ಹುಲ್ಲು
ಸಕಲ ಜೀವರಾಶಿಗೂ
ಸಕಲ ಬೀಜ ಸಂಕುಲಕೂ
ಸಮಬಾಳು ಸಮಪಾಲು
ನೀಡಿದೆ ನಿಸರ್ಗ/
ಹುಲ್ಲು ತೃಣವಾದರೇನು
ಮರವು ಗಗನ ಚುಂಬಿಯಾದರೇನು
ಅವರವರ ಭಾವ
ಅವರವರ ಭಕುತಿ
ಅವರರವರ ಛಾತಿ
ಪಡೆಯಲು ಸ್ವರ್ಗ/
ನಾ ಬೆಳೆ ಮಧ್ಯ ಬೆಳೆವ ಕಸ
ನನಗೆ ನಂಜು ಈಗಾಗಲೇ ವಶ
ಸಿಕ್ಕರೆ ಸಾಕು ಬೆಳೆಯಲು ಅವಕಾಶ
ಮೌಖೇ ಪೇ ಚೌಖಾ
ಬಾರಿಸುತ್ತೇನೆ ಬೆಳೆದು ಶತಕ/
ಬಿದ್ದಲ್ಲೇ ಬೆಳೆದು ಏಳುವೆ
ಸಿಕ್ಕರೆ ಸಾಕು ತುಸು ಮಣ್ಣು ತುಸು ನೀರು ತುಸು ಬೆಳಕು
ಅಲ್ಲಿಯೇ ಅಂಕುರಗೊಂಡು
ಬೊಬ್ಬಿರಿದು ಬೆಳೆವೆ
ನನಗೆ ಆ ದೇವನ ಆಶೀರ್ವಾದ ವಿದೆ
ನಿನ್ನ ಸಂತತಿ ಸಾವಿರವಲ್ಲ
ಕೋಟಿಯಾಗಲೆಂದು//
ನಾ ಸಾವಿರ ಬೇರುಗಳ ಸರದಾರ
ಅಖಂಡ ಭದ್ರ ಛಿದ್ರವಾಗಲಾರೆ
ಭದ್ರ ವಾಗಿ ನೆಲೆಯೂರುವೆ
ಕಿತ್ತು ಕಿತ್ತು ನೀ ಬಸವಳಿಯುವೆ ಅಷ್ಟೇ//
ಗರಿಕೆಯ ಗರಿಮೆಯಾಗಿ
ಚಿಮುಕುವ ಚಿಲುಮೆಯಾಗಿ
ಪಾರ್ಥೇನಿಯಂ ಚಲುವೆಯಾಗಿ
ನೀ ನಿಂತು ನೋಡಬೇಕಷ್ಟೇ
ನಿಬ್ಬೆರಗಾಗಿ ಹುಬ್ಬೇರಿಸಿ//
ಕಲೆ ಒಳ್ಳೆಯದು
ಸರ್ಫ ಎಕ್ಸಲ್ ಇದೆಯಲ್ಲ
ಎಂದು ನೀ ಅನ್ನಬಹುದು
ನಾ ಹೇಳುವೆ
ಕಳೆ ಒಳ್ಳೆಯದು
ಬೆಳೆ ತೆಗೆದು ನೋಡೆಂದು/
ನನಗೇನೂ ರೋಗ ರುಜಿನಗಳ ಕಾಟವಿಲ್ಲ ಕಡಿವಾಣ ವಿಲ್ಲ
ಕ್ರಿಮಿ ಕೀಟಗಳ ಹಂಗು ಇಲ್ಲ
ಹಂಗಿಲ್ಲದ ಭವ ಬಂಗ
ರೋಗ ನಿರೋಧಕ ಶಕ್ತಿ ಅಧಿಕವಾಗಿದೆ
ಅಶಕ್ತ ಎನ್ನುವ ಮಾತೇ ಇಲ್ಲ/
ಹುಲ್ಲಾಗಿ ಹುಲುಸಾಗಿ ಬೆಳೆವೆ
ಹೇಳು ನೀ ಈಗೇನು ಮಾಡುವೆ
ನನ್ನ ಸಂತತಿ ಕಾಪಿಟ್ಟು ಕಾಪಾಡುವೆ//
– ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ.ಗದಗ