ಮಲೆನಾಡ ಕವಿ
ಮಲೆನಾಡಿನ ತಂಪಲ್ಲಿ ಅರಳಿದರು
ಹಚ್ಚ ಹಸಿರಲೆ ಮಧ್ಯೆ ಉಸಿರಾದರು
ಸಾಹಿತ್ಯ ಕ್ಷೇತ್ರಕ್ಕೆ ದಾಪುಗಾಲ ಹಾಕಿದರು
ಸವಿನುಡಿ ಜೇನಿನಂತೆ ಸಾಹಿತ್ಯ ಬರೆದರು
ಓದುವ ವಿಷಯ ಸಾಹಿತ್ಯ ಬೆರೆಸಿ ಓದಿದರು
ಆಂಗ್ಲ ಭಾಷೆ ಕನ್ನಡಕ್ಕೆ ಅನುವಾದ ಮಾಡಿದರು
ಮೊದಲ ಸಾಹಿತ್ಯ ರಚಿಸಿ ಹೇಳಿದರು
ಜನಪ್ರಿಯ ಕವಿತೆಯಾಗಿ ಹೊರಹೊಮ್ಮಿದರು
ಕನ್ನಡ ದಿನಪತ್ರಿಕೆ ಸೇವೆ ಮಾಡುತ್ತಾ
ಕನ್ನಡ ಸಾಹಿತ್ಯ ಅಭಿವೃದ್ಧಿಯತ್ತ ತರುತ್ತಾ
ಶ್ರೀ ರಾಮಾಯಣ ದರ್ಶನಂ ಕೃತಿ ಅರ್ಪಿಸುತ್ತಾ
ಜ್ಞಾನಪೀಠ ಪ್ರಶಸ್ತಿಗೆ ಬಾಜನರಾಗುತ್ತಾ
ಕನ್ನಡವೇ ಉಸಿರು ಕನ್ನಡವೇ ಹಸಿರು ಎನ್ನುತ್ತಾ
ಕಾವ್ಯದ ರಸ ಚಿಲುಮೆ ಉಣಬಡಿಸಿ
ಯುಗದ ಕವಿ ಜಗದ ಕವಿ ಎಂದೆನಿಸಿ
ಸೀತಮ್ಮ ವೆಂಕಟಪ್ಪ ಅವರ ಪುತ್ರರೇನಿಸಿ
ಕರುನಾಡಿನ ಕಂದ ಕುವೆಂಪು ಅವರಿಗೆ ನಮನ ಸಲ್ಲಿಸಿ
– ಕು. ಕವಿತಾ ಎಮ್ ಮಾಲಿ ಪಾಟೀಲ.