Oplus_131072

ಈಗಲೇ ಮದುವೆಯೇಕೆ ?

ಸಾಗರದ ಷ್ಟಿದೆ ಕಣ್ಣಲ್ಲಿ ಆಸೆ
ನಾನಿನ್ನೂ ನಿಮಗೆ ಕೊಸೆ
ಹುಡುಕುತ್ತಿರುವಿರೇಕೆ ಮೀಸೆ
ತಿಳಿಯುತ್ತಿಲ್ಲವೆ ನಿಮಗೆ ನನ್ನ ಮನಸ್ಸಿನ ಭಾಷೆ.

ಆಸೆ ನಿರಾಸೆ ಮಾಡದಿರಿ
ಕಟ್ಟಿದ ಕನಸ್ಸನ್ನು ಸಾಯಿಸದಿರಿ
ನನ್ನಲ್ಲಿನ ಕಲೆಯನ್ನು ಕೊಲ್ಲದಿರಿ
ದೂರಬೇಡಿ ದಯವಿಟ್ಟು ಸುಮ್ಮನಿರಿ..

ನಾನು ಕೂಡ ಯೋಚಿಸಬಲ್ಲೆ
ಬರುವ ಕಷ್ಟಗಳ ಎದುರಿಸಬಲ್ಲೆ
ಉಳಿಸದಿರಿ ನನ್ನನ್ನು ಕನಸಿನಲ್ಲೇ
ನನ್ನನ್ನು ಆಸ್ತಿಯಾಗಿ ಮಾಡಿ ಈ ಜಗದಲ್ಲೆ..

ಗುರಿ ತಲುಪಲು ಮಾಡುತ್ತಿರುವೆ ಹೋರಾಟ
ದಿನವಿಡೀ ಇದಕ್ಕಾಗಿಯೇ ಪರದಾಟ
ಮದುವೆಯೆಂಬುದಲ್ಲ ಆಟ
ನನ್ನ ಜೀವನ ಮಾಡದಿರಿ ಬೆಂಕಿಯಲ್ಲಿ ತೂರಾಟ..

ರೋಗವೇನೂ ನನಗೆ ಇಲ್ಲ
ವಯಸ್ಕಳಂತೂ ನಾ ಮೊದಲೇ ಅಲ್ಲ
ನಿಮ್ಮಲ್ಲಿನ ಅವಸರವೇಕೋ ನಿಲ್ಲುತ್ತಿಲ್ಲ
ತಾಳ್ಮೆಯಿರಲಿ ಬದುಕಿನ್ನು ಮುಗಿದಿಲ್ಲ..

ರೋಹಿಣಿ ಬೀರಾದರ್
ಮು. ನಿಂಬೂರ ತಾ.ಹುಮನಾಬಾದ ಜಿ.ಬೀದರ

ಕವಯತ್ರಿ ಪರಿಚಯ:

ರೋಹಿಣಿ ಬಿರಾದಾರ.

ಯುವ ಕವಯತ್ರಿಯಾದ  ರೋಹಿಣಿ ಬೀರಾದಾರ ರವರು ಬೀದರ ಜಿಲ್ಲೆಯ ಹುಮನಾಬಾದ‌ ತಾಲೂಕಿನ ನಿಂಬೂರ ಗ್ರಾಮದವರು. ಸದ್ಯ ಎಂ.ಕಾಂ. ಎರಡನೇ ಸೆಮಿಸ್ಟರ್ ನಲ್ಲಿ ಅಧ್ಯಯನ ಮಾಡುತಿದ್ದಾರೆ. ವಿದ್ಯಾರ್ಥಿನಿ ದೆಸೆಯಿಂದಲೇ ಕಾವ್ಯ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಕವಿತೆಗಳನ್ನು ಬರೆಯುತ್ತಿದ್ದಾರೆ. ಇವರ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

One thought on “ಈಗಲೇ ಮದುವೆಯೇಕೆ ? (ಕವಿತೆ)”
  1. ಕನಸುಗಳನ್ನು ಕಟ್ಟಿಕೊಂಡು,
    ಸಾಧಿಸಬೇಕೆನ್ನುವ ಜೀವಗಳಿಗೆ
    ಮುಳ್ಳಾಗುತ್ತಿರುವ ಈ ಜಗತ್ತಿಗೆ ನನ್ನ ಧಿಕ್ಕಾರ
    ಅದ್ಬುತವಾದ ಕವನ.

Leave a Reply

Your email address will not be published. Required fields are marked *