು.ಇವರು ಪಕ್ಷಕ್ಕಾಗಿ ಮಾಡಿದ ತ್ಯಾಗ, ಪಕ್ಷಕ್ಕಾಗಿ ಸಲ್ಲಿಸಿದ ಅನುಪಮ ಸೇವೆಯನ್ನು ಕಾಂಗ್ರೆಸ್ ಹೈಕಮಾಂಡ್ ಎಂದೆಂದಿಗೂ, ಯಾವತ್ತಿಗೂ ಮರೆಯಬಾರದು.
ಅಂದಹಾಗೆ ಈಶ್ವರ ಖಂಡ್ರೆ ರವರು ಜಿಲ್ಲೆಯಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಖಂಡ್ರೆ ಕುಟುಂಬದ ಮೂರನೇ ಸದಸ್ಯರಾಗಿದ್ದಾರೆ . ಇವರ
ತಂದೆಯವರಾದ ಭೀಮಣ್ಣ ಖಂಡ್ರೆ ಅವರು ಲೋಕನಾಯಕರು, ಸ್ವಾತಂತ್ರ್ಯ ಹೋರಾಟಗಾರರು, ಸಹಕಾರಿ ಧುರೀಣರು, ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷರಾಗಿ, ಶಾಸಕರಾಗಿ, ಸಚಿವರಾಗಿ ಜನಪರ ಕೆಲಸ ಮಾಡಿದಂತೆ ಇವರ ಸಹೋದರ ವಿಜಯಕುಮಾರ್ ಖಂಡ್ರೆ ಅವರು ಸಹ ಎರಡು ಬಾರಿ ಭಾಲ್ಕಿ ಕ್ಷೇತ್ರದ ಶಾಸಕರಾಗಿ ಅಭಿವೃದ್ಧಿ ಕಾರ್ಯಗಳು ಮಾಡಿ ಸೈ ಎನಿಸಿಕೊಂಡಿದ್ದಾರೆ.
ಇವರ ದಾರಿಯಲ್ಲಿ ಸಾಗಿದ ಈಶ್ವರ ಖಂಡ್ರೆ ರವರು 2008 ರಲ್ಲಿ ಭಾಲ್ಕಿ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಮೊದಲು ಸಲ ಆಯ್ಕೆಗೊಂಡು 2013, 2018, 2023 ರಲ್ಲಿಯೂ ಶಾಸಕರಾಕರಾಗಿ ಆಯ್ಕೆಯಾಗಿ ದ್ದಾರೆ. ಹೀಗೆ ಒಟ್ಟು ನಾಲ್ಕು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆಗೊಂಡು ಇತಿಹಾಸವನ್ನು ಸೃಷ್ಟಿಸಿದ್ದಾರೆ. ಮಾನ್ಯ ಈಶ್ವರ ಖಂಡ್ರೆ ರವರು 2016 ರಿಂದ 2018 ರವರೆಗೆ ಸಿದ್ದರಾಮಯ್ಯ ನವರ ಸಚಿವ ಸಂಪುಟದಲ್ಲಿ ಕರ್ನಾಟಕದ ಪೌರಾಡಳಿತ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರಾಗಿ, ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೂಲಭೂತ ಸೌಕರ್ಯಗಳಾದ ಆಧುನಿಕ ಡಾಂಬರೀಕರಣ ರಸ್ತೆಗಳು ನಿರ್ಮಾಣ, ಸಾರಿಗೆ ಸೌಕರ್ಯ, ಆರೋಗ್ಯ ಸೌಲಭ್ಯಗಳು, ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ ನಿರ್ಮಾಣ, ವಸತಿ ರಹಿತರಿಗೆ ವಸತಿ ವ್ಯವಸ್ಥೆ, ಬಡವರಿಗೆ ಆರ್ಥಿಕ ಸೌಕರ್ಯವೂ ಸೇರಿದಂತೆ ವಿವಿಧ ವಲಯಗಳಲ್ಲಿ ಇರುವ ನೂರಾರು ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿರುತ್ತಾರೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ,ಪಶುಸಂಗೋಪನೆ, ರೇಷ್ಮೆ, ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚು ಒತ್ತು ಕೊಟ್ಟು, ಸರ್ವಾಂಗೀಣ ಅಭಿವೃದ್ಧಿ ಕೈಂಕರ್ಯಗಳು ಕೈಗೊಂಡಿದ್ದಾರೆ.
ಹೀಗೆ ಅನೇಕ ಜನಪರ ಯೋಜನೆಗಳನ್ನು ನಾಡಿಗೆ ನೀಡಿದ್ದಾರೆ. ದಲಿತವರ್ಗಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿ, ಉಚಿತ ಬಸ್ ಪಾಸನ್ನು ವ್ಯವಸ್ಥೆಯನ್ನು ಕಲ್ಪಿಸಿದಾರೆ. ಇಂತಹ ಅನೇಕ ಸಾವಿರಾರು ಸಾಮಾಜಿಕ ಕಳಕಳಿಯ ಯೋಜನೆಗಳನ್ನು ಈ ಕರುನಾಡಿಗೆ ಧಾರೆಯೆರೆದು ಧನ್ಯರಾಗಿದ್ದಾರೆ. ಹೀಗೆ ನಾಡಿನ ಸಂಪೂರ್ಣವಾಗಿ,ಸಮಗ್ರ ಅಭಿವೃದ್ಧಿಯ ವಿಕಾಸಕ್ಕಾಗಿ ಈಶ್ವರ ಖಂಡ್ರೆ ರವರು ತನು ಮನ ಅಷ್ಟೇ ನಿಷ್ಕಲ್ಮಶ ಮನಸ್ಸಿನಿಂದ ದುಡಿದಿದ್ದಾರೆ ಎಂದರೆ ತಪ್ಪಾಗಲಾರದು.ಕರ್ನಾಟಕದ ಸಮಗ್ರ ಏಳಿಗೆಗಾಗಿ ನಿತ್ಯ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ರಾಜಕೀಯ ಜೀವನದ ಉದ್ದಕ್ಕೂ ಅಧಿಕಾರವನ್ನು ಜನರ ಹಾಗೂ ನಾಡಿನ ಸರ್ವಾಂಗೀಣ ಅಭಿವೃದ್ಧಿ ಉನ್ನತಿಗಾಗಿ ಮೀಸಲಿಟ್ಟು, ಹಗಲಿರುಳು ದುಡಿಯುತ್ತಿದ್ದಾರೆ.
ಯಾವತ್ತೂ ಜಾತಿ ರಾಜಕಾರಣ ಮಾಡಿದವರಲ್ಲ.ನೀತಿ ರಾಜಕೀಯ ಮೇಲೆ ನಂಬಿಕೆ ಇಟ್ಟು ಆದರ್ಶ ರಾಜಕಾರಣ ಮಾಡಿದವರು, ಮಾಡುತ್ತಿದ್ದಾರೆ.
ಎಂದೆಂದಿಗೂ ಜಾತಿವಾದಿ ನಾಯಕರಲ್ಲ. ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿ ಕೆಲಸ ಮಾಡಿದ್ದಾರೆ. ಬಸವಣ್ಣ, ಅಂಬೇಡ್ಕರ್,ಗಾಂಧೀಜಿ ಮತ್ತು ಕುವೆಂಪು ಅವರ ಚಿಂತನೆಗಳ ತತ್ವದ ಮೇಲೆ ರಾಜಕೀಯ ಮಾಡುತ್ತಿರುವವರು. ಜಾತ್ಯತೀತ ಚಿಂತನೆಗಳ ಮೂಲಕವೇ ಇನ್ನು ರಾಜಕಾರಣ ಮಾಡುತ್ತಿರುವುದು ನೋಡುತ್ತಿದ್ದೇವೆ. ಅಲ್ಲದೇ ಈಶ್ವರ ಖಂಡ್ರೆ ರವರ ಗಟ್ಟಿ ನಿಲುವು ಏನೆಂದರೆ
ಸಾಮಾಜಿಕ ನ್ಯಾಯ, ಸಮಾನತೆ, ಭ್ರಾತೃತ್ವ, ಜಾತ್ಯತೀತತೆ ಮೊದಲಾದ ಸಂವಿಧಾನದ ಆಶಯಗಳ ಮೇಲೆ ಕೆಲಸ ಮಾಡಬೇಕು ಎನ್ನುವುದೇ ಇವರ ಅಂತರಾಳದ ಮಹಾದಾಸೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳು ಸೇರಿದಂತೆ ಎಲ್ಲ ಬದಲಾವಣೆಗಳಿಗೂ ರಾಜಕೀಯ ಬದಲಾವಣೆಯೇ ಮೊದಲ ಪ್ರಜಾಪ್ರಭುತ್ವದ ಪಾಠವಾಗಬೇಕು ಎಂಬುವುದೇ ಇವರ ಪ್ರಮುಖ ಆಶಯವಾಗಿದೆ. ಅದಕ್ಕಾಗಿ ಇವರಿಗೆ ಸಿಕ್ಕ ಅವಕಾಶದಲ್ಲಿಯೇ ಜನಪರ ಕೆಲಸಗಳನ್ನು ಮಾಡಿ ಸರ್ವರಿಗೂ ಮಾದರಿಯ ಜನನಾಯಕರಾಗಿದ್ದಾರೆ.
ಅದಕ್ಕಾಗಿಯೇ ಇವರು ಪ್ರಜಾಪ್ರಭುತ್ವ ಆಶಯಕ್ಕೆ ಅನುಗುಣವಾಗಿ ಜನಸಾಮಾನ್ಯರ ಅಶೋತ್ತರಗಳನ್ನು ಪ್ರಮಾಣಿಕವಾಗಿ ಈಡೇರಿಸುವ ಪ್ರಯತ್ನವನ್ನು ನಿತ್ಯ ನಿರಂತರವಾಗಿ ಮಾಡುತ್ತಿದ್ದಾರೆ. ಹೀಗಾಗಿಯೇ ಇವರನ್ನು ಜನಸಾಮಾನ್ಯರ ಅಚ್ಚುಮೆಚ್ಚಿನ ಜನನಾಯಕನೆಂದು ಕರೆಯುವುದುಂಟು. ಹೀಗೆ ಸಮಾಜವಾದಿ ನೇತಾರರಾಗಿ ಈಶ್ವರ ಖಂಡ್ರೆ ರವರು ಈ ನಾಡಿನ ಸಮಗ್ರ ಉನ್ನತಿಗಾಗಿ, ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅನೇಕ ಜವಾಬ್ದಾರಿ ಹೊತ್ತುಕೊಂಡು ಪ್ರಾಮಾಣಿಕವಾಗಿ ಗಡಿ ಭಾಗಗಳ ಸಮಸ್ಯೆಗಳು ಪರಿಹರಿಸುವ ನಿಟ್ಟಿನಲ್ಲಿ ದುಡಿದಿದ್ದಾರೆ. ತರುವಾಯ ಈ ಭಾಗಗಳಿಗೆ ಹೆಚ್ಚಿನ ರೀತಿಯಲ್ಲಿ ಅನುದಾನ ತಂದು ಅಭಿವೃದ್ಧಿ ಕಾರ್ಯಗಳು ಮಾಡಿ, ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿ ರಾಜ್ಯದ ಪ್ರಮುಖ ನಾಯಕರಾಗಿ ಹೊರಹೊಮ್ಮಿದ್ದಾರೆ.
ಆಶಯ ನುಡಿ:
ಬೆಸ್ಟ್ ಅಚಿವರ್ ಅವಾರ್ಡ್ ಪ್ರಶಸ್ತಿ ಪಡೆದ
ನುರಿತ ಅನುಭವಿ ಜನಾನುರಾಗಿ ಕಷ್ಟಗಳರಿತ ವಿವೇಕ ಪ್ರಬುದ್ಧ ಸ್ಪಂದಿಸುವಂತಹ ಗಟ್ಟಿಗ ವೈಚಾರಿಕ ಚಿಂತನಶೀಲರು ಈಶ್ವರ ಖಂಡ್ರೆ ಯವರು. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಗುಣದವರು. ಮುಂದಾಲೋಚನೆ ಸದಾಚಾರರು, ಕಳಂಕರಹಿತ ಜೀವನ, ಸಮಾನತೆಯ ಸತ್ಯ ನೇರ ನಡೆ ನುಡಿಯ ಸರದಾರರು, ನ್ಯಾಯಕ್ಕಾಗಿ ಹೋರಾಡುವ ಭರವಸೆ ನಂಬಿಕಸ್ಥ ನಾಯಕರು, ಚ್ಯುತಿರಹಿತ ಜೀವನದವರು,ಇನ್ನೊಬ್ಬರಿಗೆ ಮಾದರಿ,ಪ್ರೇರಣದಾಯಕರು. ಬಸವ ತತ್ವ ಮೈಗುಡಿಸಿಕೊಂಡ ಪ್ರಗತಿಪರ ಚಿಂತಕರು, ವೈಜ್ಞಾನಿಕ ಶಿಕ್ಷಣದ ಅಭಿವೃದ್ಧಿಯ ಹರಿಕಾರರು, ನೆಚ್ಚಿಕೊಂಡಿರುವ ದಾಢಸಿತನದ ಧುರೀಣ ಸದ್ಯದ ಕರ್ನಾಟಕದ ರಾಜಕೀಯ ಪರಿಸ್ಥಿತಿಗೆ ಹೇಳಿ ಮಾಡಿಸಿದ ಮುನ್ನಡೆಸಬಲ್ಲ ಜನನಾಯಕರು, ಕರ್ನಾಟಕ ರಾಜ್ಯದ ಸರ್ವಾಂಗೀಣ, ಸರ್ವತೋಮುಖ ಅಭಿವೃದ್ಧಿಗಾಗಿ ಸುರಕ್ಷಿತ ಕರುನಾಡಿನ ಅಭ್ಯುದಯ ಏಳಿಗೆಗಾಗಿ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ರವರು ಕರ್ನಾಟಕ ಸರ್ಕಾರದ ಘನ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಷ್ಟೇ ಹೇಳಿ ಮಾಡಿಸಿದಂತಹ ಯೋಗ್ಯ ವ್ಯಕ್ತಿತ್ವದವರು.
ಅಂದಹಾಗೆ ಇವರ ನಿಸ್ವಾರ್ಥ ಸೇವೆಯ ವ್ಯಕ್ತಿತ್ವಕ್ಕೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ಆದಷ್ಟು ಬೇಗ ದೊರೆಯಲೆಂಬು ವುದೇ ಲಕ್ಷಾಂತರ ಅಭಿಮಾನಿಗಳ ಸದಾಶಯವಾಗಿದೆ.
ಕೊನೆಯ ಮಾತು:
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸಿ
ಭಾವೈಕ್ಯತೆಯನ್ನು ಮತ್ತಷ್ಟು ಬಲಗೊಳಿಸಲು ಹಾಗೂ ಕರುನಾಡಿನ ಸಮಗ್ರ ಸರ್ವಾಂಗೀಣ ಅಭಿವೃದ್ಧಿಗಾಗಿ ಹೃದಯ ಶ್ರೀಮಂತಿಕೆಯ ಸಾಕಾರಮೂರ್ತಿ ಜನನಾಯಕರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ರವರು ಈ ಘನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಜನಪರ,ರೈತಪರ ಕೆಲಸ ಮಾಡಲೆಂದು ಆಶಿಸುತ್ತೇವೆ.
– ಸಂಗಮೇಶ ಎನ್ ಜವಾದಿ
ಸಾಹಿತಿ, ಪತ್ರಕರ್ತರು, ಸಾಮಾಜಿಕ ಸೇವಕರು,ಪರಿಸರ ಸಂರಕ್ಷಕರು.ಬೀದರ ಜಿಲ್ಲೆ.
9663809340.