Oplus_131072

ಕಲಬುರಗಿ ಜಿಲ್ಲೆಯ ಸೇಡಂ ನೆಲಕ್ಕೆ ಶರಣು ಶರಣಾರ್ಥಿ.

ಭರತ ಪುಣ್ಯ ಭೂಮಿ ಕರುನಾಡಿನ
ಕೀರ್ತಿ ಹೆಚ್ಚಿಸಿದವರು ಸೇಡಂನವರು
ಕನ್ನಡ ಕಟ್ಟಿದವರು ನಾವು
ಮಾನ್ಯ ಖೇಟದ ರಾಷ್ಟ್ರ ಕೂಟರು
ಎಲ್ಲ ಧರ್ಮಿಯರು ಬಾಳಿ ಬೆಳಗಿದ
ಸಾಮರಸ್ಯದ ನೆಲವೀಡು
ಕನ್ನಡಕ್ಕೆ ಮುನ್ನುಡಿ ಬರೆದ ಶ್ರೀ ವಿಜಯರ
ಕವಿರಾಜ ಮಾರ್ಗ ಕೃತಿ ನಮ್ಮ ನೆಲದು
ಪ್ರಜಾನುರಾಗಿ ಅಮೋಘವರ್ಷ ನೃಪತುಂಗ ಚಕ್ರವರ್ತಿ
ಆಳಿದ ಪುಣ್ಯ ಭೂಮಿ ನಮ್ಮದು
ಇಂದ್ರನ ಅಮರಾವತಿ ನಾಚಿಸುವಂತ ಮಾನ್ಯಖೇಟ ನಗರ ಕಟ್ಟಿದವರು ನಾವು
ಪ್ರಪಂಚದ ನಾಲ್ಕು ಸಾಮ್ರಾಜ್ಯಗಳಲ್ಲಿ ಒಂದಾದ ಮಾನ್ಯ ಖೇಟವು ಕಣ್ಣು ಕೊರೈಸುವ ನಗರ
ರಾಜಸ್ಥಾನ. ಗುಜರಾತದ ಮೇಲೆ
ಕನ್ನಡ ಬಾವುಟ ಹಾರಿಸಿದ ವೀರ ಕನ್ನಡಿಗರು ನಾವು
ಕಂಚಿ ಕೋಟಿ ಗೆದ್ದ ವೀರ ಸೇನಾನಿಗಳ ನೆಲವೀಡು
ಕಲಾತ್ಮಕ ಸೇಡಂ ಪಂಚಲಿಂಗೇಶ್ವರ. ಮೇದಕ ಭೂತೇಶ್ವರ ದೇವಾಲಯ
ಕೋಟೆ ಕೊತ್ತಲ ಪರಿಸರದ ಕೊತ್ತಲ ಬಸವೇಶ್ವರ
ಜೈನ ಬಸದಿ. ಬಾಣಂತಿ ಕಂಬ. ಮಾಧವ. ಈಶ್ವರ್ ದೇವಾಲಯಗಳು
ಕನ್ನಡದ ಪಾಠ ಶಾಲೆ ಹಂದರಕಿ
ತಿರುಪತಿಗೆ ಹೆಬ್ಬಾಗಿಲು ಮೋತಕಪಲ್ಲಿ ಬಲಭೀಮ ಸೇನ ದೇವರ ಸನ್ನಿಧಿ
ಅಹಿಂಸೆ ತತ್ವ ಸಾರಿದ ಯಾನಾಗುಂದಿ ಮಹಾಯೋಗಿನಿ ಮಾತಾಮಾಣಿಕೇಶ್ವರಿ ಪುಣ್ಯನೆಲ ನಮ್ಮದು
ಶರಣ ಹರಳಯ್ಯ ಕಲ್ಯಾಣಮ್ಮನವರು ತಮ್ನ ತೊಡೆಯ ಚರ್ಮದಿಂದ ಪಾದುಕೆಗಳನ್ನು ಬಸವಣ್ಣನವರಿಗೆ ಅರ್ಪಿಸಿದ ಬಿಜನಳ್ಳಿಗೆ ಶರಣು ಶರಣಾರ್ಥಿ
ಕಾಗೀಣಾ. ಕಮಲಾವತಿ ಜೀವನದಿಗಳು ಹರಿಯುವ ನೆಲವಿದು
ತೊಗರಿಯ ಕಣಜ ಸುಣ್ಣದ ಕಲ್ಲು. ಸಿಮೆಂಟ ತಯ್ಯಾರಿಕೆಯ ಖ್ಯಾತಿ ನಮ್ಮದು
ಮುಧೋಳ್ ಮಣ್ಣಿನ ಕೋಟೆ
ಊಡಗಿಯ ಲೋಕೇಶ್ವರ
ಜೈನ ವಣಿಕ ಖ್ಯಾತಿಯ ಆಡಕಿ ಬೆನಕನಹಳ್ಳಿ ಬೆನಕ
ಕೋಡ್ಲಾ ಶಂಭುಲಿಂಗೇಶ್ವರ. ಮುಗನೂರು. ಹಂಗನಳ್ಳಿಯ ರಾಮಲಿಂಗೇಶ್ವರ ಕುಕ್ಕುಂದಾದ ನಾಗಲಿಂಗೇಶ್ವರ
ಕೋಲಾಕುಂದಾ ವೀರಭದ್ರೇಶ್ವರ. ಕುರುಕುಂಟಾ ಸಂಗಮೇಶ್ವರ. ಕಾರಘಟ್ಟ ಸಿದ್ದೇಶ್ವರ
ಸೇಡಂನ ಶಿವಶಂಕರ.ಹಾಲಪಯ್ಯ ಮಠ. ಕೊತ್ತಲ ಬಸವೇಶ್ವರ. ಕೋಡ್ಲಾ ಉರಿಲಿಂಗ್ ಪೆದ್ದಿಶ್ವರ. ಮಳಖೇಡ ಭಂಗಿ ಮಠ. ಕಟ್ಟಿಮನಿ ಸಂಸ್ಥಾನ. ಕಲ್ಪತ ರೆಹಮಾನ್ ದರ್ಗಾ
ತೊಟ್ನಳ್ಳಿ ಮಹಾಂತೇಶ್ವರ್. ಜಾಕನಳ್ಳಿ ಗವಿಸಿದ್ದಲಿಂಗೇಶ್ವರ. ಗೌಡನಳ್ಳಿ ಭೋಜಲಿಂಗೇಶ್ವರ. ಹಂದರಕಿ. ಗುಂಡೇಪಲ್ಲಿ. ನಾಮವಾರ ಮಠಗಳು ಊಡಗಿ ವಿಷ್ಣು ಆಶ್ರಮ. ಸೇಡಂ ಜಗದೇವಿ ಆಶ್ರಮ. ಪ್ರಜಾಪಿತ ಬ್ರಹ್ಮ ಕುಮಾರಿ ಆಶ್ರಮ ಭಕ್ತರ ತವನಿಧಿ
ಸಪ್ಪಣ್ಣಾರ್ಯರರು. ಮಡಿವಾಳೇಶ್ವರರು ನಡೆದಾಡಿದ ನೆಲವೀಡು
ಎಲಿರಾಜೋಳ ಮುರುಗೇಂದ್ರ ವರಕವಿಗಳ ನೆಲೆ ನಮ್ಮದು

ಮುಡುಬಿ ಗುಂಡೇರಾವ.ಸಂಶೋಧಕ ಸಾಹಿತಿ ಸೇಡಂ.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *