ಬೆಳ್ಳಿ ತೋರಣ.
ಬಾಗಲು ತುಂಬೆಲ್ಲಾ ಹಸಿರಿನ ತೋರಣ ಅವನಿಗಾಗಿ ಕಾದಿತ್ತು..!
ಬಾಗಿ ಬಾಗಿ ನೋಡುವದರೊಳಗಿತ್ತು ನನ್ನ ಮನಸು.. !
ಅಲ್ಲೊಂದು ಹೂವು ಅರಳಿತು…!!
ಆ ಹೂವೇ…ನನಗೆ ಹೇಳಿತು ಇಂದು ಬರುವವನೊಬ್ಬ ಹುಡುಗಾ…!
ಕೂಡಿ ಮಿಸೆ ಗಡ್ಡದ ಮುಖದೊಳಗಿದ್ದು…!
ನೀಲಿ ಅಂಗಿಯ ನಿನ್ನುಡುಗಾ ಅವನಂತೆ ಚಂದ್ರನಿಲ್ಲಾ….!
ನೋಡು ಹೋಗು ನಿಮ್ಮೂರು ದಾರಿಯೊಳಗ ಹಾಡು ಬರುತ್ತಾನೆ…!
ನೀನಗಾಗಿ ಒಂದು ಹೃದವನ್ನ ತರುತ್ತಾನೆ…!
ನನ್ನಂತರಂಗ ಜಲ್ಲೆಂದಿತ್ತು ಹೊರಗೆ ನನ್ನ ಕಣ್ಣೊಟ ಹೊರಳಿತು ಅರಳಿತು ನನ್ನ ಹೃದಯ…!
ಅವನ ತರುವುದು ಎಂತ್ತ ಹೃದಯ…! ಚಂದವಾಗಿದೆಯಾ…? ಅಂದವಾಗಿದೆಯಾ…? ಈ ಸುಂದರ ನನ್ನ ರೂಪಕ್ಕೆ ಹೊಂದಿಕೆಯಾಗುತಿದೆಯಾ…?
ಈ ದಂತದ ಗೊಂಬೆಯ ಮನಸು ಸರಿಗಮಪದನಿಸ ಹಾಡಿಸಿತು…!
ತುಟಿಗಳನ್ನ ಅದುರಿಸಿತು…ಪ್ರೇಮದ ವೀಣೆಯನ್ನ ನುಡಿಸಿತು…!
ನೋಡಿ ಹೋಗಿ ಕರದುಕೊಂಡು ಬಾ ಅಂತ ನನ್ನನ್ನು ಹೊರಗೆ ಕಳಿಸಿತು…!
ಹಾಂ….,! ಹಾ…! ಹಾಂ…! ಎಂತ್ತಾ ರೂಪಾ ಇವನೆಂತ್ತಾ ಭೂಪ…!
ನನ್ನ ಹೃದವನ್ನ ಈಗಲೇ..ತಟ್ಟಿದಾ…!
ಇವನೆಸರೇನಿರಬಹುದು…? ಪ್ರತಾಪ್….?
ನನ್ನ ಮನೆಯ ಬಾಗಿಲು ಹೇಳಿತು ನನಗೆ…!
ಇವನಿಂದಲೇ ನಿನ್ನ ಬದುಕು ಬೆಳಗುವದು…!
ನೀ ಅವನನ್ನ ಮನೆ ಒಳಗೆ ಕರೆದಿಕೊ…! ಬೆಳದಿಂಗಳಾಗುವುದು…!
ನಿನ್ನ ಮನಸಿನೊಳಗೆ ಎಳೆದಿಕೊ…! ನಿನ್ನ ಜೀವನ ಬೆಳ್ಳಿ ತೋರಣವಾಗುವದು…!!
– ಕಳಕಪ್ಪ ಜಲ್ಲಿಗೇರಿ
ಹಿರೇವಡ್ಡಟ್ಟಿ ಗದಗ.
ನನ್ನ ಕವನವಾದ**ಬೆಳ್ಳಿ ತೋರಣ** ವನ್ನ ನಿಮ್ಮ ಕಲ್ಯಾಣ ಸಿರಿಗನ್ನಡದ ಅಂತರ್ಜಾಲ ಪತ್ರಿಕೆಯೊಳಗೆ ಪ್ರಕಟಿಸಿದಕ್ಕೆ ಸಂಪಾದಕರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನ ಅರ್ಪಿಸುತ್ತೇನೆ