ಆರೋಗ್ಯಕ್ಕೆ ಬಲು ಹಿತಕಾರಿ
ಕಮಲಾಪುರದ ಕೆಂಬಾಳೆ ಹಣ್ಣು.
– ದೇವೇಂದ್ರ ಕಟ್ಟಿಮನಿ. ಹಿಪ್ಪರಗಾ ಬಾಗ.
ಕಮಲಾಪೂರ ಎಂದರೆ ಬಾಳೆಹಣ್ಣಿಗೆ ಪ್ರಸಿದ್ಧಿಯನ್ನು ಪಡೆದಿದೆ. ಅದರಲ್ಲೂ ಕೆಂಬಾಳೆ ಹಣ್ಣಿಗೆ ಇದು ತುಂಬ ಹೆಸರುವಾಸಿಯಾಗಿದೆ.
ಪ್ರಪಂಚದ 140ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಬೆಳೆಯುವ ಈ ಕೆಂಬಾಳೆ ಹಣ್ಣು
ಭಾರತದ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಭಾರತದಲ್ಲಿ ಇದರ ಒಟ್ಟು 50 ಪ್ರಕಾರದ ತಳಿಗಳಿವೆ ಅದರಲ್ಲಿ ಕರ್ನಾಟಕದ ಕಲಬುರಗಿ ಜಿಲ್ಲೆಯ ಕಮಲಾಪುರದ ಕೆಂಬಾಳೆಯು ಒಂದು ವಿಶಿಷ್ಟವಾದ ರುಚಿ ಮತ್ತು ಸ್ವಾದಿಷ್ಟ ಹೊಂದಿರುವ ತಳಿಯಾಗಿದೆ .
ಭೂಮಿಯ ಮೇಲ್ಮೈನಲ್ಲಿ ವಿವಿಧ ರೀತಿಯ ಸಸ್ಯ ವರ್ಗಗಳು ಕಾಣಸಿಗುತ್ತವೆ. ಹಾಗೆ ಆಯಾ ಪ್ರದೇಶಕ್ಕನುಗುಣವಾಗಿ ಭೌಗೋಳಿಕ ಗುಣಲಕ್ಷಣಗಳು ಹೊಂದಿರುತ್ತವೆ. ಮುಖ್ಯವಾಗಿ ಸಸ್ಯಗಳಲ್ಲಿ ಎರಡು ರೀತಿಯ ವರ್ಗಗಳಾಗಿ ವಿಂಗಡಿಸಲಾಗಿದೆ.
1) ಭೂ ಸಸ್ಯಗಳು 2) ಜಲಸಸ್ಯಗಳು ಎಂದು. ಇವುಗಳಲ್ಲಿ ಮಾನವನು ಅಲ್ಲದೇ ಎಲ್ಲಾ ಪ್ರಾಣಿ ಪಕ್ಷಿಗಳು ತಮ್ಮ ಆಹಾರಕ್ಕಾಗಿ ಬಳಸಿಕೊಳ್ಳುವ ಹಣ್ಣಿನ ಸಸ್ಯಗಳಂತೂ ಒಂದು ನಿರ್ಧಿಷ್ಟ ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಿಭಿನ್ನ ಹಣ್ಣುಗಳು ಬೆಳೆಯುತ್ತವೆ. ಅಂತಹ ಹಣ್ಣಿನ ವರ್ಗಕ್ಕೆ ಸೇರಿದ ಕೆಂಪು ಬಾಳೆ ಆಕರ್ಷಕವಾದ ಗುಣಲಕ್ಷಣಗಳು ಹೊಂದಿದೆ.

ಇದು ಒಂದು ವಿಶೇಷವಾದ ಬಾಳೆ ಹಣ್ಣಿನ ತಳಿಯಾಗಿದ್ದು, ಇದನ್ನು ಭಾರತದ ಕರ್ನಾಟಕದ ಕಲಬುರಗಿ ಜಿಲ್ಲೆಯ ಕಮಲಾಪುರ ಗ್ರಾಮದ ಕೆಂಬಾಳೆ ಕಣಿವೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಬೆಳೆಯಲಾಗುತ್ತದೆ.
ಇದನ್ನು ‘ಶ್ರೀಮಂತರ ಬಾಳೆ ಹಣ್ಣು’ ಎಂದು ಕೂಡ ಕರೆಯಲಾಗುತ್ತದೆ, ಏಕೆಂದರೆ ಇದು ಗೊಬ್ಬರ (ಕಂಪೋಸ್ಟ್, ನಿರ್ದಿಷ್ಟವಾಗಿ ದೊಡ್ಡ ಪ್ರಮಾಣದಲ್ಲಿ), ನೀರು ಮತ್ತು ಕಾರ್ಮಿಕರೊಂದಿಗೆ ಕೃಷಿಯಲ್ಲಿ ಹೆಚ್ಚಿನ ಒಳಹರಿವಿನಿಂದ ಇತರ ಬಾಳೆಹಣ್ಣುಗಳಿಗೆ ಹೋಲಿಸಿದರೆ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. ಅದರ ಚರ್ಮವು ಕೆಂಪು ಬಣ್ಣದ್ದಾಗಿದ್ದು, ತಿರುಳು ಕೆನೆ ಬಣ್ಣದಲ್ಲಿ ಆಹ್ಲಾದಕರ ರುಚಿಯನ್ನು ಹೊಂದಿರುತ್ತದೆ. ಇದು ವಿಟಮಿನ್ ಸಿ ಮತ್ತು ಬಿ6 ನೊಂದಿಗೆ ಹೆಚ್ಚಿನ ಕ್ಯಾಲೋರಿ ಮೌಲ್ಯವನ್ನು ಹೊಂದಿದ್ದು ಆರೋಗ್ಯಕರ ಆಹಾರವಾಗಿದೆ.

ತೋಟಗಾರಿಕಾ ಉತ್ಪನ್ನವನ್ನು ಭಾರತ ಸರ್ಕಾರದ ಸರಕುಗಳ ಭೌಗೋಳಿಕ ಸೂಚನೆಗಳ (ನೋಂದಣಿ ಮತ್ತು ರಕ್ಷಣೆ) ಕಾಯಿದೆ (GI ಕಾಯಿದೆ) 1999 ರ ಅಡಿಯಲ್ಲಿ ರಕ್ಷಿಸಲಾಗಿದೆ. ಇದನ್ನು ‘ಕಮಲಾಪುರ ಕೆಂಪು ಬಾಳೆಹಣ್ಣು’ ಎಂಬ ಶೀರ್ಷಿಕೆಯಡಿಯಲ್ಲಿ ಹಕ್ಕು ಪತ್ರಗಳ ವಿನ್ಯಾಸಗಳು ಮತ್ತು ಟ್ರೇಡ್ಮಾರ್ಕ್ಗಳ ಕಂಟ್ರೋಲರ್ ಜನರಲ್ ಮೂಲಕ ನೋಂದಾಯಿಸಲಾಗಿದೆ ಮತ್ತು GI ಅಪ್ಲಿಕೇಶನ್ ಸಂಖ್ಯೆ 133 ರಲ್ಲಿ 31ನೇ ತರಗತಿಯ ಅಡಿಯಲ್ಲಿ ತೋಟಗಾರಿಕೆ ವಸ್ತು ಎಂದು ದಾಖಲಿಸಲಾಗಿದೆ. ಅದರ GI ಗುರುತಿನ ದೃಷ್ಟಿಯಿಂದ, ಈ ವಿಧದ ಬಾಳೆಹಣ್ಣುಗಳ ಮೇಲೆ ಜೆನೆಟಿಕ್ ಇಂಜಿನಿಯರಿಂಗ್ ಪರೀಕ್ಷೆಗಳನ್ನು ಮಾಡಲು ಅನುಮತಿಸಲಾಗುವುದಿಲ್ಲ ಮತ್ತು ಈ ತಳಿಯು ಮೂಲವಾಗಿ ಕಮಲಾಪುರದ ರೈತ ಸಮುದಾಯದ ಆಸ್ತಿಯಾಗಿದೆ. ಈ ಕೆಂಪು ಬಾಳೆಯು ಎ.ಎ.ಎ.ಗುಂಪಿಗೆ ಸೇರಿದ ಕಾಡು ಬಾಳೆಯ ತಳಿಯಾಗಿದೆ. ಇದರ ಅಧಿಕೃತ ವೈಜ್ಞಾನಿಕ ಹೆಸರು ‘ಮೂಸಾ ಅಕ್ಯುಮಿನಾಟಾ ‘ ಎಂದು ಕರೆಯಲಾಗುತ್ತದೆ.

ಭೂಗೋಳಶಾಸ್ತ್ರದ ಪ್ರಕಾರ ಈ ತಳಿಯ ಹಣ್ಣನ್ನು ಬೆಳೆಯುವ ಹಳ್ಳಿಗಳು ಕಲಬುರಗಿ ಜಿಲ್ಲೆ ಮತ್ತು ಬೀದರ ಜಿಲ್ಲೆಯ ಗಡಿಭಾಗದ ಕಮಲಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ ರಾಜನಾಳ್, ಬಾಚನಾಳ,ಅಂತಪನಳ್ಳಿ ,ವರನಾಳ,ಭುಯ್ಯಾರ್, ನವನಿಹಾಳ್, ಓಕಳಿ, ಕಲಕುಟಗಿ, ಗ್ರಾಮಗಳಲ್ಲಿ ಮತ್ತು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಿಪ್ಪರಗ ಬಾಗ, ಗ್ರಾಮಗಳು ಸೇರಿದಂತೆ ಒಟ್ಟು 100 ಹೆಕ್ಟೆರ್ ಪ್ರದೇಶಗಳಲ್ಲಿ ಈ ಕೆಂಬಾಳೆ ಬೆಳೆಯಲಾಗುತ್ತದೆ. ಮತ್ತು ಕಮಲಾಪುರದ ಸುತ್ತಮುತ್ತಲಿನ ಮೂರು ಕಡೆ ಬೆಟ್ಟಗಳಿಂದ ಸುತ್ತುವರಿದ ಲಘು ಕಣಿವೆಯಲ್ಲಿ ಇದನ್ನು ಬೆಳೆಯಲಾಗುತ್ತದೆ. ಇದರ ಮರದ ಕಾಂಡಗಳು ತುಂಬಾ ಎತ್ತರವಾಗಿರುವುದರಿಂದ ಚಂಡಮಾರುತದಿಂದ ಹಾನಿಯಾಗದಂತೆ ಬೆಳೆಗೆ ರಕ್ಷಣೆ ನೀಡುತ್ತದೆ.

ಈ ತಳಿಯನ್ನು ಬಯಲು ಪ್ರದೇಶಗಳಲ್ಲಿ ಬೆಳೆಯಲು ಸಾಧ್ಯವಿಲ್ಲ ಎನ್ನುವುದು ಸತ್ಯದ ಮಾತು. ಇದು ಹಾಳು ಮಣ್ಣು ಮತ್ತು ಗುಡ್ಡಗಾಡು ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಈಸಸ್ಯವು ಅದರ “ದಪ್ಪವಾದ ಕಾಂಡದೊಂದಿಗೆ” ಸುಮಾರು 22 to 25 feet (6.7 to 7.6 m) ರವರೆಗೆ) ಎತ್ತರಕ್ಕೆ ಬೆಳೆಯುತ್ತದೆ. ಸುಮಾರು 3 to 3.2 feet (0.91 to 0.98 m) ) ಸುತ್ತಳೆಯತೆಯನ್ನು ಹೊಂದಿದೆ, ಮತ್ತು ಹಸಿರು ಮತ್ತು ಹಳದಿ ಬಣ್ಣಗಳ ಛಾಯೆಗಳೊಂದಿಗೆ ಬೆಳೆಯುತ್ತದೆ. ಇದರ ಎಲೆಗಳು, ಆಯತಾಕಾರದ ಆಕಾರದಲ್ಲಿ, ಹಸಿರು ಮಿಶ್ರಿತ ಹಳದಿ ಬಣ್ಣದಿಂದ ಕೂಡಿ ಉದ್ದ ಮತ್ತು ಸುಲಭವಾಗಿ ಬೆಳೆಯುತ್ತದೆ. ಸಸ್ಯದ ಹೂವುಗಳು ಮತ್ತು ಹಣ್ಣುಗಳು ಸುಮಾರು 10 ರಿಂದ 11 ತಿಂಗಳ ಅವಧಿಯಲ್ಲಿ ಹೊಂದಿಕೊಂಡು ನಂತರ ಸುಮಾರು 7-8 ತಿಂಗಳುಗಳಲ್ಲಿ ಪಕ್ವತೆಯ ಅವಧಿಯನ್ನು ಅನುಸರಿಸಿದ ನಂತರ ಸುಮಾರು 18 ತಿಂಗಳುಗಳಲ್ಲಿ ಕೊಯ್ಲು ಮಾಡಲಾಗುತ್ತದೆ.

ಪ್ರತಿ ಮರವು 15 ರಿಂದ 20 ಕೆಜಿ ಇಳುವರಿ ನೀಡುತ್ತದೆ.ಪ್ರತಿ ಎಕರೆಗೆ ಸರಾಸರಿ 11 ಟನ್, ಮತ್ತು ಸಾಮಾನ್ಯವಾಗಿ ಈ ತಳಿಯು ಕೀಟಗಳಿಂದ ಮುಕ್ತವಾಗಿದೆ. ಹಣ್ಣಿನ ಸಿಪ್ಪೆಯು ಕೆಂಪು ಮಧ್ಯಮ ಬಣ್ಣದಲ್ಲಿದ್ದು ಅದರ ತಿರುಳು ಕೆನೆ ಬಣ್ಣದಲ್ಲಿದಲ್ಲಿರುತ್ತದೆ ಹಾಗು ಉತ್ತಮ ರುಚಿಯ ಗುಣವನ್ನು ಹೊಂದಿರುತ್ತದೆ.
ಸಸಿಗಳನ್ನು ನೆಡುವಾಗ 30 ರಿಂದ 40 ಸೆಂಟಿಮೀಟರ್ ಆಳಕ್ಕೆ ಹೊಂಡಗಳನ್ನು ಅಗೆದು ನಂತರ ಅದಕ್ಕೆ ತಿಪ್ಪೆ ಗೊಬ್ಬರ, ಮಿಶ್ರಗೊಬ್ಬರ, ಬೇವಿನ ಎಲೆಗಳು, ಮೇಲ್ಮಣ್ಣು ಮತ್ತು ಸಾವಯವ ಗೊಬ್ಬರಗಳು ಹಾಗೂ ಬೂದಿಯ ತೆಳುವಾದ ಪದರವನ್ನು ತುಂಬಿಸಲಾಗುತ್ತದೆ. ಸುಮಾರು 2 ವಾರಗಳ ನಂತರ ನಾಟಿ ಮಾಡಲಾಗುತ್ತದೆ. ಎರಡು ದಿಕ್ಕಿನಲ್ಲಿ 7 ಅಡಿ ಅಂತರದಲ್ಲಿ ನಾಟಿ ಮಾಡಲಾಗುತ್ತದೆ. ಸಸ್ಯಗಳಿಗೆ ನಾಟಿಯನ್ನು ಜೂನ್, ಜುಲೈ,ಆಗಸ್ಟ ನಲ್ಲಿ ಮಾಡಲಾಗುತ್ತದೆ. ಹೊಸ ಹೊಸ ವೈಜ್ಞಾನಿಕ ತಳಿ ಮತ್ತು ತಂತ್ರಗಳು ಬರುವ ಮೊದಲು, ರೈತರೆ ಸ್ವತಹ ನಾಟಿ ಮಾಡುವ ಕಾಲದಲ್ಲಿ ಗಿಡದ ಪಕ್ಕದಲಿ ಬೆಳೆದು ಹೊರಬರುವ ಮರಿಗಳನ್ನು ಅಗೆದು, (ಅಗಿ/ ಸಸಿ) ಬೀಜಗಳನ್ನಾಗಿ ಮಾಡಿಕೊಂಡು ನೆಡುತ್ತಿದ್ದರು.
ಈ ಕಾರ್ಯ ನಿಪೂಣತೆ ಹೊಂದಿದವರಲ್ಲಿ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಿಪ್ಪರಗ ಬಾಗ ಗ್ರಾಮದ ನಿವಾಸಿಗಳಾದ ಶ್ರೀ ಅಂಬಣ್ಣ ಕಟ್ಟಿಮನಿ, ಶ್ರೀ ಶಿವಶರಣಪ್ಪ ಮಿರಕಲ್, ಚಿತ್ರಶೇಖರ್ ಮಿರಕಲ್, ಚಂದಪ್ಪ ನಡುಕರ, ರೆವಣಸಿದ್ದಪ್ಪ ನಡುಕರ, ನಾಗಣ್ಣ ಕುದಮೂಡ್ ಇವರೆಲ್ಲರೂ ಸುತ್ತಮುತ್ತಲಿನ ಹಳ್ಳಿಗಳಲ್ಲೇ, ಬಾಳೆ ತೋಟದ ತಯಾರಿಗಾಗಿ ಹೆಸರುವಾಸಿಯಾದವರು.
ಹಣ್ಣಿನ ಪೌಷ್ಟಿಕಾಂಶದ ಸ್ಥಿತಿಯ ಗುಣಮಟ್ಟವನ್ನು ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ (ಸಿಎಫ್ಟಿಆರ್ಐ) ಪರೀಕ್ಷಿಸಲಾಗಿದೆ, ಈ ಹಣ್ಣು ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಫೈಬರ್ನ ಸಂಯೋಜನೆಯನ್ನು ಹೊಂದಿದೆ ಎಂದು ಸೂಚಿಸುತ್ತದೆ. ಇದು ಇತರ ಬಾಳೆಹಣ್ಣುಗಳಿಗಿಂತ ಹೆಚ್ಚು ಉತ್ತಮವಾಗಿದೆ. ಇದರ ಕ್ಯಾಲೋರಿ ಅಂಶವು ವಿಟಮಿನ್ ಸಿ ಮತ್ತು ಬಿ 6 ಅಂಶಗಳನ್ನು ಹೊಂದಿದೆ . ಒಟ್ಟು ಕರಗುವ ಘನವಸ್ತುಗಳು (TSS) 20-22 ಡಿಗ್ರಿ ಬ್ರಿಕ್ಸ್ ಎಂದು ವರದಿಯಾಗಿದೆ. ಗುಣಮಟ್ಟದ ಮಾನದಂಡಗಳನ್ನು ನಿಯಂತ್ರಿಸುವ ಏಜೆನ್ಸಿಯು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಅರಣ್ಯ ಮತ್ತು ಪರಿಸರ ವಿಜ್ಞಾನ ವಿಭಾಗವಾಗಿದೆ. ವಿಶಿಷ್ಟ ರುಚಿಯ ಮೂಲಕ ಹೆಸರಾದ ಕಮಲಾಪುರದ ಕೆಂಪು ಬಾಳೆಗೆ ಭೌಗೋಳಿಕ ಸೂಚ್ಯಂಕ (ಜಿಐ ಟ್ಯಾಗ್) ಸಿಕ್ಕಿದ ಬಳಿಕ ಮತ್ತಷ್ಟು ಬೂಸ್ಟ್ ಸಿಕ್ಕಿದ್ದು, ಐದು ವರ್ಷದಲ್ಲಿ ಕೆಂಬಾಳೆ ಬೆಳೆಯುವ ಭೂ ಪ್ರದೇಶ ಮೂರು ಪಟ್ಟು ವಿಸ್ತರಣೆಯಾಗಿದೆ.ಕಾರಣ ತೋಟಗಾರಿಕೆ ಇಲಾಖೆಯಿಂದ 1 ಎಕರೆಗೆ 1ಲಕ್ಷ ರೂಪಾಯಿ ಸಹಾಯ ಧನ ನೀಡುತ್ತಿರುವುದರಿಂದ ಅಳಿವಿನ ಅಂಚಿನಲ್ಲಿದ್ದ ಈ ಕೆಂಬಾಳೆ ಬೆಳೆವ ರೈತರಿಗೆ ಬಲ ಬಂದಂತಾಗಿದೆ.

ವಿಶಿಷ್ಟ ರುಚಿಯ ಮೂಲಕ ಹೆಸರಾದ ಕಮಲಾಪುರದ ಕೆಂಪು ಬಾಳೆಗೆ ಭೌಗೋಳಿಕ ಸೂಚ್ಯಂಕ (ಜಿಐ ಟ್ಯಾಗ್) ಸಿಕ್ಕಿದ ಬಳಿಕ ಮತ್ತಷ್ಟು ಬೂಸ್ಟ್ ಸಿಕ್ಕಿದ್ದು, ಐದು ವರ್ಷದಲ್ಲಿ ಕೆಂಬಾಳೆ ಬೆಳೆಯುವ ಭೂ ಪ್ರದೇಶ ಮೂರು ಪಟ್ಟು ವಿಸ್ತರಣೆಯಾಗಿದೆ. ಆ ಮೂಲಕ ಅಳಿವಿನ ಅಂಚಿನಲ್ಲಿದ್ದ ಬೆಳೆಗೆ ಬಲ ಬಂದಂತಾಗಿದೆ. ಭೌಗೋಳಿಕ ಸೂಚ್ಯಂಕ ಸಿಗುವ ಮೊದಲು ಕಮಲಾಪುರದ ವಿವಿಧೆಡೆ ಕೇವಲ 20ರಿಂದ 25 ಎಕರೆಯೊಳಗೆ ರೈತರು ಈ ಕೆಂಪುಬಾಳೆ ಬೆಳೆಯುತ್ತಿದ್ದರು. ಆದರೆ, ಈಗ ಭೌಗೋಳಿಕ ಸೂಚ್ಯಂಕ ದೊರೆತ ನಂತರ 90 ಎಕರೆವರೆಗೆ ರೈತರು ಈ ಬೆಳೆಯನ್ನು ಬೆಳೆಯುತ್ತಿದ್ದು, ಲಾಭವನ್ನೂ ಪಡೆಯುತ್ತಿದ್ದಾರೆ.
ಹಳದಿ ಬಾಳೆಹಣ್ಣಿನಂತೆಯೇ ಕೆಂಪು ಬಾಳೆಹಣ್ಣುಗಳು ನಮ್ಮ ದೇಹಕ್ಕೆ ಹೆಚ್ಚು ಅಗತ್ಯವಿರುವ ಪೋಷಕಾಂಶಗಳಿಂದ ತುಂಬಿವೆ. ಕೆಂಪು ಬಾಳೆಹಣ್ಣಿನಲ್ಲಿ ಇರುವ ಪ್ರಮುಖ ಪೋಷಕಾಂಶಗಳು ಯಾವುವೆಂದರೆ.
ಕ್ಯಾಲೋರಿಗಳು -90 ಗ್ರಾಂ. ಕಾರ್ಬೋಹೈಡ್ರೇಟ್ಗಳು- 21 ಗ್ರಾಂ ಪ್ರೋಟೀನ್, ಫೈಬರ್ – 1-3 ಗ್ರಾಂ ಪೊಟ್ಯಾಸಿಯಮ್ -9 ಗ್ರಾಂ. ಮೆಗ್ನೀಸಿಯಮ್ – 1 ಗ್ರಾಂ ಹೊಂದಿದೆ. ಈ ಹಣ್ಣು ತಿನ್ನುವುದರಿಂದ ಹತ್ತಾರು ಪ್ರಯೋಜನಗಳು ಇವೆ ಎಂಬುದು ಅರಿಯಬೇಕಾಗಿದೆ.
1) ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ .
ಕೆಂಪು ಬಾಳೆಹಣ್ಣುಗಳು ನಿಮ್ಮ ರಕ್ತದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಮ್ಮ ದೇಹಕ್ಕೆ ಕೆಂಪು ರಕ್ತಕಣಗಳ ಅವಶ್ಯಕತೆ ಎಷ್ಟಿದೆ ಅನ್ನೋದು ನಮಗೆಲ್ಲಾ ತಿಳಿದೇ ಇದೆ. ಆದ್ದರಿಂದ ಕಡಿಮೆ ಕೆಂಪು ರಕ್ತ ಕಣಗಳಿರುವ ಜನರು ನಿಯಮಿತವಾಗಿ ಕೆಂಪು ಬಾಳೆಹಣ್ಣುಗಳನ್ನು ಸೇವಿಸುವುದು ಉತ್ತಮ.
2) ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
ಈ ಬಾಳೆಹಣ್ಣಿನ ಸಿಪ್ಪೆಯು ಕೆಂಪಗಾಗಿದೆ. ಇದು ಕೆಂಪು ಬಣ್ಣವನ್ನು ಕ್ಯಾರೊಟಿನಾಯ್ಡ್ಗಳಿಂದ ಪಡೆಯುತ್ತದೆ. ಕೆಂಪು ಬಾಳೆಹಣ್ಣಿನಲ್ಲಿ ಕ್ಯಾರೊಟಿನಾಯ್ಡ್ಗಳಾಗಿ ಲುಟೀನ್ ಮತ್ತು ಬೀಟಾ ಕ್ಯಾರೋಟಿನ್ ಇರುವಿಕೆಯು ನಿಮ್ಮ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಕಣ್ಣುಗಳಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳನ್ನು ಹುಟ್ಟುಹಾಕುವ ಅಪಾಯವನ್ನು ತಡೆಯುತ್ತದೆ.
3) ಜೀರ್ಣಕ್ರಿಯೆಯನ್ನು ಉತ್ತಮವಾಗಿದುತ್ತದೆ
ಕೆಂಪು ಬಾಳೆಹಣ್ಣು ಸೇವನೆಯು ಮಲಬದ್ಧತೆ, ಹೊಟ್ಟೆ ಉಬ್ಬುವುದು ಮತ್ತು ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸಲು ಉತ್ತಮವಾಗಿದೆ. ಬಾಳೆಹಣ್ಣಿನಲ್ಲಿರುವ ಹೆಚ್ಚಿನ ಫೈಬರ್ ಕರುಳಿನ ಚಲನೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಸರಿಯಾದ ಕರುಳಿನ ಚಲನೆಯು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮಲಬದ್ಧತೆಯನ್ನು ಗುಣಪಡಿಸುವ ಮೂಲಕ, ಬಾಳೆಹಣ್ಣುಗಳು ಪೈಲ್ಸ್ ಬೆಳವಣಿಗೆಯನ್ನು ಸಹ ತಡೆಯುತ್ತದೆ.
4) ತೂಕ ಇಳಿಕೆಗೆ ಸಹಾಯ ಮಾಡುತ್ತದೆ
ಸಾಮಾನ್ಯವಾಗಿ ಬಾಳೆಹಣ್ಣು ತಿಂದರೆ ತೂಕ ಹೆಚ್ಚುತ್ತದೆ ಎನ್ನಲಾಗುತ್ತದೆ. ಆದರೆ ಈ ಕೆಂಪು ಬಾಳೆಹಣ್ಣುಗಳು ತೂಕ ಇಳಿಸುವಲ್ಲಿ ನಿಮಗೆ ಸಹಾಯ ಮಾಡುತ್ತವೆ. ಬದಲಿಗೆ, ಹಳದಿ ಬಾಳೆಹಣ್ಣುಗಳಿಗೆ ಹೋಲಿಸಿದರೆ ಕೆಂಪು ಬಾಳೆಹಣ್ಣುಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ತೂಕವನ್ನು ಕಳೆದುಕೊಳ್ಳಲು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುವುದು ಅತ್ಯವಶ್ಯಕ. ಕೆಂಪು ಬಾಳೆಹಣ್ಣುಗಳು ನಿಮ್ಮ ಹಸಿವನ್ನು ನೀಗಿಸುತ್ತದೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.
5) ಮೂತ್ರಪಿಂಡದ ಕಲ್ಲುಗಳನ್ನು ತಡೆಯುತ್ತದೆ
ಮೂತ್ರಪಿಂಡದ ಕಲ್ಲುಗಳನ್ನು ಅಭಿವೃದ್ಧಿಪಡಿಸುವ ಅಪಾಯವಿರುವ ಜನರಿಗೆ ಕೆಂಪು ಬಾಳೆಹಣ್ಣುಗಳನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಕೆಂಪು ಬಾಳೆಹಣ್ಣು ಪೊಟ್ಯಾಸಿಯಮ್ನಲ್ಲಿ ಹೆಚ್ಚು ಸಮೃದ್ಧವಾಗಿದೆ ಮತ್ತು ಪೊಟ್ಯಾಸಿಯಮ್ನ ಹೆಚ್ಚಿನ ಸೇವನೆಯು ಮೂತ್ರಪಿಂಡದ ಕಲ್ಲುಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ಕೆಂಪು ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಅಂಶವು ಹಳದಿ ಬಾಳೆಹಣ್ಣಿಗಿಂತ ಹೆಚ್ಚಿನದಾಗಿದೆ, ಇದು ಕಿಡ್ನಿ ಸ್ಟೋನ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
6) ಮಧುಮೇಹ ರೋಗಿಗಳಿಗೆ ಒಳ್ಳೆಯದು.
ಬಾಳೆಹಣ್ಣು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಯಾಕೆಂದರೆ ಅದರಲ್ಲಿ ಸಕ್ಕರೆ ಅಂಶ ಹೆಚ್ಚು ಇರುತ್ತದೆ. ಆದರೆ ಮಧುಮೇಹ ರೋಗಿಗಳಿಗೆ
ವಿಶೇಷವಾಗಿ ಟೈಪ್ 2 ಡಯಾಬಿಟಿಸ್ ಇರುವವರಿಗೆ ಕೆಂಪು ಬಾಳೆಹಣ್ಣುಗಳನ್ನು ಉತ್ತಮ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಕೆಂಪು ಬಾಳೆಹಣ್ಣುಗಳು ಫೈಬರ್ನಲ್ಲಿ ಹೆಚ್ಚು ಸಮೃದ್ಧವಾಗಿವೆ ಮತ್ತು ಫೈಬರ್ ಸೇವನೆಯು ಮಧುಮೇಹ ರೋಗಿಗಳಿಗೆ ಉತ್ತಮವಾಗಿದೆ. ಕೆಂಪು ಬಾಳೆಹಣ್ಣಿನ ಗ್ಲೈಸೆಮಿಕ್ ಸೂಚ್ಯಂಕವು ಹಳದಿ ಬಾಳೆಹಣ್ಣುಗಳಿಗಿಂತ ತುಂಬಾ ಕಡಿಮೆಯಾಗಿದೆ. ಆದ್ದರಿಂದ ಇದು ಮಧುಮೇಹ ರೋಗಿಗಳಿಗೆ ಉತ್ತಮವಾಗಿದೆ.
7) ಕೂದಲಿಗೆ ಒಳ್ಳೆಯದು
ಕೆಂಪು ಬಾಳೆಹಣ್ಣು ಬರಿ ತಿನ್ನಲು ಮಾತ್ರವಲ್ಲ, ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ನಿಯಂತ್ರಣಕ್ಕೆ ಹೆಸರುವಾಸಿಯಾಗಿದೆ.
ಚಳಿಗಾಲದಲ್ಲಿ, ಕೂದಲನ್ನು ತೇವಗೊಳಿಸಲು ತೆಂಗಿನಕಾಯಿ, ಎಳ್ಳು ಅಥವಾ ಬಾದಾಮಿ ಎಣ್ಣೆಯೊಂದಿಗೆ ಕೂದಲಿನ ಹೇರ್ ಮಾಸ್ಕ್ ಆಗಿ ಬಳಸಬಹುದು. ಇದನ್ನು ಅಭ್ಯಾಸ ಮಾಡುವುದರಿಂದ ಕೂದಲು ಉದುರುವಿಕೆ ಮತ್ತು ಒಣ ಕೂದಲಿನ ಸಮಸ್ಯೆ ಕೂಡ ನಿಯಂತ್ರಣಕ್ಕೆ ಬರುತ್ತದೆ.
8) ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ
9) ಇರುಳು ಕುರುಡು ಸಮಸ್ಯೆಯಿಂದ ರಕ್ಷಿಸುತ್ತದೆ
10) ವಿಶೇಷವಾಗಿ ಮಹಿಳೆಯರಿಗೆ ಮುಟ್ಟಿನ ಬೇಳೆ ಕಾಡುವ ಹೊಟ್ಟೆ ನೋವಿಗೆ ಪರಿಹಾರ ನೀಡುತ್ತದೆ
11) ಮೂಳೆಗಳು ಬಲಗೊಳ್ಳುತ್ತವೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
12) ಪೊಟಾಷಿಯಂ ಇದರಲ್ಲಿ ಪೊಟ್ಯಾಶಿಯಂ ಪ್ರಮಾಣ ಹೆಚ್ಚಾಗಿರುವುದರಿಂದ ಕಿಡ್ನಿ ಕಲ್ಲುಗಳು ಉಂಟಾಗದಂತೆ ನೋಡಿಕೊಳ್ಳುತ್ತದೆ.
ಅಷ್ಟೇ ಅಲ್ಲದೆ ಕೆಂಪು ಬಾಳೆಹಣ್ಣು ಹೃದಯದ ಕಾಯಿಲೆ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಎಂದು ಹೇಳುತ್ತಾರೆ. ಇದರ ಜೊತೆಯಲ್ಲಿ ಕ್ಯಾಲ್ಸಿಯಂ ಅನ್ನು ಹಾಗೆ ಉಳಿಸಿಕೊಳ್ಳುವುದರಿಂದ ಮೂಳೆಗಳ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಕೈ-ಕಾಲು ಜೋಮ್ ಹಿಡಿಯುವುದನ್ನು ತಡೆಯುತ್ತದೆ.
ಮಾರುಕಟ್ಟೆಯ ಸಮಸ್ಯೆ : ಈ ಕಮಲಾಪುರದ ಕೆಂಬಾಳೆ ಹಣ್ಣಿಗೆ ಸೂಕ್ತವಾದ ಮಾರುಕಟ್ಟೆಯ ಕೊರತೆಯಿದೆ. ಹಾಪ್ಕಾಮ್ಸ್ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ, ಹೆಚ್ಚು ಖರೀದಿಸುವುದಿಲ್ಲ. ಇದರಿಂದ ಹೆಚ್ಚು ಬೆಳೆದ ರೈತರಿಗೆ ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ. ಇದರಿಂದ ರೈತರು ಕಮಲಾಪುರ ರಾಷ್ಟ್ರೀಯ ಹೆದ್ದಾರಿ 50ರ ಮೇಲೆ ಡಜನ್ಗೆ 120ರಿಂದ 180 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಕೆಲವೊಮ್ಮೆ 250 ರೂ. ಒಂದು ಡಜನ್ ಲೆಕ್ಕದಲ್ಲಿ ಮಾರಾಟ ಮಾಡುವುದರಿಂದ ಸಾಮಾನ್ಯ ಜನರಿಗೆ ಕೈಗೆಟುಕದಾಗಿದ್ದು, ಆದ್ದರಿಂದಲೇ ಇದಕ್ಕೆ ‘ಶ್ರೀಮಂತರ ಬಾಳೆ ಹಣ್ಣು’ ಎಂದು ಕರೆಯಲಾಗುತ್ತಿದೆ. ಆದ್ದರಿಂದ ಸರ್ಕಾರ ಈ ಬೆಳೆ ಬೆಳೆಯುವ ರೈತರಿಗೆ ಹೆಚ್ಚು ಹೆಚ್ಚಾಗಿ ಸಹಾಯಧನ ನೀಡಿ ಪ್ರೋತ್ಸಾಹ ನೀಡುವುದರೊಂದಿಗೆ ಮಾರುಕಟ್ಟೆಯ ವ್ಯವಸ್ಥೆಯು ಮಾಡಿ ಎಲ್ಲ ಬಡಜನತೆಯ ಕೈಗೆಟುಕುವಂತೆ ಕಡಿಮೆ ದರದಲ್ಲಿ ಕೆಂಬಾಳೆ ಹಣ್ಣು ದೊರಕುವಂತೆ ಮಾಡಬೇಕಾಗಿದೆ.
– ದೇವೇಂದ್ರ ಕಟ್ಟಿಮನಿ. ಹಿಪ್ಪರಗ ಬಾಗ ತಾ.ಬಸವಕಲ್ಯಾಣ ಜಿ. ಬೀದರ
ಪ್ರಕಟಿಸಿದಕ್ಕೆ ಧನ್ಯವಾದಗಳು ಸರ್.