ಕನಕದಾಸರು
ಕರುನಾಡಿನ ಕವಿ ಶ್ರೇಷ್ಠ ಕನಕದಾಸರು
ಹದಿನಾರನೇ ಶತಮಾನದ ಹರಿದಾಸರು!
ಪುರಂದರದಾಸರ ಸಮಕಾಲೀನ ಜೊತೆಗಾರರು
ಶ್ರೀ ವ್ಯಾಸರಾಯರ ಆತ್ಮೀಯತೆಯ ಪರಮಶಿಷ್ಯರು !
ಸಮಾಜದ ಜಾತಿ ಪದ್ಧತಿಯ ನಿರ್ಮೂಲನೆಕಾರರು
ಮೂಢ ನಂಬಿಕೆ ಅನಿಷ್ಟತೆಯು ವಿರೋಧಿಸಿದವರು!
ತಂದೆ ಬೀರಪ್ಪ ನಾಯಕರ ಏಕೈಕ ಕುಲಪುತ್ರರು .
ತಾಯಿ ಬಚ್ಚಮ್ಮರು ಹರಕೆ ಹೊತ್ತು ಹೆತ್ತ ಸುಪುತ್ರರು !
ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕರು.
ಕನಕ ಸಿಕ್ಕಿದ್ದರಿಂದ ಇವರು ಕನಕದಾಸರಾದರು !
ಆರಾಧ್ಯದೈವ ಕಾಗಿನೆಲೆ ಆದಿಕೇಶವ ದೇವರು
ಕುಲದೇವರು ತಿರುಪತಿ ತಿಮಪ್ಪನವರು !
ಕನಕನು ಉಡುಪಿಯ ಶ್ರೀ ಕೃಷ್ಣನ ಪರಮ ಭಕ್ತರು
ಶ್ರೀ ಕೃಷ್ಣನ ದರ್ಶನಕ್ಕೆ ಅಡ್ಡಿ ಮಾಡಿದ ಬ್ರಾಹ್ಮಣರು !
ದೇವಾಲಯದ ಹಿಂದೆಯೇ ನಿಂತು ಹಾಡಿದ ಕನಕರು
ದಾಸಭಕ್ತಿಗೆ ಮೆಚ್ಚಿ ಶ್ರೀ ಕೃಷ್ಣನು ಪ್ರತ್ಯಕ್ಷರಾದರು !
– ರವಿ.ಎಸ್.ಮೊಘಾ,ಕಿಣ್ಣಿ ಸಡಕ್ ತಾ ಕಮಲಾಪುರ ಜಿ.ಕಲಬುರಗಿ.