Oplus_131072

ದಾಸಶ್ರೇಷ್ಠ.

ಸಮಾಜದುನ್ನತಿಗೆ ಶ್ರಮಿಸಿದನು ಕನಕರಾಯ
ಹೊಂದಿದ್ದ ಜನರ ಬವಣೆ ಪರಿಹರಿಸುವ ಧ್ಯೇಯ
ಆಗಿದ್ದವು ತಾರತಮ್ಯಗಳು ಸಮಾಜಕ್ಕೆ ಮಾರಕ
ಹೆಡೆಮುರಿದು ಕಟ್ಟಿದನವಕೆ ಕೀರ್ತನೆಗಳ ಮೂಲಕ

ಕನ್ನಡಿಗರಿಗೆ ತಿಮ್ಮಪ್ಪನಿತ್ತ ಸಾಹಿತ್ಯದ ಭಂಡಾರ
ರಾಮಧಾನ್ಯ ಚರಿತೆ ಹೊಂದಿದೆ ಜ್ಞಾನದಾಗರ
ನಳಚರಿತೆ ಮೋಹನ ತರಂಗಿಣಿಯಾಳ ಸಾಗರ
ಬಚ್ಚಮ್ಮ ಬೀರಪ್ಪರ ಕುವರನಿತ್ತ ಹರಿಭಕ್ತಿ ಸಾರ

ಅಹಂಭಾವ ವ್ಯಾಮೋಹ ನಮಗೇತಕೆಂದ
ನಾನೆಂಬ ಪದವ ಮನದಿಂದ ಎಸೆಯಿರೆಂದ
ಕೀರ್ತನೆಗಳ ಆಲಿಸಲು ದೇವನ್ನೇ ತಾ ಬಂದ
ಕನಕನ ಕಂಡು ಮಾಧವನೇ ಮಂದಸ್ಮಿತನಾದ

ಕನಕನ ತತ್ವಗಳು ಮೊಳಗಲಿ ಮನೆಮನಗಳಲಿ
ವೈಷಮ್ಯದ ಭಾವಗಳು ಧರೆಯಿಂದ ತೊಲಗಲಿ
ದಾಸಶ್ರೇಷ್ಠ ಕನಕದಾಸ ಕನ್ನಡಿಗರ ಉಸಿರು
ಬದುಕು ಹಸನಾಗಿಸಲಿತ್ತಿಹ ಸಾಹಿತ್ಯದ ಹಸಿರು.

ಮಾಣಿಕ ನೇಳಗಿ ತಾಳಮಡಗಿ. ಬೀದರ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *