ಕನ್ನಡ ಪ್ರೀತಿ

ಕನ್ನಡ ಶಾಲೆ
ಉಳ್ಸಿ
ಕನ್ನಡ ಭಾಷೆ
ಬೆಳ್ಸಿ

ಕನ್ನಡವೇ ನಮ್ಮ
ಉಸ್ರು
ತಂದು ಕೊಡುತ್ತೆ
ಹೆಸ್ರು

ನಿಮ್ಮ ಮಕ್ಳನ್ನ
ಕನ್ನಡ ಶಾಲೆಗೆ ಸೇರಿಸಿ
ಕನ್ನಡದ ಕೀರ್ತಿ
ಬೆಳಗಿಸಿ

ಕನ್ನಡ ಅಂದ್ರೆ
ಬಲು ಇಷ್ಟ
ಆಗೋದಿಲ್ಲ
ಏನೂ ನಷ್ಟ

ಕನ್ನಡವೇ ನನ್ನ
ಪಿರಾಣ
ಭಾಷೆಯ ಏಳ್ಗೆ ಗೆ
ಇದುವೇ ಕಾರಣ

ಮಾಡ್ಬೇಡಿ
ತಿರಸ್ಕಾರ
ಹೇಳಿ ನೀವು
ಕನ್ನಡಕ್ಕೆ ಜೈ ಜೈ ಕಾರ

……

 

ಮಹೇಶ್ ಎಸ್ ಹೆಚ್
ಹೆಸರೂರ
ಶಿಕ್ಷಕರು
ತಾಲ್ಲೂಕು ಮುಂಡರಗಿ
ಜಿಲ್ಲೆ ಗದಗ

 

 ಬರಹಗಾರ ಪರಿಚಯ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *