Oplus_131072

ದಸರಾ ಸಂಭ್ರಮ

ಕರ್ನಾಟಕದ ಸೊಬಗಿನ ನಾಡಹಬ್ಬ ದಸರ
ನವದಿನ ನವಶಕ್ತಿ ದೇವತೆಯ ಆಡಂಬರ
ಮೈಸೂರು ರಾಜಒಡೆಯರ ಆಳ್ವಿಕೆಯ ಸಡಗರ
ಒಡ್ಡೋಲಗ ನೋಡಲು ಬಲು ಸುಂದರ//

ನೋಡಲಂದ ಅರಮನೆಯ ದೀಪಗಳ ಅಲಂಕಾರ
ಜೀವಂತವಾಗಿದೆ ನಾಡಿನ ಸಂಸ್ಕೃತಿ ಸಂಸ್ಕಾರ
ನಿತ್ಯವೂ ದೇವಿಗೆ ಪೂಜೆಯ ಸತ್ಕಾರ
ಸವಿಯಲು ಆನಂದ ನಯನ ಮನೋಹರ//

ನವರಾತ್ರಿ ನವೋಲ್ಲಾಸ ಜೀವನ ಉತ್ಸಾಹಕರ
ದೇವಿಗೆ ನಿತ್ಯವೂ ಸುಂದರ ಅಲಂಕಾರ
ದುಷ್ಟ ಸಂಹಾರಕ್ಕೆ ಎತ್ತಿದ್ದಳು ಅವತಾರ
ಗಜಪಡೆ ಸಜ್ಜಾಗಿದೆ ಹೊರಲು ಅಂಬಾರಿಭಾರ//

ಪ್ರತಿದಿನ ಭಕ್ತಿಯಲ್ಲಿ ಬನ್ನಿವೃಕ್ಷ ಪೂಜಿಸುವರು
ವಿವಿಧ ಬೇಡಿಕೆ ಸಲ್ಲಿಸುವರು ಮಹಿಳೆಯರು
ಅಭಯ ಆಶೀರ್ವಾದ ನೀಡುವನು ದೇವರು
ದೇವಿಯ ದರ್ಶನದಿಂದ ಎಲ್ಲರೂ ಪಾವನರಾದರು//

ರಾವಣನ ಸಂಹಾರದಿಂದ ರಕ್ಕಸಗುಣ ನಾಶವಾಗಿದೆ
ಶ್ರೀರಾಮನ ಸಮರದ ವಿಜಯದ ಪ್ರತೀಕವಾಗಿದೆ
ಪಾಂಡವರ ಅಜ್ಞಾತವಾಸ ಮುಗಿದ ದಿನವಾಗಿದೆ
ವಿಜಯವ ಆಚರಿಸುವ ಭಾಗ್ಯ ನಮ್ಮದಾಗಿದೆ

                ಎಸ್ ವಿ ಶಾಂತಕುಮಾರ                    ಪಲ್ಲಾಗಟ್ಟಿ. ಜಗಳೂರು.
ದಾವಣಗೆರೆ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *