ಕಹಿ ನಗ್ನ ಸತ್ಯ !
– ಜಿ.ಎಲ್.ನಾಗೇಶ.
ಮಹಾಭಾರತದ… ಸ್ವಾತಂತ್ರ್ಯ ಭಾರತದ ರಿಯಲ್ ಹೀರೋ ಯಾರು ? ಗಾಂಧಿ…! ಮಹಾತ್ಮಗಾಂಧಿ ಸ್ವಾತಂತ್ರ ಭಾರತದ ರಿಯಲ್ ಹೀರೋನಾ ? ಅಲ್ಲ.
ಗಾಂಧೀಜಿ ನಾಯಕನಲ್ಲ ! ಗೋಡ್ಸೆ ಖಳನಾಯಕನಲ್ಲ ! ಅವರಿಬ್ಬರೂ ಅಂಧಭಕ್ತರು…! ಹಾಗಂದರೆ ಸ್ವಾತಂತ್ರ್ಯ ಭಾರತದ ರಿಯಲ್ ಹೀರೋ ಯಾರು ಅಂತ ಕೇಳ್ತೀರಾ…? ಸಿಂಬಲ್ ಆಫ್ ನಾಲೆಜ್, ವಿಶ್ವಜ್ಞಾನಿ, ಮಹಾ ಮಾನವತಾವಾದಿ ಡಾಕ್ಟರ್ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್… ಸ್ವಾತಂತ್ರ್ಯ ಭಾರತದ ರಿಯಲ್ ಹೀರೋ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು.
ಈ ಕಹಿ ನಗ್ನ ಸತ್ಯವನ್ನು, ಈ ದೇಶದ ಮನುವಾದಿಗಳಿಗೆ ಅರಗಿಸಿಕೊಳ್ಳಲಾಗದು ಬಂಧುಗಳೇ. ನಾನೀಗ ತಮಗೆ ಕೆಲವು ಕಹಿ ನಗ್ನ ಸತ್ಯಗಳನ್ನು ತಮ್ಮೆದುರಿಗೆ ತೆರೆದಿಡಲು ಹೊರಟಿದ್ದೇನೆ. ಅದನ್ನು ಅರ್ಥೈಸಿಕೊಂಡು, ಅರಗಿಸಿಕೊಂಡು, ಜಾಗೃತಗೊಂಡು ಎಚ್ಚೆತ್ತುಕೊಳ್ಳುತ್ತೀರ ಎಂಬ ಆಶಯದೊಂದಿಗೆ ಈ ಲೇಖನವನ್ನು ಬರೆಯಲು ಪ್ರಯತ್ನಿಸುತ್ತಿದ್ದೇನೆ. ತಾವು ಇದನ್ನು ಅರ್ಥೈಸಿಕೊಂಡು ಜಾಗೃಕರಾದಾಗ ಈ ನನ್ನ ಶ್ರಮ ಸಾರ್ಥಕ ಎಂದು ನಾನು ಭಾವಿಸುತ್ತೇನೆ.
Who is real hero of Mahabharat ? ಮಹಾಭಾರತದ ರಿಯಲ್ ಹೀರೋ ಯಾರು ? ಎಂದು ಕೇಳಿದರೆ ಪುರಾಣಗಳು ಓದಿದವರು ಹೇಳುತ್ತಾರೆ, “ಮಹಾಭಾರತ ರಿಯಲ್ ಹೀರೋ ಕೃಷ್ಣ. ಮಹಾಭಾರತದ ನಿಜವಾದ ಹೀರೋ ಭೀಷ್ಮ, ಕರ್ಣ, ಭೀಮ… ಇತ್ಯಾದಿ ತಮಗೆ ತೋಚಿದಂತೆ ಮಹಾಭಾರತವೆಂಬ ಪುರಾಣದಲ್ಲಿ ಬರುವ ಕಾಲ್ಪನಿಕ ಪಾತ್ರಗಳ ಹೆಸರುಗಳು ಹೇಳುತ್ತಾ ಹೋಗುತ್ತಾರೆ. ಆದರೆ ಇತಿಹಾಸ ಓದಿದವರು,
“ಮಹಾಭಾರತದ ರಿಯಲ್ ಹೀರೋ ಅಶೋಕ… ಪ್ರಿಯದರ್ಶಿ, ಸಾಮ್ರಾಟ್ ಅಶೋಕ… ಅಶೋಕ ಮೌರ್ಯನೇ ಮಹಾಭಾರತದ ರಿಯಲ್ ಹೀರೋ ಎಂದು ಹೇಳುತ್ತಾರೆ.
ಮಹಾಭಾರತದ ರಿಯಲ್ ಹೀರೋ ಅಶೋಕ ಎಂದು ಹೇಳಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಯಾಕೆ ಅಂದರೆ
ನೂರಾರು ರಾಜರುಗಳಿಂದಾಗಿ ತುಂಡುತುಂಡಾಗಿ ಹೋಗಿದ್ದ ಭಾರತವನ್ನು ತನ್ನ ಸೈನ್ಯ ಬಲದಿಂದ ಗೆದ್ದುಕೊಂಡು, ತುಂಡುತುಂಡಾಗಿ ಹೋಗಿದ್ದ ಭಾರತವನ್ನು ಮಹಾಭಾರತವನ್ನಾಗಿ ಮಾಡಿದ್ದು ಸಾಮ್ರಾಟ್ ಅಶೋಕ !
ಇವನ ಸಾಮ್ರಾಜ್ಯದ ಗಡಿರೇಖೆ ಇರಾನಿನಿಂದ ಬ್ರಹ್ಮದವರವರಿಗೆ ವಿಸ್ತರಿಸಿತ್ತು.
ಬುದ್ಧನ ಪಂಚಶೀಲ ತತ್ವದಿಂದ ಕೂಡಿದ್ದ ಸಮತಾ ಸಮಾಜ ಇವನ ಆಡಳಿತದಲ್ಲಿತ್ತು. ಅಶೋಕನ ಈ ಮಹಾಭಾರತ ವನ್ನು ಗುಲಾಮ ಭಾರತವನ್ನಾಗಿ ಮಾಡಿದ್ದು ಯಾರು? ಸಮಾನತೆಯ ಸಾರವನ್ನು ಸಾರಿದ ಬುದ್ಧನ ಅನುಯಾಯಿ ಅಶೋಕನ ವಂಶಸ್ಥರ ಸ್ಥಿತಿ ಇವತೇನಾಗಿದೆ ?
ಇವರ ಈ ದುಸ್ಥಿತಿಗೆ ಕಾರಣ ಯಾರು ?
ಇನ್ಯಾರು ಸ್ವಾಮಿ, ಅವರೇ… ! ಮನುವಾದಿಗಳು, ದುಷ್ಟ ಪಾಪಿಗಳು,ಸ್ವಾರ್ಥಿಗಳು, ಷಡ್ಯಂತ್ರಕಾರಿಗಳು, ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ವೇದ,ಪುರಾಣ, ಉಪನಿಷತ್ತು, ಇಂದ್ರಲೋಕ, ಬ್ರಹ್ಮಲೋಕ, ಸ್ವರ್ಗ-ನರಕ, ಪಾಪ-ಪುಣ್ಯ, ದೇವರು ಧರ್ಮ, ವರ್ಣ-ಅಸ್ಪೃಶ್ಯತೆ… ವರ್ಣಬೇಧ, ಜಾತಿಭೇದ.. ಮನಸ್ಸಿಗೆ ಬಂದಿದ್ದೆಲ್ಲವನ್ನು ಸೃಷ್ಟಿಸಿ; ಮನುಷ್ಯ ಮನುಷ್ಯರಲ್ಲಿಯೇ ತಾರತಮ್ಯ ಉಂಟುಮಾಡಿ ಸಮತಾ ಸಮಾಜದಲ್ಲಿ ಬಿರುಕು ಮೂಡಿಸಿದರು.
ರಾಮಾಯಣ, ಮಹಾಭಾರತ…ಕಲ್ಪನೆಯ
ಕಂತೆಗಳು ! ಭೀಮ, ಅರ್ಜುನ, ಕರ್ಣ, ಕೃಷ್ಣ, ಶಕುನಿ… ಇತ್ಯಾದಿ ಇವರೆಲ್ಲರೂ ಕಲ್ಪನೆಯ ಕಂತೆ ಮಹಾಭಾರತದಲ್ಲಿ ಬರುವ ಡುಬ್ಲಿಕೇಟ್ ಹೀರೋ ಮತ್ತು ವಿಲನ್ ಗಳು!
1.ಚಂದ್ರಗುಪ್ತ ಮೌರ್ಯ
2.ಬಿಂದುಸಾರ
3.ಅಶೋಕ
4.ದಶರಥ
5.ಜಲೌಕ
6.ಸಾಲಿಶೋಕ
7.ಸಂಪ್ರತಿ
8.ಸುಧನ್ವ
9.ಬ್ರಹದ್ರಥ ಮೌರ್ಯ…ಮೌರ್ಯ ಸಾಮ್ರಾಜ್ಯದ ಈ ಎಲ್ಲ ರಾಜರುಗಳು ಭಾರತದ ಹೀರೋಗಳು… ಇವರಲ್ಲಿ ಅಶೋಕ ಮಹಾಭಾರತದ ರಿಯಲ್ ಹೀರೋ!
ಈ ನಗ್ನ ಸತ್ಯವನ್ನು ಭಾರತದ ಮೂಲ ನಿವಾಸಿಗಳು ಅರ್ಥೈಸಿಕೊಂಡಾಗ ಮಾತ್ರ ಈ ದೇಶದ ಬಡವರು ಮತ್ತು ಶೋಷಿತರು ಏಳಿಗೆ ಹೊಂದಲು ಸಾಧ್ಯವಾಗುತ್ತದೆ.
ಭಾರತ ಮೊದಲಿನಂತೆ ವಿಶ್ವಗುರುವಾಗಿ ಕಂಗೊಳಿಸುತ್ತದೆ.
ಸೂಪರ್ ಪವರ್ ಕಂಟ್ರಿಯಾಗಿ ಮಿನುಗುತ್ತದೆ. ಅರ್ಥೈಸಿಕೊಳ್ಳದೇ ಹೋದರೆ ಬ್ಯಾಡ್ ಇಂಡಿಯನ್ ಡರ್ಟಿ ಕಂಟ್ರಿಯಾಗಿಯೇ, ಅಂಧಭಕ್ತರ ಮೂರ್ಖ ಭಾರತವಾಗಿ ಮುಂದುವರಿಯುತ್ತದೆ ಎಂದು ಹೇಳಲು ವಿಷಾದ ಉಂಟಾಗುತ್ತದೆ…!
ಪ್ರಿಯಾ ಬಹುಜನ ಭಾರತೀಯರೇ, ಸಾವರ್ಕರ್ ಎಂಬ ಮನುವಾದಿ ತನ್ನ ಒಂದು ಪುಸ್ತಕದಲ್ಲಿ ಈ ರೀತಿ ಬರೆದುಕೊಂಡಿದ್ದಾನಂತೆ – “ಭಾರತದ ಮೂಲ ನಿವಾಸಿಗಳು ಆರ್ಯ ಬ್ರಾಹ್ಮಣರ ಗುಲಾಮರಾಗಿ, ಅಂಧಭಕ್ತರಾಗಿ ಮುಂದುವರಿಯಬೇಕು ಅಂದರೆ, ಅವರು ವಾಸಿಸುವ ಗಲ್ಲಿಗಳಲ್ಲಿ ಎರಡೆರಡು ದೇವರ ಗುಡಿಗಳನ್ನು ಕಟ್ಟಿಸಿ, ಮತ್ತು ಅವರಿಗಾಗಿಯೇ ನಾಲ್ಕು ನಾಲ್ಕು ಸರಾಯಿ ಅಂಗಡಿಗಳು ಇರುವಂತೆ ನೋಡಿಕೊಳ್ಳಿ. ಶಿಕ್ಷಣದಿಂದ ದೂರ ಇಡಿ. ಒಂದು ವೇಳೆ ಈ ಜನಗಳು ಶಿಕ್ಷಿತರಾಗಿ ಒಳ್ಳೆಯ ಹುದ್ದೆಗಳು ಪಡೆದುಕೊಂಡರೆ ನಮಗೆ (ಬ್ರಾಹ್ಮಣರಿಗೆ) ತುಂಬಾ ಅಪಾಯ ಇದೆ. ಬಹುಜನ ಭಾರತೀಯರು ವೈಚಾರಿಕ ಪ್ರಜ್ಞಾವಂತರಾದರೆ ಸಾವಿರಾರು ವರ್ಷಗಳಿಂದಲೂ ಕಾಪಾಡಿಕೊಂಡು ಬಂದ ನಮ್ಮ ಶ್ರೇಷ್ಠತೆ ಕಳೆದುಕೊಂಡು ಬೀದಿ ಭಿಕಾರಿಗಳಾಗಿ ಅಲೆಯಬೇಕಾಗುತ್ತದೆ. ದೇಶ ಬಿಟ್ಟು ಓಡಿ ಹೋಗಬೇಕಾಗುತ್ತದೆ…!” ಅಂದು ಸಾವರ್ಕರ್ ಹೇಳಿದ ಈ ಮಾತು ಕಹಿ ನಗ್ನ ಸತ್ಯ ಇಂದಿಗೂ ಪ್ರಸ್ತುತವಾಗಿದೆ.
ಸಾವರ್ಕರ್ , ಗೋಲ್ವಳ್ಕರ್ , ಗೋಡ್ಸೆ ಎಂಬ ಇಂತವರನ್ನು ಆರ್ ಎಸ್ ಎಸ್ ನ ಹಿಡಿತದಲ್ಲಿರುವ ಇಂದಿನ ಈ ಸರ್ಕಾರ ಇವತ್ತು ಏನು ಮಾಡುತ್ತಿದೆ ? ಅಂದು ಸಾವರ್ಕರ್ ಹೇಳಿದ್ದನ್ನೇ ಇಂದಿನ ಮನುವಾದಿ ಸರ್ಕಾರ ಚಾಚು ತಪ್ಪದೇ ಕಾರ್ಯರೂಪಕ್ಕೆ ತರುತ್ತಿದೆ. ಶಾಲೆ, ಆಸ್ಪತ್ರೆ , ಕಾರ್ಖಾನೆಗಳು ಕಟ್ಟಿಸಬೇಕಾದಲ್ಲಿ ಮಂದಿರಗಳು ಕಟ್ಟಿಸುತ್ತಿದೆ. ದೇವರು-ಧರ್ಮದ ಹೆಸರಿನಲ್ಲಿ ಜಗಳ ಹಚ್ಚಿ ತಮಾಷೆ ನೋಡುತ್ತಿದೆ. ಡೈಮಂಡ್ ಖರೀದಿಸಲು ಮೂರು ಪರ್ಸೆಂಟ್ (GST) ತೆರಿಗೆ ಕಟ್ಟಬೇಕು; ಅದೇ ಪುಸ್ತಕ ಖರೀದಿಸಿದರೆ 18 ಪರ್ಸೆಂಟ್ ಜಿ ಎಸ್ ಟಿ ನೀಡಬೇಕೆಂದು ಹೇಳುತ್ತಿದೆ ಈ ಮೂರ್ಖ ಸರಕಾರ.ಮೂರ್ಖ ರಾಜ, ಅಂದ ಭಕ್ತ ಪ್ರಜೆಗಳು… ಚೆನ್ನಾಗಿದೆ ಅಲ್ವಾ ? ಶೋ.. ಅದು ಇರ್ಲಿ ಬಿಡಿ. ಈಗ ವಾಪಸ್ ವಿಷಯಕ್ಕೆ ಬರೋಣ.
1.ಶತ ಶತಮಾನಗಳಿಂದ
ಅನ್ಯಾಯ-ಅತ್ಯಾಚಾರ, ಮೋಸ-ವಂಚನೆಗೆ ಒಳಗಾದ, ತುಳಿತಕ್ಕೊಳಗಾದ, ಶೋಷಣೆಗೆ ಒಳಗಾದ ಮಹಿಳೆಯರು ಮತ್ತು ಶೂದ್ರರು-ಪಂಚಮರು… ಅಸ್ಪೃಶ್ಯರೆನಿಸಿ ಕೊಂಡವರೆಲ್ಲೂ ಉದ್ಧಾರ ಆಗಿದ್ದು ಡಾಕ್ಟರ್ ಅಂಬೇಡ್ಕರ್ ಎಂಬ ಮಹಾ ಮೇಧಾವಿ ಬರೆದ ಸಂವಿಧಾನದಿಂದ.
ಮೂಲನಿವಾಸಿ ಭಾರತೀಯರ ಸಭ್ಯ ಸಂಸ್ಕೃತಿ ಹಾಳಾಗಿದ್ದು ವಿದೇಶಿ ಮನುವಾದಿ ಬ್ರಾಹ್ಮಣರಿಂದ….!
ಮೂಲನಿವಾಸಿ ಭಾರತೀಯರು ಯಾರೂ ಸಹ ತಾವು ಕೀಳು ಜಾತಿಯವರು, ಅಸ್ಪೃಶ್ಯರು, ಬಡವರು ಆಗಬೇಕು ಎಂದು ನಿರ್ಧಾರ ಮಾಡಿರಲಿಲ್ಲ.ಕೆಲ ದುಷ್ಟ ಪಾಪಿಗಳು ಷಡ್ಯಂತ್ರ ರಚಿಸಿ ಅವರನ್ನು ಆ ರೀತಿಯಾಗಿ ಮಾಡಿದರು.
2.ಶೂದ್ರರು… ನಾಯಿ,ಬೆಕ್ಕು,ನರಿ,ಹಂದಿಗಳಗಿಂತಲೂ ಮುರ್ಖರಾಗಿದ್ದಾರೆ! ಅದು ಹೇಗೆ ಅಂದರೆ,ಕಲ್ಲು-ಮಣ್ಣಿನಿಂದ ಇಲಿಯೊಂದನ್ನು ತಯ್ಯಾರಿಸಿ ‘ಇದು ನಿನ್ನ ಶಿಕಾರ್ ಇದೆ; ಬೇಟೆಯಾಡಿ ಇದನ್ನು ತಿನ್ನು’ ಎಂಬಂತೆ ಬೆಕ್ಕಿನ ಮುಂದೆ ಕಲ್ಲಿನ ಇಲಿ ತಂದಿರಿಸಿದರೆ, ಬೆಕ್ಕು ಆ ಇಲಿಯನ್ನು ಬೇಟೆ ಆಡಿ ತಿನ್ನುವುದಿಲ್ಲ.ಇದೇ ರೀತಿ
ನಾಯಿ,ನರಿ,ಹಂದಿಗಳಿಗೂ ಸಹ ಕಲ್ಲು-ಮಣಿನಿಂದ ಆಹಾರ ತಯ್ಯಾರಿಸಿ ಪೇಂಟ್ ಹೊಡೆದು-ಬಣ್ಣ ಬಳಿದು, ಅವುಗಳ ಮುಂದೆ ಇರಿಸಿದರೆ ಅವುಗಳೂ ಸಹ ತಿನ್ನುವುದಿಲ್ಲ. ಡುಪ್ಲಿಕೇಟ್ ಎಂದು ಕಂಡು ಹಿಡಿದು ಬಿಡುತ್ತವೆ. ಆದರೆ ಶೂದ್ರರು, ಮನುವಾದಿ ಬ್ರಾಹ್ಮಣ ಹೇಳಿದೆಲ್ಲವನ್ನು ಸತ್ಯವೆಂದು ನಂಬಿ ಗೋಮೂತ್ರ ಪವಿತ್ರವಾದ ತೀರ್ಥ – ಸಗಣೆ ಪ್ರಸಾದ ಎಂದು ತಿನ್ನಲು ಹೇಳಿದ್ರೆ ತಿಂದು ಮುಗಿಸಿ, ಕುಡಿದು ಬಿಡುತ್ತಾರೆ ಮುಠಾಳರು ! ಎಂದು ಬಹುಜನ ಮಾಹ ಚಿಂತಕ ಅರುಣ್ ಕುಮಾರ್ ಗುಪ್ತ ಹೇಳುತ್ತಿರುವ ಈ ಮಾತು(ಗಳು) ನಿಜಕ್ಕೂ ಕಹಿ ಸತ್ಯವಾಗಿವೆ.
3.ದೇವರು-ಧರ್ಮ… ಅನ್ನುವುದೊಂದು ದಂಧೆಯಾಗಿ ! ದುಡಿದು ತಿನ್ನಲಾಗದ ದುಷ್ಟರ ಷಡ್ಯಂತ್ರವಾಗಿದೆ!! ಮನುಷ್ಯ… ದೇವರು-ಧರ್ಮ ಇಲ್ಲದೆ ಬದುಕಬಲ್ಲ. ಆದರೆ, ಪರಸ್ಪರ ಪ್ರೀತಿ, ವಿಶ್ವಾಸ-ನಂಬಿಕೆ, ಮಾನವೀಯತೆ ಇಲ್ಲದೆ ಮನುಷ್ಯ , ಮನುಷ್ಯನಂತೆ ನೆಮ್ಮದಿಯಾಗಿ ಬದುಕಿರಲು ಅಸಾಧ್ಯವಾಗಿದೆ. ಭೂಮಿ, ಆಕಾಶ, ನೀರು, ಬೆಂಕಿ, ಗಾಳಿ… ಈ ಪಂಚಭೂತಗಳಿಂದ ಜೀವ ಜಗತ್ತು ಸೃಷ್ಟಿ ಕೊಂಡಿರುತ್ತದೆ. ಈ ಸೃಷ್ಟಿಗೆ ಕಾರಣವಾದ ಪಂಚ(ಮಹಾ)ಭೂತವೇ ನಮ್ಮ ದೇವರು. ಪ್ರೀತಿ, ವಿಶ್ವಾಸ, ಮಾನವೀಯತೆಯ ಮಾನವ ಧರ್ಮವಾಗಿದೆ…! ಈ ಬದುಕು ನೋವು-ನಲಿವಿನಿಂದ ಕೂಡಿದೆ. ನನ್ನ ಹೆಂಡತಿ ನನ್ನ ಮಕ್ಕಳು, ಹಣ,ಆಸ್ತಿ ಅಂತಸ್ತು, ನನ್ನ ಜಾತಿ- ನನ್ನ ಧರ್ಮ… ನನ್ನದೆನ್ನುವುದೆಲ್ಲವೂ ಇಲ್ಲಿ ಮಿತ್ಯವಾಗಿದೆ! ಭ್ರಮೆಯಾಗಿದೆ! ಜನನ-ಮರಣ… ಇದೊಂದೇ ಪರಮ ಸತ್ಯವಾಗಿದೆ!
ಎಂದು ವೈಚಾರಿಕ ಪ್ರಜ್ಞಾವಂತರು ಹೇಳುತ್ತಾರೆ.
4.ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ಹಿಂದೂ-ಮುಸ್ಲಿಮ್ ಎಂದು ಎರಡು ಭಾಗಗಳಾಗಿ ಮಾಡಿ ಈ ದೇಶವನ್ನಾಳಲು ನೋಡಿದರು. ಆದರೆ ಅನ್ನ- ನೀರನ್ನು ಹುಡುಕುತ್ತಾ ಬಂದ ಯುರೇಷಿಯನ್ ಭಿಕಾರಿಗಳು,ನಿಯತ್ತಿಲ್ಲದ ನಾಯಿಗಳು ತಿಂದ ತಟ್ಟೆಯಲ್ಲಿಯೇ ಕಕ್ಕ ಮಾಡಿದ್ದಲ್ಲದೇ ದೇಶದ ಮೂಲನಿವಾಸಿ ಭಾರತೀಯರನ್ನು 6000 ಗಿಂತಲೂ ಅಧಿಕ ಜಾತಿಗಳಲ್ಲಿ ವಿಂಗಡಿಸಿ ಪ್ರಸ್ತುತ ಭಾರತವನ್ನಾಳುತ್ತಿದ್ದಾರೆ. ಮೂರ್ಖ ಮೂಲನಿವಾಸಿಗಳು ಈ ಕಹಿ ನಗ್ನ ಸತ್ಯವನ್ನು ಅರ್ಥೈಸಿಕೊಂಡು ಜಾಗೃತರಾಗಬೇಕಾಗಿದೆ! ಷಡ್ಯಂತ್ರಕಾರಿಗಳ ವಿರುದ್ಧ ಸಮರ ಸಾರಬೇಕಾಗಿದೆ…!
ಭಾರತದ ಮೂಲನಿವಾಸಿಗಳೇ, ಏಳಿ… ಎಚ್ಚೆತ್ತುಕೊಳ್ಳಿ! ಜಾಗೃತರಾಗಿ!! ಹೋರಾಡಲು ಸಿದ್ಧರಾಗಿ!!!
– ಜಿ ಎಲ್ ನಾಗೇಶ್.ಧನ್ನೂರ (ಆರ್) ತಾ.ಬಸವಕಲ್ಯಾಣ ಜಿ.ಬೀದರ
ವಿಶೇಷ ಸೂಚನೆ : ‘ಕಲ್ಯಾಣ ಸಿರಿಗನ್ನಡ’ ಅಂತರ್ಜಾಲ ತಾಣದಲ್ಲಿ ಪ್ರಕಟವಾಗುವ ಎಲ್ಲ ಲೇಖನಗಳು ಆಯಾ ಲೇಖಕರ ಅಭಿಪ್ರಾಯಗಳಾಗಿವೇ ಹೊರೆತು ಅವು ‘ಕಲ್ಯಾಣ ಸಿರಿಗನ್ನಡ’ ಅಂತರ್ಜಾಲ ತಾಣದ ಅಭಿಪ್ರಾಯವಲ್ಲ.
– ಸಂಪಾದಕರು.