ಅರಿತರೆ ಅರಿವು.
ಅಂತರ್ಜ್ಞಾನದಿಂದ ಅರಿತರೆ ಅರಿವು ಮೂಡುವುದು
ಅಜ್ಞಾನದಿಂದ ಅಂಧಕಾರ ಮನವ ಬಿಡದಿರುವುದೇ
ಪ್ರೀತಿಯ ತೋರುತ ಬಾಳಲಿ ಸಮನ್ವಯವಾಗುವುದು
ದ್ವೇಷದಿ ಕಾಲಿಡುವ ಅಂಗಾಲಿಗೆ ಬೇಲಿಯಾಗುವುದೇ
ಜಗದ ನೆಲಜಲಗಳಿಗೆ ಆವರಿಸಿದರೆ ಕೆಡುಕು ಬುದ್ದಿಯು
ಆಹಾಕಾರದಿ ತೃಷೆಯ ತಣಿಯಲು ಉಳಿಗಾಲವಿದೆಯೇ
ಗಂಧಗಾಳಿಯ ಸುವಾಸನೆ ಬೀರಲು ಸುಮಗಳೆಲ್ಲವು
ದುರ್ನಾತ ಚಿಮ್ಮವಂತಾದರೆ ಬದುಕಿಲ್ಲಿ ಉಸಿರಾಡುವುದೇ
ಭಾವದ ಭಾಷೆಯಲ್ಲಿ ನುಡಿಯಂತೆ ನಡೆಯಿಲ್ಲದಂತಾದರೆ
ಗೌರವವೆಲ್ಲಿ ಧಕ್ಕುವುದು ಮನುಷ್ಯತ್ವದ ಹಾದಿಬೀದಿಗೆ
ಅಸಹಾಯಕತೆ ತುಂಬಿದ ಕೊಡದಲ್ಲಿ ಮಲಿತನೀರಂತಾದರೆ
ಹಮ್ಮುಬಿಮ್ಮಿನ ತೋರಿಕೆಯ ಜೀವವಿಂದು ಬಲಿಯಾದಹಾಗೆ
– ಸವಿತಾ ಮುದ್ಗಲ್
ಬಳ್ಳಾರಿ