Oplus_131072

ಬಡವನ ದೀಪಾವಳಿ.

ಅದೊಂದು ದಿನ ದೀಪಾವಳಿ ಹಬ್ಬದ ಸಡಗರ.
ಅವನೊಬ್ಬ ಕಡು ಬಡವ
ಅವನಿಗಿದ್ದರು ಐದಾರು ಮಕ್ಕಳು
ಅದರಲ್ಲಿ ಮೂರು ಗಂಡು ಮೂರು ಹೆಣ್ಣು

ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳನ್ನು
ಕರೆದುಕೊಂಡು ಬನ್ನಿ ಎಂದಳು ಅವನ ಹೆಂಡತಿ
ಅವರು ಬಂದರೆ ಅಳಿಯರು ಬರುವರು
ಅವರಿಗೆ ಹೊಸ ಬಟ್ಟೆ ಬೇಕು ಬಳೆ ಕುಪ್ಪಸ ಬೇಕು ಕರೆಯುವುದು ಬೇಡ ಎಂದ.

ಮನೆಯಲ್ಲಿದ್ದ ಮೂರು ಗಂಡು ಮಕ್ಕಳು
ಹೊಸ ಬಟ್ಟೆ ಬೇಕು ಹೊಸ ಬಟ್ಟೆ ಬೇಕು
ಎಂದು ಕಾಡಿ ಬೇಡುತ್ತಿದ್ದರು
ತರಲು ಆಗಲಿಲ್ಲ ಅವನಿಗೆ
ನಾನೇನು ಮಾಡಲೆಂದ ಬಡವ

ಮನೆಯಲ್ಲಿ ದೀಪಕ್ಕೆ ಎಣ್ಣೆ ಇಲ್ಲ
ಹಚ್ಚಲು ನನಗೆ ಶಕ್ತಿ ಇಲ್ಲ
ಏಕೆ ಬಂದಿತ್ತು ಈ ಶ್ರೀಮಂತರ ಹಬ್ಬ ನನಗೆ
ನಾನೇನು ಮಾಡಲೆಂದ ಬಡಬಡಿಸಿದ ಬಡವ

ಊರಲ್ಲೆಲ್ಲ ಚಟಚಟ ಗಡಗಡ ಪಟಾಕಿಯ ಶಬ್ದ.
ಆ ಶಬ್ದ ಕೇಳಿ ಅವನ ಮಕ್ಕಳು
ಪಟಾಕಿ ಬೇಕೆಂದು ಬೇಡುವರು
ತರಲು ಆಗಲಿಲ್ಲ ಅವನಿಗೆ
ನಾನೇನು ಮಾಡಲೆಂದ ಬಡವ

ಸಂತೆಗೆ ಹೋದರೆ ಆಗುವುದು ಐದಾರು ನೂರು ಖರ್ಚು
ನನ್ನಲ್ಲಿ ಇಲ್ಲ ಅಷ್ಟೊಂದು ಹಣ
ನಾನೇನು ಮಾಡಲೆಂದ ಬಡವ
ಆದರೂ ಅವನಲ್ಲಿದ್ದ ಒಂದು ರೂಪಾಯಿ ತೆಗೆದುಕೊಂಡು
ಧೈರ್ಯದಿಂದ ತಾ ಸಂತೆಗೆ ಹೋದ.
ಒಂದು ರೂಪಾಯಿ ಎಣ್ಣೆ ತಂದ.

ಮನೆಯಲ್ಲಿದ್ದ ತನ್ನ ಹೆಂಡತಿ ಮಕ್ಕಳಿಗೆ ಕರೆದು
ಹಣತೆಯಲ್ಲಿ ಆ ಒಂದು ರೂಪಾಯಿ ಎಣ್ಣೆ ಹಾಕಿ ದೀಪ ಹಚ್ಚಿ ನಮಸ್ಕಾರ ಮಾಡಿ ಎಂದು ಹೇಳಿದ.
ಹೆಂಡತಿ ಮಕ್ಕಳು ದೀಪಕ್ಕೆ ನಮಸ್ಕಾರ ಮಾಡಿದರು

ಆತ ಅವರನ್ನು ನೋಡುತ್ತಾ ನಗುತ್ತಾ ಹೇಳಿದ.
ಇದೇ ನೋಡಿ ನಮ್ಮ ಬಡವರ ದೀಪಾವಳಿ’ ಎಂದು
ಸಂತಸದಿಂದ
ಆ ನಂದಾ ದೀಪಕ್ಕೆ ವಂದನೆ ಸಲ್ಲಿಸಿ ಖುಷಿಪಟ್ಟ .

ರವೀಂದ್ರ ಬಿ ಕೆ ಕಮಲಾಪುರ
ಕಲಬುರಗಿ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *