Oplus_131072

ಒಡಲೊಳಗೆ.

ಒಂಭತ್ತು ಮಾಸವಿಡಿ ಬೆಳೆಸಿದಳೆನ್ನ
ಆ ಕತ್ತಲ ಕೋಣೆಯಲಿ
ತಾ ತಿಂದಿದ್ದ ಎಂಜಲು ತಿನಿಸಿದಳೆನ್ನ
ಆ ನೆತ್ತರ ಶರಧಿಯಲಿ.

ಬೆಳೆಸಿದನ್ನ ನರಗಳ ನಡುವೆ
ಆ ಮಾಂಸದ ಖಂಡದಲಿ
ಅಂಗೈಯೊಳಗಿನ ಲಿಂಗದ ಹಾಗೆ
ಏಳು ಪದರ ಹೊದಿಕೆಯಲಿ

ಕರೆದನು ಎನ್ನ ಆ ದೇವ ಜಗತ್ತಿಗೆ
ಮುಗಿದಿತ್ತು ಮಾಸ ಅಂದು
ಪಡಲಾರದ ಕಷ್ಟ ಪಟ್ಟಾಳು ಹೆತ್ತಾಕಿ
ಜಗತ್ತಿಗೆ ಬರುವ ದಿನದಂದು

ಬರುವಾಗ ಹತ್ತಿತ್ತೋ ಹೊಳಿಯಂದು
ನಡು ದಾರಿಯಲಿ
ಹೊಳೆ ದಾಟಿ ಹೊರ ಬಂದಾಗ
ದಕ್ಕಿತು ಸ್ವರ್ಗದ ದಾರಿ.

-ಅಜಿತ.ಎನ್.ನೇಳಗಿ.
ಬೀದರ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *