ಕನಕದಾಸ
ಬೀರಪ್ಪ ಬಚ್ಚಮ್ಮರ ಹೆಮ್ಮೆಯ ಸುಪುತ್ರನು
ತಿರುಪತಿ ವೆಂಕಟರಮಣನ ಕೃಪಾ ಪಾತ್ರನು ||ಪ||
ದಂಡನಾಯಕನಾದ ತಿಮ್ಮಪ್ಪ ನಾಯಕ
ಬೆಂಡಾಗಿ ಯುದ್ದದಿ ಪರಿವರ್ತಿತ ಕನಕ ||೧||
ದ್ವೈತ ಮತ ಸಿದ್ಧಾಂತದ ಅನುಯಾಯಿ
ಖ್ಯಾತ ವ್ಯಾಸತೀರ್ಥರಿಗೆ ಮುಗಿದು ಕೈಯಿ ||೨||
ಉಡುಪಿಯಲ್ಲಿ ಕನಕಗೊಲಿದ ಕೃಷ್ಣ ಮೂರ್ತಿ
ಬಾಡ ಗ್ರಾಮದ ಕುರುಬರಿಗೆ ಇವರೇ ಸ್ಪೂರ್ತಿ ||೩||
ಕೀರ್ತನೆ, ಸುಳಾದಿ ,ಉಗಾಭೋಗ ರಚನೆ
ಅರ್ಥಿಯಿಂದಲಿ ಚೆನ್ನಕೇಶವನಲಿ ಪ್ರಾರ್ಥನೆ ||೪||
ಬರೆದರು ನಳಚರಿತ್ರೆ, ಹರಿಭಕ್ತಿಸಾರ
ತೋರಿದರು ಸಂಗೀತ ಸಾಹಿತ್ಯ ಅಪಾರ ||೫||
ಜಾತಿ ಭೇದ ತಾರತಮ್ಯ ದೂರೀಕರಣೆ
ಪ್ರೀತಿಯಲಿ ರಾಮಧ್ಯಾನ ಚರಿತೆ ಸ್ಮರಣೆ ||೬||
ಆದಿಕೇಶವ ಎಂಬ ಅಂಕಿತ ನಾಮದಿ ಪ್ರಸಿದ್ದಿ
ಆದರದಿ ಜ್ಯೋತಿ ಬೆಳಗೆ ದೊರೆಯುವುದು ಸಿದ್ಧಿ ||೭||
– ಜ್ಯೋತಿ ಸುನೀಲ್ ಕುಮಾರ್ ಹೈದರಾಬಾದ್
ಕವಯತ್ರಿ ಪರಿಚಯ.

ಕವಯತ್ರಿ ಜ್ಯೋತಿ ಸುನೀಲ್ ಕುಮಾರ್ ರವರು ಮೂಲತಃ ಉಡುಪಿ ಜಿಲ್ಲೆಯವರಾಗಿದ್ದು, ಸದ್ಯ ತೆಲಂಗಾಣದ
ಹೈದರಾಬಾದ್ ನಲ್ಲಿ ವಾಸವಾಗಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ಕವನ, ಭಕ್ತಿಗೀತೆ, ಭಾವ ಗೀತೆಗಳನ್ನು ಬರೆಯುತ್ತಿದ್ದಾರೆ. ಹೈದರಾಬಾದಿನ ಕನ್ನಡ ಸಂಘದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.ಹಾರ್ಮೋನಿಯಂ ವಾದಕಿ.ಸಮೀರಾ ಭಜನಾ ಮಂಡಳಿ ಸ್ಥಾಪಕಿ ಒಂದು ಯಕ್ಷಗಾನದಲ್ಲಿ ಕೂಡಾ ಪಾತ್ರವಹಿಸಿದ್ದಾರೆ.