Oplus_131072

ಕೆಂಬಾಳೆ.

ಬದುಕಿನ ಮುದ ಮುಂಬೆಳಗಿನ ಹದ ಹೊಂಬಾಳೆ
ಮರೆಯದೆ ಹೊಸನಾಳೆಯ ಬಯಸಿದೆ ಕೆಂಬಾಳೆ. ।

ಕರಿ ನೆಲದಲ್ಲಿ ತರತರ ಗರಿಗೆದರಿದೆ ಸೀರಿಮರಿ
ಸುಲಿದಸ್ಟು ಸಲಿಸು ಸಿರಿಗನ್ನಡದ ಈ ಬಾಳೆ ಸಲಿಗೆ
ಮೆಲೆಯಲು ಸವಿಗನ್ನಡದಂತದು ಮದು ಮೆತ್ತಗೆ
ಬಯಲಿನ ಬನಸಿರಿಗದು ಹೊಸ ಹೆಸರದು ಕೆಂಬಾಳೆ. ।

ಸವಿಮಾತಿಗೆ ಸದಾ ಮನ ಸೋತಿದೆ ಮೈಮರೆತು
ತಿರುಳು ಕೆನ್ನೆಯಲಿ ಬಾಗಿದ ಗೋನೆಗೆ ಮನಸೋತು
ನಾಟಿದ ನೋಟಕ್ಕೆ ಅಪ್ಪಿದೆ, ತಪ್ಪದೆ ತಂಪಾಯಿತು
ಬರುವಗೆ ಹೊನ್ನಗೆಯಲಿ ಮನ್ನಿಸಿ ಕರೆಯಿತು. ।

–  ದೇವೇಂದ್ರ ಕಟ್ಟಿಮನಿ.ಕಮಲಾಪುರ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *