Oplus_131072

ಹಿಂದೂ ರಾಷ್ಟ್ರಕ್ಕೆ ಪ್ರತ್ಯೇಕ ಸಂವಿಧಾನ; ಬಹುಜನರಿಗೆ ಮೃತ್ಯು ಶಂಶಾನ!

 

ಅಶ್ವಜೀತ ದಂಡಿನ ಬೀದರ

 

ಹಿಂದೂ ರಾಷ್ಟ್ರದ ಕನಸು ಕಾಣುತ್ತಿರುವ ಸಂಗಿಗಳು ಮನುಸ್ಮೃತಿ, ರಾಮ ರಾಜ್ಯ ಮತ್ತು ಚಾಣಕ್ಯನ ತತ್ವಾದರ್ಶಗಳ ಮೇಲೆ ‘ಹಿಂದೂ ರಾಷ್ಟ್ರ’ಕ್ಕಾಗಿ 501 ಪುಟಗಳ ‘ಸಂವಿಧಾನ’ ಸಿದ್ಧಪಡಿಸಿಕೊಂಡಿದ್ದಾರೆ. ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಫೆಬ್ರವರಿ ೩ ರಂದು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುತ್ತಿದೆ. ಎಂಬ ಸುದ್ದಿ ದಿನಪತ್ರಿಕೆಗಳಿಂದ ತಿಳಿದು ಬಂದಿದೆ.

ನಮ್ಮ ಈ ಭಾರತವು ಹಲವು ಧರ್ಮೀಯರು ನೆಲೆಸಿರುವ ಜಾತ್ಯತೀತ ರಾಷ್ಟ್ರ. ಇದು ಹಿಂದೂ ರಾಷ್ಟ್ರವು ಅಲ್ಲ. ಇಸ್ಲಾಂ ರಾಷ್ಟ್ರವು ಅಲ್ಲ. ಮತ್ತೆ ಆಗುವುದು ಇಲ್ಲ. ಆಗಲು ಪ್ರಗತಿಪರ ವಿಚಾರವಾದಿಗಳು ಬಿಡುವುದು ಇಲ್ಲ. ಈ ನಮ್ಮ ಭಾರತದ ಸಂವಿಧಾನದ ಮುಂದೆ ಎಲ್ಲರು ಒಂದೇ. “ಬಹುಜನ ಹಿತಾಯೇ; ಬಹುಜನ ಸುಖಾಯೇ” ಎಂಬ ಗೌತಮ ಬುದ್ಧರ ತತ್ವದ ಆಧಾರದ ಮೇಲೆ ನಮ್ಮ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ ಅವರು ಈ ದೇಶದ ಘನ ಸಂವಿಧಾನವನ್ನು ರಚಿಸಿ ಕೊಟ್ಟಿದ್ದಾರೆ. ಆದರೆ, ಅಸಮಾನತೆಯೇ ಧರ್ಮವಾಗಿಸಿಕೊಂಡ ಮನುವಾದಿಗಳಿಗೆ ಸಮಾನತೆ, ಸಹೋದರತೆ, ಸಹಬಾಳ್ವೆ ಕಡೆಗೆ ಕೊಂಡೊಯ್ಯುವ ಈ ಸಂವಿಧಾನ ಮೊದಲಿನಿಂದಲು ಹಿಡಿಸಲೇ ಇಲ್ಲ. ಸಂವಿಧಾನದ ವಿರೋಧ ಇವರ ಕುಮಕಗಳು ಮೊದಲಿನಿಂದಲೂ ನಡೆಯುತ್ತಲೇ ಬಂದಿವೆ. ಇವರು ಹೇಳುವ ಮನುಸ್ಮೃತಿ ಮತ್ತು ರಾಮ ರಾಜ್ಯದಲ್ಲಿ ಏನಿದೆ? ಎಂಬುವುದನ್ನು ಅರಿಯದೆ ಶೂದ್ರರು ಅವರು ಹಾಕಿದ ತಾಳಕ್ಕೆ ತಕ್ಕಂತೆ ಕುಣಿಯುವ ಕೋಲೆ ಬಸವರಾಗಿರುವುದು ತುಂಬ ದೊಡ್ಡ ದುರಂತವೇ ಸರಿ.

ಮನುಸ್ಮೃತಿಯೇ ರಾಮ ರಾಜ್ಯ ಏಕೆಂದರೆ ರಾಮಾಯಣದ ಕಥೆಯಲ್ಲಿ ಕಂಡು ಬರುವಂತೆ ರಾಮನ ರಾಜ್ಯದಲ್ಲಿ ಮನು ಮುನಿ ಬರೆದ ಮನುಸ್ಮೃತಿಯೇ ಶಾಸನವಾಗಿತು. ಹಾಗಾಗಿ ಅವೆರಡು ಒಂದೇ ಬೆರೆ ಬೆರೆ ಎಂದು ಹೇಳಲು ಆಗುವುದಿಲ್ಲ.

ಈ ಮನುಸ್ಮೃತಿಯ ಪ್ರಕಾರ ಈ ದೇಶದ ಬಹುಸಂಖ್ಯಾತರಾದ ಶೂದ್ರರಿಗೆ ವಿದ್ಯೆ, ಆಸ್ತಿ, ಅಧಿಕಾರ ನಿಷೇಧಿಸಲಾಯಿತು. ಒಂದು ವೇಳೆ ‘ಶೂದ್ರರು ವಿದ್ಯೆ ಕಲಿತರೆ, ಅವನನ್ನು ತುಂಡುತುಂಡಾಗಿ ಕತ್ತರಿಸಬೇಕು. ವಿದ್ಯೆಯನ್ನು ಉಚ್ಚರಿಸಿದರೆ, ಅವನ ನಾಲಿಗೆ ಕತ್ತರಿಸಬೇಕು. ವಿದ್ಯೆಯನ್ನು ಕೇಳಿದರೆ, ಅವನ ಕಿವಿಯಲ್ಲಿ ಕಾದ ಕಬ್ಬಿಣದ ಸೀಸವನ್ನು ಸುರಿಯಬೇಕು. ಎಂದು ಈ ಮನುಮುನಿಯು ಶೂದ್ರರಿಗೆ ವಿದ್ಯೆ, ಆಸ್ತಿ, ಅಧಿಕಾರ ನಿಷೇಧಿಸಿ ಶಾಶ್ವತವಾಗಿ ಗುಲಾಮ ಗಿರಿಯಲ್ಲಿ ತಾಳುತ್ತಾನೆ.

ರಾಮ ರಾಜ್ಯದಲ್ಲಿ ಶೂದ್ರ ಶಂಭೂಕ ವಿದ್ಯ ಕಲಿತ ಕಾರಣಕ್ಕೆ ಮರ್ಯಾದೆ ಪುರುಷೋತ್ತಮ ರಾಮ ಆತನ ತಲೆ ಕೆಡಿತು ಮನುವಾದವನ್ನು ಪೋಷಿಸಿದ. ಇಂತಹದೇ ಒಂದು ಘಟನೆ ಮಹಾಭಾರತದಲ್ಲಿಯೋ ಕಂಡು ಬರುತ್ತದೆ.

ಮನಸ್ಮೃತಿಯ ಶಾಸನದಲ್ಲಿ ಅಪರಾಧಿಗಳಿಗೆ ವಿಧಿಸುವ ಶಿಕ್ಷೆಯಲ್ಲಿಯೂ ತುಂಬಾ ದೊಡ್ಡ ತಾರತಮ್ಯವಿದೆ. ಮನುಸ್ಮೃತಿಯ ಅಧ್ಯಾಯ-8:40 ರಲ್ಲಿ ಮನುವು

👉’ಜಾತಿ ಧರ್ಮ, ಸಮಾಜ ಧರ್ಮ, ಕುಲ ಧರ್ಮ, ಇಂತಹ ಎಲ್ಲ ಧರ್ಮಗಳು ತಿಳಿದುಕೊಂಡು ಆಪಾದಿತನ ಜಾತಿ ಧರ್ಮಕ್ಕನುಗುಣವಾಗಿ ಶಿಕ್ಷೆಯನ್ನು ಕೊಡಬೇಕು.’ ಎಂದು ಹೇಳುತ್ತಾನೆ.(8:40)

👉’ಬ್ರಾಹ್ಮಣನಾದವನ್ವು ಎಂತಹ ಘೋರ ಅಪರಾಧ ಮಾಡಿದರು, ಅವನಿಗೆ ಮರಣದಂಡನೆ ಶಿಕ್ಷೆ ಕೊಡಬಾರದು. ಅವನನ್ನು ಯಾವುದೇ ರೀತಿಯಿಂದ ಪಿಡಿಸದೆ ಧನಸಹಿತವಾಗಿ ಒಡಿಸುವುದೆ ಅವನಿಗೆ ಕೊಡುವ ಅತಿ ದೊಡ್ಡ ಶಿಕ್ಷೆ’ (ಅ-8:380)

👉’ಕ್ಷತ್ರಿಯನು ಬ್ರಾಹ್ಮಣನಿಗೆ ಬೈದರೆ ನೂರು ಪಣಗಳ ದಂಡವು, ವೈಶ್ಯನ್ನು ಬ್ರಾಹ್ಮಣನಿಗೆ ಬೈದರೆ ಇನ್ನೂರು ಪಣಗಳ ದಂಡವು, ಶೂದ್ರ ಬ್ರಾಹ್ಮಣನಿಗೆ ಬೈದರೆ ಅತ ವಧೆಗೆ ಅರ್ಹತನ್ನು. ಆದರೆ, ಅದೇ ಬ್ರಾಹ್ಮಣನು ಕ್ಷತ್ರಿಯ, ವೈಶ್ಯ, ಶೂದ್ರನಿಗೆ ಬೈದರೆ ಅನುಕ್ರಮವಾಗಿ ಐವತ್ತು, ಇಪ್ಪತ್ತೈದು, ಹನ್ನೆರಡು ಪಣಗಳ ದಂಡವು’ (ಅ-8:267-268)

👉’ಶೂದ್ರರೆಲ್ಲ ಬ್ರಾಹ್ಮಣರ ಗುಲಾಮರು.’ (ಅ-8:410)

👉ಶೂದ್ರರ ಹತ್ಯೆಯೂ ಬೆಕ್ಕು, ಮುಂಗುಸಿ, ಕಪ್ಪೆ, ನಾಯಿ, ಕತ್ತೆ, ಉಡ, ಕಾಗೆ, ಗೂಗೆಗಳ ಹತ್ಯೆಗೆ ಸಮಾನ (ಅ-10:131)

ಮನುವಿನ ಶಾಸನದಲ್ಲಿ ಶೂದ್ರರಿಗೆ ಮತ್ತು ಸ್ತ್ರೀಯರಿಗೆ ಯಾವುದೇ ಸ್ಥಾನಮಾನಗಳಿಲ್ಲ. ಇನ್ನು ಅಸ್ಪೃಶ್ಯರ ಕುರಿತು ಮನುವು ಹೇಳುವ ಕಾಯ್ದೆಗಳು ಇದಕ್ಕಿಂತಲೂ ತುಂಬಾ ಅಮಾನವೀಯವಾದವು.

👉’ಊರ ಹೊರಗೆಯೇ ಅಸ್ಪೃಶ್ಯರ ವಾಸಸ್ಥಾನ, ನಾಯಿ, ಕತ್ತೆಗಳೆ ಅವರ ಸೊತ್ತು, ಹೆಣದ ಬಟ್ಟೆಯೇ ಅವರ ಉಡುಗೆ ತೊಡುಗೆ, ಒಡೆದ ಮಣ್ಣಿನ ಪಾತ್ರೆಗಳಲ್ಲಿಯೇ ಅವರ ಊಟ ಉಪಚಾರ. ಕಟ್ಟಿಗೆ ಕಬ್ಬಿಣದ ವಸ್ತ್ರಗಳೆ ಅವರ ಒಡವೆ ಆಭರಣಗಳು. ನಿರಂತರ ಅಲೆಮಾರಿ ಸಂಚಾರವೇ ಅವರಿಗೆ ಗತಿ.’ (ಅ-10: 51-52)

👉’ಊರ ಹೊರಗೆ ಇರುವ ಅಸ್ಪೃಶ್ಯರಿಗೆ ಊರ ಒಳಗೆ ಪ್ರವೇಶವಿಲ್ಲ. ಆದರೆ ರಾಜಾಜ್ಞೆಯಂತೆ ಅವರಿಗೆ ಗುರ್ತು ಮಾಡಿದ ಸ್ಥಳಗಳಲ್ಲಿ ಮಾತ್ರ ಅದು ಸಹ ಹಗಲು ಹೊತ್ತಿನಲ್ಲಿ ಊರ ಒಳಗೆ ಬಂದು ನಿರ್ಗತಿಕರ ಶವ ಸಂಸ್ಕಾರ ಮಾಡಬಹುದು.'(ಅ-10:55)

ಹೀಗೆ ಪಟ್ಟಿ ಮಾಡುತ್ತಾ ಹೇಳುತ್ತಾ ಹೋದರೆ ಇದು ಒಂದು ದೊಡ್ಡ ಪುಸ್ತಕವೇ ಆಗಬಹುದು. ಶೂದ್ರಾಸ್ಪೃಶ್ಯರ ಮೇಲೆ ಇಷ್ಟೊಂದು ಕ್ರೂರ್ಯ ಕಾರುವ ಮನು ಶಾಸನವು ಮತ್ತೆ ಈ ನೆಲದ ಕಾಯ್ದೆಯಾಗಬೇಕೆ?

ಸಂಗಿಗಳು ಸೃಷ್ಟಿಸಿಕೊಂಡ ಹಿಂದೂ ರಾಷ್ಟ್ರದ ಹೊಸ ಸಂವಿಧಾನದಲ್ಲಿ ಸನಾತನ ಧರ್ಮದ ಅನುಯಾಯಿಗಳು ಮತ್ತು ವೇದಾಧ್ಯಯನ ಮಾಡಿದವರು ಮಾತ್ರ ಸಂಸತ್ತಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಿದೆಯಂತೆ. ಹಾಗೂ ಆಧುನಿಕ ಶಿಕ್ಷಣವನ್ನು ನಿಷೇಧಿಸಿ ಗುರುಕುಲ ಶಿಕ್ಷಣ ನೀತಿ ಜಾರಿಗೊಳಿಸಲಾಗುವುದಂತೆ. ಹಾಗಾದರೆ ಉಳಿದ ಧರ್ಮಿಯರು ಎಲ್ಲೋಗಬೇಕು.?

ಗುರುಕುಲ ಶಿಕ್ಷಣದ ನೀತಿಗೆ ಬಂದರೆ ಇಲ್ಲಿ ಶೂದ್ರ ಮತ್ತು ಅಸ್ಪೃಶ್ಯರಿಗೆ ಪ್ರವೇಶವೇ ಇಲ್ಲ. ಶೂದ್ರ ಏಕಲವ್ಯ ಗುರು ದ್ರೋಣಾಚಾರ್ಯನ ಬಳಿ ವಿದ್ಯೆ ಅರಸಿ ಹೋದಾಗ ದ್ರೋಣಾಚಾರ್ಯ ಏಕಲವನಿಗೆ ನಾನು ಶೂದ್ರರಿಗೆ ವಿದ್ಯೆ ಕಲಿಸುವುದಿಲ್ಲ ಎಂಬ ಕಾರಣ ನೀಡಿ ತಿರಸ್ಕರಿಸಿರುವುದು ನಾವು ಮಹಾಭಾರತದಲ್ಲಿ ಕಾಣಬಹುದು. ವೇದಾಧ್ಯಯನ ಹೇಳಿಕೊಡುವುದು ಗುರುಕುಲಗಳಲ್ಲಿಯೇ ಅಲ್ಲವೇ? ಗುರುಕುಲಗಳಲ್ಲಿ ಶೂದ್ರ ಅಸ್ಪೃಶ್ಯರಿಗೆ ಪ್ರವೇಶವೇ ಇಲ್ಲದ ಮೇಲೆ ಇವರು ವೇದಾಧ್ಯಯನ ಮಾಡುವುದಾದರೂ ಹೇಗೆ? ವೇದವೇ ಅಧ್ಯಯನ ಮಾಡದೆ ಹೋದರೆ ಇವರು ಸಂಸತ್ತು ಪ್ರವೇಶಿಸುವುದಾದರೂ ಹೇಗೆ? ಸಂಸತ್ತೆ ಪ್ರವೇಶಿಸದೇ ಹೋದರೆ ಇವರು ಆಳುವ ವರ್ಗವಾಗುವುದಾದರೂ ಹೇಗೆ?

ಹಿಂದೂ ರಾಷ್ಟ್ರದ ಕನಸು ಕಾಣುತ್ತಿರುವ ವಿಪ್ರರ ಮೊದಲ ಟಾರ್ಗೆಟ್ ಶೂದ್ರರೆ ಎಂಬುವುದು ಅಲ್ಲಗಳಿವುಂತಿಲ್ಲ. ನಂತರದ ಸ್ಥಾನದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಇದನ್ನು ಅರ್ಥಮಾಡಿಕೊಳ್ಳದೆ ಬಹುತೇಕ ಶೂದ್ರರು ಎಡವುತ್ತಿರುವುದು ಬಹುದೊಡ್ಡ ದುರಂತ.!

ಸಂಗಿಗಳ ಕಲ್ಪನೆಯ ಹಿಂದು ರಾಷ್ಟ್ರದಲ್ಲಿ ವೈದಿಕರಾದ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಸಮುದಾಯದವರನ್ನು ಹೊರತುಪಡಿಸಿ ಉಳಿದವರ್ಯಾರು ಆಳುವ ದೊರೆಗಳಾಗಲಾರರು. ಅವರೆಲ್ಲರೂ ಈ ಮೇಲಿನ ಮೂರು ವರ್ಣದವರ ಚಾಕರಿ ಮಾಡಿಕೊಂಡು ಗುಲಾಮರಾಗಿ ಇರುವಂತಹ ದುಸ್ಥಿತಿ ಈ ಹಿಂದೂ ರಾಷ್ಟ್ರದಲ್ಲಿ ನಿರ್ಮಾಣಗೊಳ್ಳುತ್ತದೆ. ಒಮ್ಮೆ ಈ ಮನುವಿನ ಸಂತತಿಗಳು ಹೆಣೆದಿರುವ ಗುಲಾಮಗಿರಿಯ ಕೆಸರಲ್ಲಿ ಸಿಲುಕಿ ಬಿದರೆ ಮೇಲೆ ಬರುವುದು ತುಂಬ ಕಷ್ಟಕರ. ಒಂದು ವೇಳೆ ಈ ನೆಲದ ಬಹುಜನರು ಎಚ್ಚರ ತಪ್ಪಿದರೆ ಮನುವಾದಿಗಳು ಖಂಡಿತ ಅ ಕೆಸರಲ್ಲಿ ತಳ್ಳೇ ತಳ್ಳುತ್ತಾರೆ.

ಹಿಂದೊಮ್ಮೆ ಈ ನೆಲದ ಬಹುಜನರು ಎಚ್ಚರ ತಪ್ಪಿದಾಗ ಪುಷ್ಯಮಿತ್ರ ಶು೦ಗನ ಆಡಳಿತದಲ್ಲಿ ಸುಮತಿಭಾರ್ಗವ ಎಂಬ ಮನುವಿನಿಂದ ರಚಿಸಿಕೊಂಡ ಮನುಸ್ಮೃತಿಯ ಕಾಯ್ದೆಯಿದಾಗಿ ಈ ನೆಲದ ಬಹುಜನರು ಸುಮಾರು ಎರಡು ಸಾವಿರಕ್ಕಿಂತ ಅಧಿಕ ವರ್ಷಗಳ ಕಾಲ ಶಾಶ್ವತವಾದ ಗುಲಾಮಗಿರಿಯಲ್ಲಿ ಬದುಕುವಂತಾಗಿತ್ತು.

ಇಂಗ್ಲಿಷರ ಆಗಮನದಿಂದಾಗಿ ಈ ನೆಲದಲ್ಲಿ ಆಧುನಿಕ ಶಿಕ್ಷಣಕ್ಕೆ ಅಡಿಪಾಯ ಬಿದ್ದು ಶೂದ್ರ ಅಸ್ಪೃಶ್ಯರಿಗೆ ವಿದ್ಯದ ಬಾಗಿಲುಗಳು ತೆರೆದುಕೊಂಡವು. ಇಂತಹ ಮಷೀನ್ ಸ್ಕೂಲ್ಗಳಲ್ಲಿ ವಿದ್ಯೆ ಕಲಿತ ಬಾಬಾಸಾಹೇಬರು ತಮ್ಮ ನಿರಂತರ ಹೋರಾಟ ಮತ್ತು ತ್ಯಾಗದಿಂದಾಗಿ ಈ ಗುಲಾಮ ಗುರಿಯ ಸಂಕೋಲೆಯನ್ನು ಕಡೆದೆಸೆದಿದರು.

ಸಂಗಿಗಳ ಈ ನಡೆಯನ್ನು ನಾವು ಕೇವಲವಾಗಿ ಕಡೆಗಣಿಸುವುದು ಅಷ್ಟೊಂದು ಒಳ್ಳೆಯದಲ್ಲ ಏಕೆಂದರೆ ಅವರು ಸಕಾಲ ಪೂರ್ವ ಸಿದ್ಧತೆಗಳೊಂದಿಗೆ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ನಾವು ರಾಜರಂತೆ ಬಾಳಬೇಕಾದರೆ ಸಂಗಿಗಳ ಈ ಕಾರ್ಯ ಯಶಸ್ವಿಯಾಗಿದಂತೆ ತಡೆಯಲೇ ಬೇಕು. ಬಾಬಾಸಾಹೇಬರು ನೀಡಿದ ಸಂವಿಧಾನವನ್ನು ನಾವು ರಕ್ಷಿಸಿಕೊಳ್ಳಲೇ ಬೇಕು.

ಅಶ್ವಜೀತ ದಂಡಿನ ಬೀದರ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *