Oplus_131072

ದಾಸ_ಶ್ರೇಷ್ಠರು.

ದಾಸ ಶ್ರೇಷ್ಠರು ಇವರಯ್ಯ
ಮಾನವ ಕುಲಕ್ಕೆ ಮಾದರಿಯಾಗಿ
ಮಹಾನ್ ಸಂತ ಸಾರಥಿಯಾದ
ದಾಸ ಶ್ರೇಷ್ಠರು ಇವರಯ್ಯ.

ಹರಿ ಭಕ್ತ ಮಹಾಮಹಿಮರು
ಕಾಗಿನೆಲೆಯ ಆದಿಕೇಶವ ನಾಮಾಂಕಿತರು
ಮೌಢ್ಯವ ಅಳಿಸಲು ಮುಂದಾದ
ದಾಸ ಶ್ರೇಷ್ಠರು ಇವರಯ್ಯ.

ಸವಿನುಡಿಯ ದಾರಿ ದೀಪವಾಗಿ
ಅಂಧಕಾರದ ಜ್ಞಾನ ಜ್ಯೋತಿಯಾಗಿ
ಭಕ್ತಿಯ ಬೆಳಕು ಚೆಲ್ಲಿದ
ದಾಸ ಶ್ರೇಷ್ಠರು ಇವರಯ್ಯ.

ತಂಬೂರಿಯ ಸ್ವರ ನುಡಿಸಿ
ಜನಮನಗಳ ಹೃದಯ ತಲ್ಲಣಿಸಿ
ಭೋಗ ವೈಭೋಗದ ನೀತಿ ಸಾರಿದ
ದಾಸ ಶ್ರೇಷ್ಠರು ಇವರಯ್ಯ.

ಕೀರ್ತನೆಗಳ ಹಾಡುತ ಸಾಗಿ
ಕುಲವೆಂಬ ಮೂಢರ ಕೂಗಿ
ಕುಲದ ನೆಲೆ ಹುಡುಕಿರೆಂದ
ದಾಸ ಶ್ರೇಷ್ಠರು ಇವರಯ್ಯ.

ಕನಕದ ಗುಣ ತನ್ನೊಳಗಿತ್ತು
ಚಿನ್ನದ ನುಡಿಮುತ್ತುಗಳ ನಾಡಿಗಿತ್ತು
ಕನಕದಾಸ ಎಂಬ ಮಹಾತ್ಮನಾದ
ದಾಸ ಶ್ರೇಷ್ಠರು ಇವರಯ್ಯ.

ಡಾ. ಮಹೇಂದ್ರ ಕುರ್ಡಿ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *