ಮನಮೋಹಕ ಬಸವಕಲ್ಯಾಣ ವಸ್ತುಸಂಗ್ರಹಾಲಯ
——————————-
ಕಲಾತ್ಮಕ ವಸ್ತುಗಳ ಮೂಲಕ ನಾಗರಿಕತೆಯ ಬೆಳವಣಿಗೆಯ ಜೂತೆಗೆ ಮಾನವನ ಅಭಿರುಚಿಗಳ ಅಭಿವ್ಯಕ್ತಿಯನ್ನು ನಾವು ಕಾಣುತ್ತೇವೆ. ಆಯ ಕಾಲದ ಬದುಕಿನ ವ್ಯೆವಿದ್ಯಮಯವಾದ ವಸ್ತು-ವ್ಯೆಖರಿಗಳ ಅನುಭ ಪಡಿಯುತ್ತೇವೆ. ಇಂತಹ ವಸ್ತುಗಳು ಸಂಗ್ರಹಿಸಲ್ಪಟ್ಟ ವಸ್ತುಸಂಗ್ರಹಾಲಯ ಇಂತಹ ವಿಚಾರ ವಿನಿಮಯಕ್ಕೆ ದಾರಿಮಾಡಿಕೊಡುತ್ತದೆ. ಸಂಗ್ರಹಾಲಯದಲ್ಲಿದ್ದ ಒಂದೊಂದು ವಸ್ತುಗಳು ಇತಿಹಾಸ ಹೇಳುತ್ತವೆ. ಇಂತಹ ವಸ್ತುಗಳ ಮುಖಾಂತರ ನಮ್ಮ ಪೂರ್ವಜರು ಹೇಗಿದ್ದರು? ಅವರ ನಾಗರಿಕತೆ, ಆಡಳಿತ, ಬದುಕು, ಶಿಕ್ಷಣ, ಸಂಸ್ಕೃತಿ , ನಿಮ್ಮ ಗುಣಗಳು ಹೇಗಿವೆ ಎಂದು ತಿಳಿದುಕೊಳ್ಳಲು ಸಾಧ್ಯವಾಯಿತು. ಉತ್ಖನನದಿಂದ ಮತ್ತು ಇತರ ಮಾರ್ಗಗಳಿಂದ ಅನೇಕ ಪುರಾತನ ಪಳೆಯುಳಿಕೆಗಳ ಗ್ರಂಥ, ಶಿಲ್ಪಕಲೆ, ಶಾಸನಗಳು ಆಯಾ ಪ್ರದೇಶದ ಸಂಸ್ಕೃತಿಯ ಬಗ್ಗೆ ಆಯಾ ಪ್ರದೇಶದ ಅಧ್ಯಯನದ ನಿಮಿತ್ತ ದೇಶದುದ್ದಗಲಕ್ಕೊ ಇರುವ ವಸ್ತುಸಂಗ್ರಹಾಲಯಗಳಲ್ಲಿ ಜೋಪಾನವಾಗಿ ಸಂಗ್ರಹಿಸಲಾಗಿದೆ. ಅದೇ ರೀತಿ ಹೈದ್ರಾಬಾದ ಕರ್ನಾಟಕದಲ್ಲಿ ಆಳಿ ಹೋದ ಸಂಸ್ಥಾನಗಳ ಅವಶೇಷಗಳನೋಳಗೊಂಡು ವಸ್ತುಸಂಗ್ರಹಾಲಯ ”ಬಸವ ಕಲ್ಯಾಣ”ದಲ್ಲಿದೆ.
ಬಸವ ಕಲ್ಯಾಣ ಬೀದರ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ . ಬೀದರದಿಂದ ೮೫.ಕಿ. ಮೀ. ದೂರದಲ್ಲಿದ್ದು ಗುಲಬರ್ಗಾ ಉತ್ತರಕ್ಕೆ ೬೫.ಕಿ.ಮೀ, ದೂರದಲ್ಲಿ ಪೂರ್ವ-ಪಶ್ಚಿಮಕ್ಕೆ ೬೫ನೇ ರಾಷ್ಟ್ರೀಯ ಹೆದ್ದಾರಿ ಬರುತ್ತದೆ.(ಮೊದಲು ಈ ಹೆದ್ದಾರಿಗೆ ೯ನೇ ರಾಷ್ಟ್ರೀಯ ಹೆದ್ದಾರಿ ಎಂದು ಕರೆಯುತ್ತಾರೆ) ಇಲ್ಲಿಂದ ಪಶ್ಚಿಮದಲ್ಲಿದ್ದ ಸಸ್ತಾಪೂರ ಬಾಂಗ್ಲಾ ಎಂಬ ಗ್ರಾಮದಿಂದ ಉತ್ತರಕ್ಕೆ ೬ ಕಿ. ಮೀ. ಒಳಗೆ ಹೋಗಬೇಕಾಗುತ್ತದೆ.
ಈ ವಸ್ತುಸಂಗ್ರಹಾಲಯ ಆರಂಭವಾದದ್ದು ೧೯೬೪ ಮಾರ್ಚ್ ೨೪ ರಂದು. ಈ ಸಂಗ್ರಹಾಲಯ ಮೊದಲು ಕೋಟೆಯ ಒಳಗಡೆ ಇತ್ತು. ಆದರೆ ಈಗಿಲ್ಲ. ಕೋಟೆಯ ಮುಂಭಾಗದ ಎಡಗಡೆ ಒಂದು ಬೃಹತ್ ಕಟ್ಟಡವನ್ನು ಕಟ್ಟಲಾಗಿದೆ. ಈಗ ಅಲ್ಲಿದ್ದ ಅವಶೇಷಗಳೆಲ್ಲ ನೂತನ ಕಟ್ಟಡದಲ್ಲಿ ಸಂಗ್ರಹಿಸಲಾಗಿದೆ.
ಈ ಕೋಟೆ ಚಾಲುಕ್ಯ ವಂಶದ ೧ನೆಯ ಸೋಮೇಶ್ವರ (ಕಾಲ— ೧೦೪೦) ಕಟ್ಟಿದನೆಂದು ತಿಳಿದುಬರುತ್ತದೆ. ಇವನು ೧೦೪೨ ರಲ್ಲಿ ಪ್ರಥಮವಾಗಿ ಕಲ್ಯಾಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು.
ಇವನ ನಂತರ ಇವನ ಎರಡನೇಯ ಮಗನಾದ ಆರನೆಯ ವಿಕ್ರಮಾದಿತ್ಯನು ಕಲ್ಯಾಣ ನಗರ (೧೦೭೬) ದಲ್ಲಿ ಪಟ್ಟಾಭಿಷಿಕ್ತನಾದ. ಈತನು ಯುದ್ಧ ಕೌಶಲ್ಯ ಧರ್ಮ, ಸಾಹಿತ್ಯ ಕಾವ್ಯ ಲಲಿತಕಲೆಗಳನ್ನು ಪ್ರೋತ್ಸಾಹಿಸಿದ. ಕಲ್ಯಾಣಿ ಚಾಲುಕ್ಯರಲ್ಲಿಯೇ ಅತ್ಯಂತ ಶ್ರೇಷ್ಠ ಚಕ್ರವರ್ತಿಯಾದ. ಇವನ ಆಸ್ತಾನದ ಕವಿ, ಬಿಲ್ಹಣ “ವಿಕ್ರಮಾಂಕದೇವ ಚರಿತಂ” ಎಂಬ ಗ್ರಂಥವನ್ನು ರಚಿಸಿದಾನೆ. ಕವಿ, ವಿಜ್ಞಾನೇಶ್ವರ “ಮಿತಾಕ್ಷರ” ಎಂಬ ಧರ್ಮ ಶಾಸ್ತç ಬರೆದಿದ್ದಾರೆ. ಇವರಿಬ್ಬರೂ ಕಲ್ಯಾಣ ಪಟ್ಟಣದ ಸೌಂದರ್ಯ ಮತ್ತು ವಿಕ್ರಮಾದಿತ್ಯನ ಆಳ್ವಿಕೆಯ ಬಗ್ಗೆ ತಮ್ಮ ಬರಹದಲ್ಲಿ ಬಣ್ಣಿಸಿದರು.
೧೧೬೨ ರಲ್ಲಿ ಕಳಚೂರಿ ವಂಶದ “ಬಿಜ್ಜಳ” ಚಕ್ರವರ್ತಿಯಾದ. ಬಿಜ್ಜಳ ಪ್ರಧಾನಿಯಾಗಿ ಕಲ್ಯಾಣಕ್ಕೆ ಬಂದ “ಬಸವಣ್ಣ“ನವರು ಅನುಭವ ಮಂಟಪ ಎನ್ನುವ ಒಂದು ಆಧ್ಯಾತ್ಮಿಕ ಕೂಟವೊಂದು ಸ್ಥಾಪಿಸಿದರು . ಅದೇ ಕಾಲಕ್ಕೆ ಹಲವಾರು ಕಡೆಯಿಂದ ಶರಣರು ಕಲ್ಯಾಣಕ್ಕೆ ಆಗಮಿಸಿದರು. ಅವರವರ ಭಕ್ತಿರಸದಿಂದ ಸೃಷ್ಟಿಯಾಗಿ ಹೊರಹೊಮ್ಮುವ “ವಚನ”ದ ರಚನೆಗೆ ಅನುಭವ ಮಂಟಪವೇ ಮುಖ್ಯ ಕೇಂದ್ರವಾಯಿತು. ಅದೇ ಸಮಯಕ್ಕೆ ಸಾಮಾಜಿಕ ಧಾರ್ಮಿಕ ಸಾಹಿತ್ಯಕ ವೇಗೋತ್ಕರ್ಷಗಳಾದವು. ಹೀಗಾಗಿ ಕನ್ನಡ ಸಾಹಿತ್ಯಕ್ಕೆ ನಾಂದಿಹಾಡಿದ ಕಲ್ಯಾಣವನ್ನು ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂಥದಾಗಿದೆ.
೧೧೬೭ ರಲ್ಲಿ ಕಲ್ಯಾಣದಲ್ಲಿ ಕ್ರಾಂತಿಯಾಗಿ ಕಳಚೂರಿ ಬಿಜ್ಜಳನ ಕೊಲೆ ನಡೆದಿದೆ. ತದನಂತರ ಮಕ್ಕಳಾದ ಸೋವಿದೇವ, ಸಂಕಮ, ಅಹಮಲ್ಲರು ಕಲ್ಯಾಣವನ್ನು ಆಳಿದರೂ ಮತ್ತೆ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿತ್ತು ಆದರೆ ದೇವಗಿರಿ ಯಾದವರು ವಾರಂಗಲ್ಲಿನ ಕಾಕತಿಯರು ಚಾಲುಕ್ಯ ದೊರೆ ಸೋಮೇಶ್ವರನನ್ನು ತೊಲಗಿಸಿ ಕೆಲವು ವರ್ಷ ಕಲ್ಯಾಣವನ್ನು ಆಳಿದರು.
1321 ರಲ್ಲಿ ಮಹಮದ್ ಬಿನ್ ತುಗಲಕ್ ನು ಕೋಟೆ ವಶಪಡಿಸಿಕೊಂಡನೆಂಬ ಅವನ ಒಂದು ಶಾಸನ ಸೂಚಿಸುತ್ತದೆ. ಅದರಲ್ಲಿ ಕಲ್ಯಾಣವನ್ನು ಕಸಬಾ ಕಲ್ಯಾಣ ಎಂದು ಉಲ್ಲೇಖಿಸಲಾಗಿದೆ ಈತನ ಆಳ್ವಿಕೆಯ ಕಾಲದಿಂದಲೇ ಮೊದಲಿನ ವೈಭವವನೆಲ್ಲ ಕಳೆದುಕೊಂಡು ಒಂದು ಹಳ್ಳಿಗೆ ಸ್ವರೂಪಕ್ಕೆ ಬಂದಿತೆಂಬುದು ತಿಳಿದು ಬರುತ್ತದೆ.
ಮುಂದೆ ಅಫ್ಘಾನ, ಬಹುಮನಿ,ಬರೀದಶಾಹಿ, ಆದಿಲ್ ಶಾಹಿ, ಮೊಗಲ್ ಮುಂತಾದವರ ಆಳ್ವಿಕೆಗೆ ಒಳಪಟ್ಟಿತು. ಆದರೆ ಕ್ರಿ. ಶ. ೧೬೫೬ ರಲ್ಲಿ ದಿಲ್ಲಿಯ ಸುಲತ್ತಾನ ಔಜೆಬನು ಕಲ್ಯಾಣದ ಕೋಟೆ ತನ್ನದಾಗಿಸಿಕೊಂಡು,ಹೈದ್ರಾಬಾದ್ ನಿಜಾಮ್ ಉಲ್ಮುಲ್ಖಿಸಿಕೊಂಡು ಸುಬೇದರನಾಗಿ ನೇಮೀಸಿದನು. ಮುಂದೆ ನಿಜಾಮ್ಮುಲ್ಖನು ತನ್ನ ಅಳಿಯ ನವಾಬ್ ಖಲಂದ್ಖಾನ್ನಿಗೆ ಜಹಿಗೀ ಉಮ್ ಮೀ ಕೊಟ್ಟನು. ತದನಂತರ ನವಾಬರ ಆಳ್ವಿಕೆಯಲ್ಲಿ ರಜಾಕಾರರ ಹಾವಳಿ ಆಂಭವಾಯಿತು. ಇದನ್ನು ತಡೆಗಟ್ಟಲು ೧೯೪೫ ಸೆಪ್ಟೆಂಬರ್ ೧೩ ರಂದು ಭಾರತ ಸರ್ಕಾರ ಹೈದ್ರಾಬಾದ್ ಮೇಲೆ ಸೈನಿಕ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈವೇಳೆಯಲ್ಲಿ ನವಾಬರು ಕಲ್ಯಾಣದಿಂದ ಕದಲಿದರು.
೧೯೫೬ ರಲ್ಲಿ ನವಾಬ್ ಜಮಾಲೋದ್ದಿನ್ ತೀರಿಕೊಡನು. ಅದೇ ವರ್ಷದ ಆಧಾರದ ಮೇಲೆ
ಪ್ರದೇಶಗಳನ್ನು ರಚಿಸಲಾಗಿದೆ. ಮತ್ತು ಕಲ್ಯಾಣವನ್ನು ಕರ್ನಾಟಕದೊಳಗೆ ಸೇರಿಸಲಾಯಿತು. ಮುಂದೆ ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಬಸವಣ್ಣನವರ ನೆನಪಿಗಾಗಿ ೧೯೬೫ ರಲ್ಲಿ ಬೀದರ ಜಿಲ್ಲೆಯ ನೂತನ ತಾಲ್ಲೂಕಾಗಿ ಬಸವಕಲ್ಯಾಣ ಎಂದು ನಾಮಕರಣ ಮಾಡಿದರು.
ಹೈದ್ರಾಬಾದ ಕರ್ನಾಟಕದಲ್ಲಿ ಆಳಿಹೋದ ಅರಸರು ಕಟ್ಟಿದ ಕೋಟೆ ಮತ್ತು ಅವರ ಅವಶೇಷಗಳು ಕಣ್ಮನ ಸೆಳೆಯುತ್ತವೆ. ಸುಮಾರು ಒಂದುವರೆ ಕಿ. ಮೀ. ಸುತ್ತಳತೆಯಲ್ಲಿರುವ ಈ ಕೋಟೆಯ ಒಳಗಡೆ ಪ್ರವೇಶಿಸಬೇಕಾದರೆ ಒಟ್ಟು ಏಳು ದ್ವಾರಗಳು ಇವೆ. ಐದು ದ್ವಾರಗಳು ಪೂರ್ವಕ್ಕೆ ಒಂದು ದ್ವಾರದ ಉತ್ತರಕ್ಕೆ ಉಳಿದಿವೆ ಇನ್ನೂ ಕೋಟೆಯ ಹೆಬ್ಬಾಗಿಲು ದಕ್ಷಿಣಕಡೆಗೆ ಮುಖಮಾಡಿದೆ
ಈ ಕೋಟೆಯ ಹೆಬ್ಬಾಗಿಲು ಎರಡಂತಸ್ತಿನಲ್ಲಿ ನಿರ್ಮಿಸಲಾಗಿದ್ದು ಇದಕ್ಕೆ “ಬಾರ್ಗ ಈ ಹುಸೇನಿ” ಎಂದು ಕರೆಯುತ್ತಾರೆ ಇದರ ಮೇಲೆ ಪರ್ಶಿಯನ್ ಶೈಲಿಯ ಬರಹ ಕಾಣಬಹುದು ಈ ಬರಹದ ಪ್ರಕಾರ ಆ ಕಾಲಕ್ಕೆ ಶಾಹಬಾಬರ್ ಮೀರಕಲಾ ಎಂಬ ರಾಜನಿದ್ದ ಹಜರತ್ ಹುಸೇನ್ ಎಂಬುವರ ನೆನಪಿಗಾಗಿ ಈ ಕೋಟೆಯ ಹೊರಗಡೆ ಕೆಲವು ಪ್ರಮುಖ ಸ್ಥಳಗಳನ್ನು ನಿರ್ಮೀಸಿ ಒಂದು ದೊಡ್ಡದಾದ ಹೆಬ್ಬಾಗಿಲು ಕಟ್ಟಬೇಕೆಂದು ಕನಸು ಕಂಡನು ಆದ್ದರಿಂದ [ ಕಿ. ಶ. ೧೩೦೧ ಹಿಜರಿ] ಈ ಹೆಬ್ಬಾಗಿಲು ನಿರ್ಮಿಸಿದ್ದು ಇದರ ಒಳಭಾಗದ ಬಲಬದಿಯಲ್ಲೊಂದು ಚಿಕ್ಕ ದ್ವಾರ ಇದೆ. ಇಲ್ಲಿಂದ ಕೋಟೆಯ ಹೆಬ್ಬಾಗಿಲಿನ ಮೇಲೇರಲು ಮೆಟ್ಟಲುಗಳಿವೆ. ಅಲಿಂದ ಇಡೀ ಬಸವ ಕಲ್ಯಾಣದ ಸೊಬಗನ್ನು ನೋಡಬಹುದು
ಕೋಟೆಯ ಹೆಬ್ಬಾಗಿಲನ್ನು ಪ್ರವೇಶಿಸಿದೊಡನೆ ವಿಶಾಲವಾದ ಸಭಾಂಗಣ ಸಭಾಂಗಣದಲ್ಲಿ ಮೂರು ಮುಖ ಮಂಟಪಗಳು ಅಕ್ಕಪಕ್ಕದಲ್ಲಿ ಗಜ ಮತ್ತು ಅಶ್ವಶಾಲೆಗಳಿವೆ. ಅಲ್ಲಿಂದ ಕೋಟೆಯ ಒಳಾಂಗಣಕ್ಕೆ ಹೋಗಲು ಚಿಕ್ಕದ್ವಾರವಿದೆ. ಇಲ್ಲಿಂದ ಕೋಟೆಯ ಸುತ್ತಲು ಆಳವಾದ ಕಂದಕ ಕಾಣುತ್ತೇವೆ ಹಾಗೆ ಮುಂದೆ ಹೋದಂತೆ ಎರಡು ದ್ವಾರಗಳು ಪ್ರವೇಶಿಸಿವೆ ಅರ್ಧಚಂದ್ರಾಕೃತಿಯ ಬಲಬದಿಯಲ್ಲಿ 5 ಕೋಣೆಗಳಿರುವ ಬಂದಿಖಾನೆ ಇದ್ದು ಇದರ ಮೊಗಶಾಲೆಯಲ್ಲಿ ಪಾರ್ಸಿ ಅರಬ್ಬಿ ಮರಾಠಿ ಸಂಸ್ಕೃತ ಮತ್ತು ಹಳೆಗನ್ನಡ ಶಿಲಾ ಶಾಸನಗಳಿವೆ. ಎಡಬದಿಗೆ ಮೂರು ದ್ವಾರಗಳನ್ನು ಪ್ರವೇಶಿಸದಂತೆ ಎತ್ತರವಾದ ದುರ್ಗಾ ಇಲ್ಲಿಂದ ಮೆಟ್ಟಲೇರುತ್ತ ಮುನ್ನುಗ್ಗಿದಂತೆ ಯಾವ ಬೆಟ್ಟದಂತಿರುವ ಬಂಡೆಗಲ್ಲಿನಲ್ಲೂ ಕೊರೆದಿರುವ ದಾರಿಯಂತೆ ಭಾಸವಾಗುತ್ತದೆ. ಮುಂದೆ ಬಂದರೆ ಅಕ್ಕಪಕ್ಕದಲ್ಲಿ ಮದ್ದಿನ ಭಂಡಾರವಿದೆ. ಅದರ ಮುಂದೆ ಬೃಹದಾಕಾರದ ಆಲದ ಮರವಿದೆ. ಇದರ ಕೆಳಗಡೆ ದೊಡ್ಡದಾದ ಬೀಸುವ ಕಲ್ಲು ಇದೆ. ಎತ್ತರವಾದ ಕೋಟೆಯನ್ನೇರಲು ದೊಡ್ಡ ದೊಡ್ಡ ಬಂಡೆಯ ಹಾಸುಗಲ್ಲಿನ ಮೆಟ್ಟಿಲುಗಳಿದ್ದು ಸರ್ಪದಂತೆ ದಾರಿಯಾಗುತ್ತದೆ. ಇವುಗಳನ್ನೆಲ್ಲ ವೀಕ್ಷಿಸುತ್ತ ಹೋದಂತೆ ಅಕ್ಕಪಕ್ಕದಲ್ಲಿ ತಾಲಿಮ್ಖಾನೆ, ರಾಜಮಹಲ್, ಲಕ್ಷ್ಮೀ ದೇವಾಲಯ ರಂಗೀನ್ ಮಹಲ್, ಹೈದರಮಹಲ್, ನೃತ್ಯ ಸಭಾಂಗಣ, ಸ್ನಾನಗೃಹ, ಕಡಕ್ ಬಿಜಲಿ ತೋಪು ನೌಗಜ ತೋಪು ಮತ್ತು ಮೊದಲಿದ್ದ ಹಳೆ ವಸ್ತುಸಂಗ್ರಹಾಲಯದ ಕಟ್ಟಡಕ್ಕೆ ಬೇರೆ ದಿಕ್ಕಿನಕಡೆ ದಾರಿ ಸಾಗುತ್ತದೆ.
ಬೀಸುವ ಕಲ್ಲು:- ಗ್ರಾನೈಟ್ ಕಲ್ಲಿನಲ್ಲಿ ನಿರ್ಮಿಸಲಾದ ಬೀಸುವಕಲ್ಲು ೨೧ ಅಂಗುಲದ ಎತ್ತರವಾದ ಕಟ್ಟೆಯ ಮೇಲೆ ನೋಡಬಹುದು . ಈ ಬೀಸುವ ಕಲ್ಲು ೧೧ ಅಂಗುಲ ದಪ್ಪವಾಗಿದ್ದು ೧೩೩ ಅಂಗುಲ ಸುತ್ತಳತೆಯಲ್ಲಿದೆ. ಇದರ ಆಕಾರ ದೊಡ್ಡದಿರುವದನ್ನು ನೋಡಿದರೆ ಎಂತಹವರಿಗೂ ಸಹ ಆಶ್ಚರ್ಯ ಚಕಿತಗೊಳಿಸಬಹುದು.
ರಾಜಮಹಲ್:- ಪೂರ್ವಕ್ಕೆ ಮುಖಮಾಡಿರವ ಈ ರಾಜಮಹಲ್ಗೆ ನಾಲ್ಕು ಕಮಾನಿನ ಬಾಗಿಲುಗಳಿವೆ. ಪ್ರತಿಯೊಂದು ಕಟ್ಟಿಗೆಯ ಬಾಗಿಲುಗಳಿದ್ದು ಒಂದೊಂದು ಬಾಗಿಲಿನ ಮೇಲೆ ಪ್ಲಾಸ್ಟರದಿಂದ ವೃತಾಕರದ ಚಿತ್ರಗಳನ್ನು ಚಿತ್ರಿಸಿದ್ದಾರೆ. ಈ ಮಹಲಿನ ಮುಂಭಾಗದ ಗೋಡೆಯ ಮೇಲೆ ಅರಬ್ಬಿ ಲಿಪಿಯ ಶಿಲಾ ಶಾಸನವಿದೆ. ಇದರ ಪ್ರಕಾರ ಕುತುಬ್ ಶಾಹಿ, ಆದಿಲ್ ಶಾಹಿ, ನಿಜಾಮ್ ಶಾಹಿ, ಬರೀದ ಶಾಹಿ,ಮುಂತಾದವರು ಇದರಲ್ಲಿ ಕುಳಿತುಕೊಂಡು ರಾಜಭಾರ ಮಾಡಿದ್ದಾರೆಂದು ತಿಳಿದು ಬಂದಿದೆ.ರಾಜ್ಮಹಲಿನ ಒಳಭಾಗದ ಹಿಂಭಾಗಕ್ಕೆ 9 ಕಿಟಕಿಗಳಿದ್ದು ಪ್ರತಿಯೊಂದಕ್ಕೂ ಕಟ್ಟಿಗೆಯ ಬಾಗಿಲುಗಳಿವೆ.ಇದರ ಒಳಮಾಳಿಗೆಯ ಮೇಲೆ ಮಧ್ಯದ ದೊಡ್ಡದಾದ ಕಮಲದ ಹೂವನ್ನು ಚಿತ್ರಿಸಿ ಅದಕ್ಕೆ ಹೊಂದಿಕೊಂಡಂತೆ ಎಂಟು ದಿಕ್ಕಿನ ವಕ್ರರೇಖೆಗಳು, ಬಳ್ಳಿಗಳು. ಯಾವ ಗೊಡೆಗಳ ಮೇಲೆ ಮಾಡುಗಳು ಇರುವಂತೆ ಕಂಡು ಬಂದರೂ ಅಲ್ಲಿ ವಸ್ತುವನ್ನು ಇಡಲು ಬರುವುದಿಲ್ಲ. ಸುಮಾರು ಅರ್ಧ ಸೆಂ. ಮೀ. ಆಳದಲ್ಲಿ ಇರುವ ಈ ಮಾಡುಗಳು ಹೂವು, ಹೂಜಿ, ಹಣತೆ, ಆಕಾರಗಳಲ್ಲಿವೆ. ಈ ಮಹಲಿನಲ್ಲಿ ಅಷ್ಟೇ ಅಲ್ಲ! ಇಡೀ ಕೋಟೆಯೊಳಗಿರುವ ಸಭಾಂಗಣದಲ್ಲಿಯೂ ನೋಡಬಹುದು.
ರಂಗೀನ ಮಹಲ್:- ೧೭-೧೮ ನೇ ಶತಮಾನದ ಈ ರಂಗೀನ ಮಹಲಿನ ದ್ವಾರ ಉತ್ತರಕ್ಕೆ ಮುಖವಾಗಿದೆ. ಬಾಗಿಲನ್ನು ಪ್ರವೇಶಿಸಿದರೆ ಬಲ ಭಾಗಕ್ಕೆ ತಿಳಿ ಕಪ್ಪು ಕಲ್ಲಿನಲ್ಲಿ ಕಟ್ಟಲಾದ ಆರು ಸ್ತಂಭಗಳು ಕೇಳಿಬರುತ್ತವೆ. ಇವಗಳ ಪಕ್ಕಕ್ಕೆ ಷಟ್ಕೋನ ಆಕೃತಿಯ ನೀರಿನ ಚಿಲುಮೆಯೊಂದಿದೆ. ಇದರ ಆಚೆಈಚೆಗೆ ರಾಜ-ರಾಣಿಯರ ಕುಳಿತುಕೊಳ್ಳುವ ಆಸನಗಳಿವೆ. ಈ ಮಹಲಿನ ಗೋಡೆಗಳ ಮೇಲೆ ೭೮ / ೨೮ ಅಂಗುಲ ಜಾಮಿತಿಕ ಆಕೃತಿಯನ್ನು ಬಳಸಿ ನಕ್ಷೆ ಮತ್ತು ಹೂವುಗಳ ಚಿತ್ರವನ್ನು ಚಿತ್ರಿಸಲಾಗಿದೆ. ಒಟ್ಟು ೧೫ ಸ್ಥಳಗಳಲ್ಲಿ ಇದ್ದು ಒಂದರಂತೆ ಇನ್ನೊಂದು ಚಿತ್ರಗಳು ಇರುವದಿಲ್ಲ. ಈ ಮಹಲಿನ ಗೋಡೆಗಳ ಮೇಲೆ ಒಂದೊಂದು ಅಡಿಗೊಂದು ಮಾಡುಗಳು ಬೇರೆ ಬೇರೆ ಆಕಾರದಲ್ಲಿ ಸೃಷ್ಟಿಮಾಡಿದ್ದು ಆಕರ್ಷಕವಾದವು. ಆದರೆ ಈಗ ಇದರ ಮೇಲ್ಛಾವಣಿಯೂ ಬಿದ್ದು ಸಂಪೂರ್ಣ ಸಿಥಿಲಗೊಂಡಿದೆ
ಬಸವ ಕಲ್ಯಾಣ ತಾಲ್ಲೂಕು ಸಮುದ್ರಮಟ್ಟದಿಂದ ೭೧೫ ಮೀ.ನಷ್ಟು ಎತ್ತರದಲ್ಲಿದೆ, ಅಲ್ಲಿ ನೀರಿನ ಬಾವಿ ಇದೆ ಹಾಗೂ ರಾಜ್ಮಹಲಿನ ಮುಂಭಾಗದಲ್ಲೊಂದು ನೀರಿನ ಹೊಂಡವಿದೆ. ಇದರ ವೈಶಿಷ್ಟ್ಯವು ಕೇವಲ ಇದರ ಆಳ ೧೩ ಅಡಿಯಲ್ಲಿದ್ದರೂ ಸಹ ಅದರಲ್ಲಿ ನೀರು ಬತ್ತಿಹೋಗಿಲ್ಲ. ಎಂದು ಹಿಂದಿನವರು ನೋಡುತ್ತ ಬಂದವರ ಅಭಿಪ್ರಾಯ. ಈ ಕೋಟೆ 150 ಅಡಿ ಮೇಲಿದ್ದರೂ ಈ ಹೊಡದಲ್ಲಿ ನೀರಿರುವದು ನೋಡಿದರೆ ಎಂಥವರಿಗೂ ಸಹ ಆಶ್ಚರ್ಯವಾಗಬಹುದು
ರಾಜ್ಮಹಲಿನ ಬಲಭಾಗಕ್ಕೆ ,ಉತ್ತರಕ್ಕೆ ಮುಖ ಮಾಡಿರುವ ಲಕ್ಷ್ಮೀ ದೇವಾಲಯ ವಿಶಿಷ್ಟ ವಾಸ್ತುಶಿಲ್ಪ ಅತ್ಯಂತ ಸೂಕ್ಷ್ಮತೆ ಮತ್ತು ಕಲಾತ್ಮಕ ಆಕರ್ಷಣಿಯಾಗಿದೆ. ದೇವಸ್ಥಾನದ ಬಾಗಿಲಿನ ಸಾಲು ಸಾಲಾಗಿದ್ದ ಶಿಲ್ಪ ಕಲೆಯಂತೂ ಅತ್ಯಂತ ಆಕರ್ಷಣೀಯವೆನಿಸುತ್ತದೆ. ಇದನ್ನು ಕಲ್ಯಾಣ ಚಾಲುಕ್ಯರ ಆಳ್ವಿಕೆಯಲ್ಲಿನ ಒಂದು ಗಮನಾರ್ಹ ಮತ್ತು ಸುಂದರ ವಾಸ್ತು ಶಿಲ್ಪ . ಇದು ಅವರ ಕಾಲದಲ್ಲಿ ಲಕ್ಷ್ಮೀ ದೇವಸ್ಥಾನವಾಗಿತ್ತೆಂದು ಹೇಳುತ್ತಾರೆ.
ನೃತ್ಯ ಸಭಾಂಗಣ :- ಹೈದರ್ ಮಹಲ್ ಪ್ರವೇಶಿಸಿದರೆ ಒಳಗಡೆ ನೃತ್ಯ ಸಭಾಂಗಣ ಕಾಣುತ್ತೇವೆ. ಇದರ ಮುಂಭಾಗದಲ್ಲಿ ಮೂರು ಕಮಾನಿನ ಆಕಾರದ ತೆರೆದ ಬಾಗಿಲುಗಳಿವೆ. ಇದರ ಒಳಗಡೆ ಹೋದರೆ ನೃತ್ಯಗಾರರು ವಸ್ತ್ರಾ ಭರಣಗಳು ಶೃಂಗರಿಸಿಕೊಳ್ಳುವ ಸ್ಥಳಗಳು ಕಂಡು ಬರುವವು. ಇಂದಿನ ನಾಟಕದ ರಂಗ ಮಂಟಪದ ಮಧ್ಯದಲ್ಲಿ ಬಾಗಿನಿಂತ ಬಾಗಿಲಿನ ಅಕ್ಕಪಕ್ಕದಲ್ಲಿ ಚಿಕ್ಕ ದ್ವಾರಗಳು ಇವೆ. ಇದರ ಒಳಗಡೆಯಿಂದ ಎಡಬದಿಗೆ ತಿರುಗಿದರೆ ರಂಗೀನ್ ಮಹಲಿಗೆ ದಾರಿ ಸಾಗುತ್ತದೆ.
ಈ ನೃತ್ಯ ಮಹಲಿನ ಮುಂಭಾಗದಲ್ಲಿ ವಿಶಾಲವಾದ ಸ್ಥಳವಿದ್ದು ಇದರ ಮಧ್ಯದಲ್ಲಿ ಉದ್ದನೆಯ ನೀರಿನ ಕಾರಂಜಿಯ ಕಟ್ಟೆಯನ್ನು ನಿರ್ಮಿಸಲಾಗಿದೆ. ಅಕ್ಕ-ಪಕ್ಕ ಮೇಲೆ-ಕೆಳಗೆ ಜನರು ಕುಳಿತು ವೀಕ್ಷಿಸಲು ಆಸನಗಳಿರುವವು. ರಾಜ ಮತ್ತು ರಾಣಿಯರ ವಿಶೇಷ ಆಸನಗಳನ್ನು ನಿರ್ಮಿಸಲಾಗಿದೆ. ಸುಮಾರು ೧೭-೧೮ ನೇ ಶತಮಾನದಲ್ಲಿ ಈ ನೃತ್ಯ ಸಭಾಂಗಣ ನಿರ್ಮಾಣವಾಗಿದೆ.
ಕೋಟೆಯ ಪ್ರತಿಯೊಂದು ಕಟ್ಟಡದ ಮೇಲೆ ಒಂದೊಂದು ಉಕ್ಕಿನ ತೋಫುಗಳಿವೆ. ಸುಮಾರು ಮೂವತ್ತಕ್ಕಿಂತ ಹೆಚ್ಚು ತೋಪುಗಳು ಈ ಕೋಟೆಯಲ್ಲಿವೆ. ಎರಡು ತೋಪುಗಳು ಆಕರ್ಷಕವಾದವು. ಒಂದು ನೌಗಜ ತೋಫು ಇನ್ನೊಂದು ಕಡಕ್ ಬಿಜಿಲಿ ತೋಫು.
ನೌಗಜ ತೋಪು:- ಮೂರು ಅಡಿ ಉದ್ದಕ್ಕೆ ಒಂದು ಗಜ ಎನ್ನುತ್ತಾರೆ. ೨೭ಅಡಿ ಉದ್ದವ ಇದಕ್ಕೆ ನೌಗಜ ತೋಪು ಎಂದು ಕರೆಯುತ್ತಾರೆ. ಕೋಟೆಯ ಎತ್ತರವಾದ ಕಟ್ಟಡದ ಮೇಲೆ ಇರುವ, ೨೭ ಅಡಿಯಲ್ಲಿರುವ ಈ ನೌಗಜ ತೋಪು ನೋಡಬಹುದು. ಇದರ ಹಿಂಭಾಗ ೬೯ ಮುಂಭಾಗ ೫೯ ಅಂಗುಲ ಸುತ್ತಳತೆ ಇದ್ದು ಸುತ್ತಮುತ್ತ ೭ ಕಬ್ಬಿಣದ ಪಟ್ಟಿಗಳು ಸುತ್ತಿವೆ. ಪ್ರತಿಯೊಂದು ಪಟ್ಟೆಗಳಿಗೆ ಎರಡು ಬದಿಗೆ ಎರಡು ಬಳೆಗಳಿದ್ದು ಈಗ 9 ಬಳೆಗಳು ಮಾತ್ರ ಇವೆ. ತೊಫಿನ ಪಕ್ಕದಲ್ಲಿ 47 ಸೆಂ. ಮೀ. ಕಂಬವಿದ್ದು ಇದರ ಸುತ್ತಳತೆ ೪೫ ಸೆಂ. ಮೀ. ಇದ್ದು ಕೆಳಭಾಗದಲ್ಲಿ ತಟ್ಟೆ ಆಕಾರದಂತೆ ಇದೆ. ಈ ಕಂಬಕ್ಕೆ ಲಗತ್ತಿಸಿ ಈ ತೋಫು ತನಗೆ ಬೇಕಾದ ದಿಕ್ಕಿನ ಕಡೆ ತಿರುಗಿಸುತ್ತಿದ್ದರಂತೆ ಆದರೆ ಈಗ ಎಲ್ಲ ಕಡೆಗೆ ಅಸ್ತವ್ಯಸ್ತವಾಗಿದೆ.
ಕಡಕ್ಬಿಜಿಲಿ ತೋಫು:- ಎತ್ತರವಾದ ಕೋಟೆಯ ಕಟ್ಟಡದ ಮೇಲೆ ಈ ಕಡಕ್ ಬಿಜಲಿ ತೋಫು ನೋಡಬಹುದು. 12 ಅಡಿ ಉದ್ದ ಮತ್ತು ಇಡೀ ತೋಫು ತುಂಬ ನುಣುಪಾಗಿದೆ. ಇದರ ಹಿಂಭಾಗ 43 , ಮುಂಭಾಗ 37, ಅಂಗುಲ ಸುತ್ತಳತೆಯಲ್ಲಿದೆ. ಸುತ್ತಮುತ್ತ ಪಂಚಧಾತುವಿನಿಂದ ಹೂ ಬಳ್ಳಿಯಂತೆ ಚಿತ್ರಗಳು ಚಿತ್ರಿಸಿದ್ದು ಆಕರ್ಷಿಸುವಂತೆ ಇದೆ. ಮುಂಭಾಗದಲ್ಲಿ ಪಕ್ಷಿಯ ದೇಹದಂತೆ ಗೋಚರಿಸುವ ಕೆಳಭಾಗದಲ್ಲಿ ಮೊಸಳೆಯ ಹಲ್ಲುಗಳಂತೆ ಇದ್ದು ಆನೆಯ ಎತ್ತರದ ಸೊಂಡಿಲಿನಂತೆ ಭಾಸವಾಗುತ್ತದೆ. ಇದರ ಹಿಂಬದಿಯಲ್ಲಿ ಉರ್ದುವಿನ ಲಿಪಿಯು ಬರೆಯಲಾಗಿದೆ. ಈ ಲಿಪಿಯ ಪ್ರಕಾರ ಈ ತೋಫು ೧೭-೧೮ನೇ ಶತಮಾನದಲ್ಲಿದ್ದ ಬರೀದಶಾಹಿ ಅನುಮತಿಯಿಂದ ನಿರ್ಮಿಸಲಾಗಿದೆ. ಎಂದು ತಿಳಿದುಬರುತ್ತದೆ. ಈ ತೋಫು ಸಹ ಎಲ್ಲಾ ದಿಕ್ಕಿನಕಡೆಗೆ ತಿರುಗಿಸುವ ತಂತ್ರಗಾರಿಕೆ ಮೆಚ್ಚುವಂತಹದ್ದು.
ಚಾಲುಕ್ಯ ವಂಶದ ೧ನೇ ಸೋಮೇಶ್ವರ ೧೦೪೨ ರಲ್ಲಿ ಈ ಕೋಟೆ ಕಟ್ಟಿದ್ದನು. ಆದರೆ ನಂತರ ಬಂದ ಹಲವಾರು ಅರಸರು ತಮಗಿಷ್ಟ ಬಂದಂತೆ ಕೋಟೆ ಒಳಗೆ ಇದ್ದ ಕೆಲವು ಕಟ್ಟಡಗಳು ಕೆಡವಿ, ಅವರಿಗಿಷ್ಟದಂತೆ ಅವರ ವಾಸ್ತು ಶಿಲ್ಪಗಳನ್ನು ನಿರ್ಮಿಸಿದ್ದಾರೆ. ಹೀಗೆ ಹಂತಹಂತವಾಗಿ ಬಂದ ಅರಸರು ತಮಗಿಷ್ಟ ಬಂದಂತೆ, ಕಟ್ಟಿದ ಈ ಕೋಟೆಯ ಕಟ್ಟಡವೇ ವಿಚಿತ್ರವಾಗಿದೆ. ಒಂದು ದ್ವಾರ ಪ್ರವೇಶಿಸಿದರೆ ವಿಶಾಲವಾದ ಸಭಾಂಗಣ. ಆ ಸಭಾಂಗಣದಿಂದ ಮೂಲೆಯಲ್ಲೊಂದಿರುವ ದ್ವಾರ ಪ್ರವೇಶಿಸಿದರೆ ಮತ್ತೊಂದು ಸಭಾಂಗಣ . ಇದೇ ರೀತಿ ನಾಲ್ಕೈದು ದ್ವಾರಗಳನ್ನು ಪ್ರವೇಶಿಸಿದರೆ ಅದೇ ಅನುಭವಗಳಾಗುವವು! ಕೆಂಪು ಕಲ್ಲಿನಲ್ಲಿ ಕಟ್ಟಲ್ಪಟ್ಟ ಭವ್ಯವಾದ ಕೋಟೆಗೆ ಬರುವ ಈ ಆನಂದ ಪಡಿಸುತ್ತದೆ. ಇತ್ತೀಚೆಗೆ ಈ ಕೋಟೆಯ ಮುಂಭಾಗದಲೊಂದು ನೂತನ ವಸ್ತುಸಂಗ್ರಹಾಲಯ ಕಟ್ಟಡವನ್ನು ನಿರ್ಮಿಸಲಾಗಿದೆ.
ಮೂಡಣ ದಿಕ್ಕಿಗೆ ಮುಖಮಾಡಿರುವ ಈ ವಸ್ತುಸಂಗ್ರಹಾಲಯದಲ್ಲಿ ವಸ್ತುಗಳ ದಾಖಲೆಯ ಪ್ರಕಾರ, ಶಿಲ್ಪಕಲೆ ೬೩೨, ಕಬ್ಬಿಣದ ವಸ್ತು ೨೪೬, ಕಟ್ಟಿಗೆಯ ವಸ್ತು ೨, ಮಣ್ಣು ಮತ್ತು ಗಾಜಿನ ವಸ್ತು ೫೦ ಇವೆ. ಇವೆಲ್ಲವೂ ೧,೨,೧೧,೧೨,೧೩,೧೪,೧೬,೧೭,೧೮ನೇಯ ಶತಮಾನದ ವಸ್ತು. ಸ್ಥಳೀಯ ಕೆಲವು ವಸ್ತುಗಳು ಮಸ್ಕಿ, ಸನ್ನತಿ, ಮತ್ತು ಲಿಂಗಸಗೂರ ಗ್ರಾಮ ಪಟ್ಟಣಗಳಿಂದ ಸಂಗ್ರಹಿಸಲ್ಪಟ್ಟಿವೆ.
ಜೇಡಿ ಮಣ್ಣಿನಲ್ಲಿ ತಯಾರಿಸಿದ ಮಣಿಗಳು ಆಭರಣಗಳ ರೂಪದಲ್ಲಿವೆ. ಇದರಲ್ಲಿರುವ ಎಲ್ಲಾ ಮಣಿಗಳು ಮಡಿಕೆ, ಅಡಿಕೆ, ಚೆಂಡು, ಬುಗರಿ, ಗಂಟೆ ಮತ್ತು ದ್ರಾಕ್ಷಿ ಇತ್ಯಾದಿಗಳನ್ನು ರಚಿಸಲಾಗಿದೆ. ಇವುಗಳಲ್ಲದೆ ಜೇನುಗೂಡು, ತೂಕದಕಲ್ಲು, ಮಡಿಕೆ, ಮೂಳೆ ಚೂರುಗಳು, ಬಳೆಗಳು, ಗಾಜಿನ ಮಣಿಗಳು. ೧೮ ನೇ ಶತಮಾನದ ರಾಮಗಿರ್ ಜಾಗೀರದಾರವರ ಕಾಲದ ಪಲ್ಲಕಿ, ಡೋಲಿ. ೧೬-೧೭ ನೇ ಶತಮಾನದ ಸರ್ಕಾರ್ ಸೈಯದ್ ಮಹಮ್ಮದ್ ಶಾ ಖೈರೊದ್ದಿನ್ ಕಾಲದ ತೋಪು, ಬೀಗಗಳು, ಸರಪಳಿ,ಬಂದೂಕು, ತುಪಾಕಿ ಬಾಣಗಳು, ಮದ್ದು ಸಂಗ್ರಹ, ಗುರಾಣಿ , ಕವಚಗಳು. ಮತ್ತು ಕಲ್ಲಿನಲ್ಲಿ ಕೆತ್ತಲ್ಪಟ್ಟ ಕಲಾತ್ಮಕ ತಾಟು, ಮುಂತಾದವುಗಳು ಗಮನ ಸೆಳೆಯುತ್ತವೆ.
ನಾಗದಂಪತಿಗಳು :- ವೈವಿದ್ಯಮಯ ನಾಗ- ನಾಗಿಣಿಯರ ಶಿಲ್ಪಗಳು ಕಲ್ಯಾಣದಲ್ಲಿವೆ. ಚಾಲುಕ್ಯರ ಸಾಮಂತರಾಗಿದ್ದ ರಂಜೋಳದ ಸಿಂದರು ನಾಗ ಕುಲಕ್ಕೆ ಸೇರಿದ್ದವರೆಂಬುವದು ಅವರ ಒಂದು ಶಾಸನ ಪ್ರಸ್ತಾಪಿಸಿದೆ.
ಕಪ್ಪು ಬಣ್ಣದ ಬೆಸಾಲ್ಟ್ ಶಿಲೆಯಲ್ಲಿ ಕೆತ್ತಲಾದ ನಾಗದಂಪತಿ ವಿಗ್ರಹ ೪೫+೨೬ ೧/೨
ಅಂಗುಲವಿದೆ. ನಾಗ-ನಾಗಿಣಿಯರ ಮಾನವ ರೂಪದ ಹಾವುಗಳು. ನಾಗಿಣಿಗೆ ೫, ನಾಗನಿಗೆ ೭, ಹೆಡೆಗಳಿವೆ. ನಾಗನ ಬಲಗೈಯಲ್ಲಿ ಖಡ್ಗ, ಎಡಗೈಯನ್ನು ನಾಗಿಣಿಯ ಭುಜದ ಮೇಲೆ ಇದೆ. ನಾಗಿಣಿಯಗೈಯಲ್ಲಿ ವಜ್ರವಿದ್ದು, ಬಲಗೈಯನ್ನು ನಾಗನ ಎಡಭಾಗದಿಂದ ನಾಗನ ಹೊಟ್ಟೆಗೆ ಹಿಡಿದಿರುವುದು.ನಾಗ-ನಾಗಣಿಯರು ತಮ್ಮ ಬಾಲವನ್ನು ಸುತ್ತಿಕೊಂಡು ಅವರ ಮೇಲೆ ಕುಳಿತಿರುವ ಈ ಸುಂದರ ಶಿಲ್ಪ ಕಿ.ಶ. 14 ನೇ ಶತಮಾನ.
ಜೈನ ತೀರ್ಥಂಕರ:– ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಜೈನ ಕೇಂದ್ರಗಳಾಗಿ ಖ್ಯಾತಿ ಪಡೆದಿದ್ದರು ಜೈನ ಮುನಿ ಶಿಷ್ಯರ ಕೆಲ ವಿಷಯಗಳು ಮಾತ್ರ ಲಭ್ಯವಾಗುತ್ತವೆ. ಕೂತುಹಲ ಸಂಗತಿಯೆಂದರೆ ಚಾಲುಕ್ಯ ದೂರೆ ೬ನೇ ವಿಕ್ರಮಾದಿತ್ಯ ತನ್ನ ರಾಣಿಯೊಬ್ಬಳ ಅಪೇಕ್ಷೆಯಂತೆ ಕಲ್ಯಾಣದ ಅರಮನೆಯಲ್ಲಿ ಒಬ್ಬ ವ್ಯಾಪಾರಿ ಮಾಣಿಕ್ಯದಂತಿದ್ದ ಜೈನ ತೀರ್ಥಂಕರ ವಿಗ್ರಹವನ್ನು ಆಕೆಗೆ ಕೂಡಿಸಿದ ಆಕೆ ತನ್ನ ಆಳ್ವಿಕೆಯ ಸ್ಥಾಪಿತವಾದ ಗುಲ್ಬರ್ಗ ಜಿಲ್ಲೆಯಲ್ಲಿ ಸ್ಡಾಪಿಸಿದ ಸಂಗತಿಯನ್ನು ಅಲ್ಲಿಯ ಒಂದು ಶಾಸನ ಪ್ರಕಟಿಸಿದೆ.
ಕಪ್ಪು ಬಣ್ಣದ ಬೆಸಾಲ್ಟ್ ಶಿಲೆಯಲ್ಲಿ ರಚಿಸಲಾದ ಈ ಜೈನ ತೀರ್ಥಂಕರ ವಿಗ್ರಹ ತ್ರಿಕೋನ ಆಕಾರದಲ್ಲಿದ್ದು ೨೮/೫೯ ಅಂಗುಲವಿದೆ. ಶಿಲ್ಪದ ಮೂರು ಬದಿಗೆ ಬಂದಂತೆ ಗುಡಿಗಳಿವೆ ಒಂದೊಂದು ಜೈನ ಮೂರ್ತಿಗಳ ಧ್ಯಾನ ಮುದ್ರೆಯಲ್ಲಿದೆ. ಇವುಗಳಂತಹ ಗುಡಿಯ ಅಕ್ಕ ಪಕ್ಕದ ಮೇಲೆ ಕೆಳಗೆ ಇರುವವು ಮತ್ತು ಮುಂಭಾದಲ್ಲಿ ಮೂರು ವಿಗ್ರಹಗಳ ಗುಂಪು ಎರಡು ಸಾಲುಗಳಲ್ಲಿ ಇದ್ದು ಒಟ್ಟು ೧೩ ಜೈನ ತೀರ್ಥಂಕರರನ್ನು ಸೂಚಿಸುವ ಸುಂದರ ಕಲಾತ್ಮಕತೆಯಿಂದ ಕೂಡಿದ ಈ ಶಿಲ್ಪ ಕಿ.ಶ. ೧೨ನೇ ಶತಮಾನವಾಗಿದೆ
ಗರುಡ ವಿಗ್ರಹ :- ೧೨ನೇ ಶತಮಾನದಲ್ಲಿ ನಿರ್ಮಿಸಲಾದ ಈ ಗರುಡ ವಿಗ್ರಹ ಕುಳಿತು ನಮಸ್ಕರಿಸುವ ಆಂಜನೆಯ ಆಕಾರದಲ್ಲಿ ನೋಡಬಹುದು. ೨೬/೧೫ ಅಂಗುಲದಲ್ಲಿದ್ದು ತಿಳಿ ಹಸಿರು ಕಲ್ಲಿನಲ್ಲಿ ಕೆತ್ತಲಾಗಿದೆ. ಕಿರೀಟದ ಕೆಳಭಾಗದಲ್ಲಿ ಗುಂಗರ ಕೂದಲು ಕಾಣುತ್ತೇವೆ. ಕೊರಳ, ಕಿವಿ, ರಟ್ಟೆ, ಮತ್ತು ಮುಂಗೈಗಳಲ್ಲಿ ‘ನಾಗ’ಗಳು ಸುತ್ತಿರುವವು. ಆದರೆ ಕಾಲಲ್ಲಿ ಮಾತ್ರ ಕಡಗ ಚೈನುಗಳವೆ. ಸೊಂಟದಲ್ಲಿ ಸರಪಳಿಯಂತೆ ಆಭರಣದ ಪಟ್ಟೆಯು ಜೋತು ಬಿಡಿವೆ. ಈ ಶಿಲ್ಪದ ಎರಡು ಭುಜದ ಮೇಲೆ ಎರಡು ಬಿಚ್ಚಿದ ಹಾರುವ ರೆಕ್ಕೆಗಳಂತೆ ನೋಡಬಹುದು .
ಸರ್ಪಶಯನ (ವಿಷ್ಣು) :- ಕಪ್ಪು ಕಲ್ಲಿನಲ್ಲಿ ಕೆತ್ತಲಾದ ಈ ವಿಗ್ರಹ ೩೫/೨೨ ಅಂಗುಲವಿದ್ದು ಸರ್ಪಶಯನ ಭಂಗಿಯಲ್ಲಿ ಸರ್ಪದ ಸರುಳಿಯ ಮೇಲೆ ಮಲಗಿರುವ ವಿಷ್ಣುವಿನ ವಿಗ್ರಹವಿದ್ದು ಚತುರ್ಭುಜಗಳಿವೆ. ಎಡಭಾಗದ ಮೇಲಗೈಯಲ್ಲಿ ಚಕ್ರ, ಕಳಗೈಯಲ್ಲಿ ಎಡಗಾಲಿನ ತೊಡೆಯ ಮೇಲಿದೆ. ಬಲಭಾಗದ ಮೇಲಗೈಯನ್ನು ತಲೆಯ ಕಳಗೆ, ಆಧಾರವಾಗಿ ಇಟ್ಟುಕೊಂಡಂತೆ ಇದೆ. ಕೆಳಗೈ ಎದೆಯ ಮೇಲಿರುವದು. ವಿಷ್ಣು ತನ್ನ ಕೈ- ಕಾಲು, ಕೊರಳು ಮುಂತಾದ ಕಡೆಗಳೆಲ್ಲ ಆಭರಣಗಳನ್ನು ಧರಿಸಿರುವದು. ಕಿರೀಟದ ಕೆಳಗೆ ಶಂಖ ವಿದ್ದು ತಲೆಯ ಹಿಂಭಾಗದಲ್ಲಿ ಗರುಡ ಮತ್ತು ಸೇವಕಿಯರ ಶಿಲ್ಪಗಳಿರುವವು. ಮತ್ತು ಮೇಲಭಾಗದಲ್ಲಿ ದಶಾವತಾರದಿಂದ ಕೂಡಿ ರಚಿತವಾದ ಈ ಸುಂದರ ಶಿಲ್ಪ ಕಿ. ಶ. ೧೨ನೇ ಶತಮಾನದ್ದಾಗಿದೆ.
ವರಹ :- ೧೨ನೇ ಶತಮಾನದಲ್ಲಿ ಕಪ್ಪು ಕಲ್ಲಿನಲ್ಲಿ ನಿರ್ಮಿಸಲಾಗಿದೆ ಈ ವರಹ ವಿಗ್ರ ೩೧/೧೫ ೧/೨ ಅಂಗುಲದಲ್ಲಿದೆ. ವರಹ ತನ್ನ ಎಡಭುಜದ ಮೇಲೆ ಭೂದೇವಿಯನ್ನು ಎತ್ತಿಕೊಂಡಿರುವಂತೆ ಕಂಡುಬಂದಿದೆ. ನಾಲ್ಕು ಕೈಗಳನ್ನು ಹೊಂದಿರುವ ಈ ಶಿಲ್ಪದ ಮೇಲಾಗೈಯಲ್ಲಿ ಶಂಖ, ಬಲಭಾಗದಗೈಯಲ್ಲಿ” ಪಾಸ “ಇನ್ನೆರಡು ಕೈಗಳಲ್ಲಿ ಚಕ್ರ ಮತ್ತು ಗದವಿದೆ. ತಲೆಯ ಮೇಲೆ ಕಿರೀಟ, ಕಾಲು-ಕೈಗಳಲ್ಲಿ ಕಡಗ ಧರಿಸಿರುವದು. ನಾಗ ಅವತಾರ ತಾಳಿದ ನಾಗರಾಜನ ಮೇಲೆ ವರಹನು ತನ್ನ ಎಡಗಾಲನ್ನು ಇಟ್ಟಿದ್ದು ನೋಡಬುದು.
ಮಹಿಷಾಸುರ ಮರ್ದನಿ :- ಮಹಿಷಾಸುರ ಮರ್ದಿನಿಯು ಮಹಿಷಾಸುರರನ್ನು ಮೈಸೂರಿನಲ್ಲಿ ಕೊಂದಳೆಂಬ ಐತಿಹ್ಯಗಳಿವೆ. ಈ ಐತಿಹ್ಯಕ್ಕೆ ಪೊರಕವೆನ್ನುವಂತೆ ರಾಜ್ಯದ ಹಲವಾರು ಕಡೆಗಳೆಲ್ಲ ಸುಂದರವಾದ ಮಹಿಷಾಸುರ ಮರ್ದಿನಿಯ ವಿಗ್ರಹಗಳಿವೆ.
ಬಸವಕಲ್ಯಾಣದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಕಪ್ಪುಕಲ್ಲಿನಲ್ಲಿ ಕೆತ್ತಲ್ಪಟ್ಟ ಮಹಿಷಾಸುರ ಮರ್ದಿನಿಯ ಶಿಲ್ಪ ೨೪/೧೨ ಅಂಗುಲದಲ್ಲಿದೆ. ಚರ್ತುಭುಜಧಾರಿಯ ದೇವಿಯು ಬಲಭಾಗದ ಮೇಲಗೈಯಲ್ಲಿ ‘ಪಾಸ’ ಎಡಭಾಗದ ಮೇಲಗೈಯಲ್ಲಿ ಶಂಖವನ್ನು ಹಿಡಿದಿರುವ ತನ್ನ ಎಡಗಾಲಿನಿಂದ ಮಹಿಷದ ದುಬ್ಬದ ಮೇಲೆ ಒತ್ತಿತುಳಿದು ಎಡಭಾಗದ ಕೆಳಗೈಯಿಂದ ಮಹಿಷನ ಮುಖ ಬಿಗಿಯಾಗಿ ಹಿಡಿದು ಬಲಭಾಗದ ಕೆಲಗೈಯಲ್ಲಿರುವ ತ್ರಿಶೂಲದಿಂದ ದೇವಿಯು ತಿವಿದಿದ್ದಾಳೆ. ತ್ರಿಶೂಲವು ಕರುಳನ್ನು ಬಗೆದುಕೊಂಡು ಪಕ್ಕದಿಂದ ಹೊರೆಗೆ ಬಂದಿದೆ. ಹಲವಾರು ವೈಶಿಷ್ಟ್ಯಗಳಿಂದ ಕೂಡಿರುವ ಈ ಮೂರ್ತಿಯು ಕ್ರಿ. ಶ. ೧೨ನೇ ಶತಮಾನದ್ದಾಗಿದೆ.
ಗಜಾಸೂರನ ವಧೆ:- ೧೨ನೇ ಶತಮಾನದ ಕಪ್ಪು ಕಲ್ಲಿನಲ್ಲಿ ನಿರ್ಮಿಸಲಾದ ಈ ಗಜಸೂರನ ವಧೆ ವಿಗ್ರಹ ನೈತ್ಯದ ಆಕಾರದಲ್ಲಿದೆ. ೩೪/೨೭ ಅಂಗುಲ ಇರುವ ಈ ವಿಗ್ರಹ ಎಂಟು ಕೈಗಳನ್ನು ಹೊಂದಿದೆ. ದೇವಿಯು, ಬಲಬದಿಯ ಮಧ್ಯ ಕೈಯಲ್ಲಿ ತ್ರಿಶೂಲ ಮೇಲ್ಗೈಯಲ್ಲಿ ಖಡ್ಗ, ಎಡಬದಿಯ ಮಧ್ಯ ಕೈಯಲ್ಲಿ ಕವಚ, ಮೇಲ್ಕೈಯನ್ನು ಆನೆಯ ಹೊಟ್ಟೆಗೆ ತಾಗಿಸಿದ್ದಾಳೆ. ಮುಂಭಾಗದ ಎರಡು ಕೈಗಳಿಂದ ಆನೆಯ ಎರಡು ಕಾಲುಗಳನ್ನು ಎತ್ತಿಹಿಡಿಯಲಾಗಿದೆ. ಆನೆಯ ಮುಖದ ಅರ್ಧ ಭಾಗವನ್ನು ಈ ಶಿಲ್ಪಕಲೆಯ ಬಲಭಾಗದಲ್ಲಿ ಮುಖ ಕೆಲಗೆ ಜೋತುಬಿದ್ದಿದ್ದು ಮತ್ತು ದೇವಿಯ ತಲೆಯ ಹಿಂಭಾಗದಲ್ಲಿ ಪದ್ಮಮಂಡಲವಿದ್ದು ಶಿಲ್ಪದ ಕೆಳಭಾಗದ ಅಕ್ಕಪಕ್ಕದಲ್ಲಿ ಇಬ್ಬರು ಸೇವಕಿಯರ ಮೂರ್ತಿಗಳಿವೆ.
ವಿಷ್ಣುವಿನ ವಿಗ್ರಹ:- ೧೨ನೇ ಶತಮಾನದ ಕಪ್ಪು ಕಲ್ಲಿನಲ್ಲಿ ನಿರ್ಮಿಸಲಾದ ಈ ವಿಗ್ರಹ ಸಮಪಾದ ಭಂಗಿಯಲ್ಲಿದೆ. ೨೪/೧೨ ಅಂಗುಲವಿದ್ದು, ಚತುರ್ಭುಜಗಳಿವೆ. ಮೂರು ಕೈಗಳು ಭಗ್ನಗೊಂಡಿವೆ.ಎಡಗೈಯಲ್ಲಿ ಮಾತ್ರ ಚಕ್ರ ಇರುವದು.ಕಿರೀಟ ಧರಿಸಿ,ಕಿವಿಯಲ್ಲಿ ಕರ್ಣ ಕುಂಡಲ, ಕೈಕಾಲು ರಟ್ಟೆಗಳಿಗೆ ಕಡಗವಿದ್ದು, ಕೊರಳಲ್ಲಿ ಸರವನ್ನು ಧರಿಸಿದ್ದಾನೆ. ಸೊಂಟದ ಮುಂಭಾಗದಿಂದ ಮುತ್ತಿನಂತಹ ಸರವನ್ನು ಇಳಿ ಬಿದ್ದಿದೆ. ಮತ್ತು ಈ ಶಿಲ್ಪದ ಬಲ ಬದಿಯ ಕೆಳಭಾಗದಲ್ಲಿ ಎರಡು ಗಂಡು ಶಿಲ್ಪಕಲೆಗಳು, ಎಡಕ್ಕೆ ಒಂದು ಗಂಡು ಮತ್ತೊಂದು ಹೆಣ್ಣು ಚಿತ್ರಗಳು ಕೆತ್ತಲಾಗಿದೆ. ಈ ಶಿಲ್ಪಕಲೆಗಳ ಮೇಲ್ ಭಾಗದಲ್ಲಿ ದಶಾವತಾರದ ಚಿತ್ರಗಳು ಕೊರೆದು ಹಲವಾರು ವೈಶಿಷ್ಟಗಳಿಂದ ಕೂಡಿದ್ದು ಈ ಸಂಗ್ರಹಾಲಯದಲ್ಲಿ ಈ ಶಿಲ್ಪವು ಅತ್ಯಂತ ಕಲಾತ್ಮಕವಾಗಿಯೂ ಸುಂದರವಾಗಿಯೂ ರಚಿಸಿರುವುದನ್ನು ಗಮನಿಸುತ್ತೇವೆ.
ಇವುಗಳಂತೆ ನಟರಾಜ, ಗರುಡ, ಲಕ್ಮೀ-ನಾರಾಯಣ, ಶಿವ-ಪಾರ್ವತಿ, ಗಣಪತಿ, ಯಕ್ಷ-ಯಕ್ಷಿಣಿಯರ ವಿಗ್ರಹಗಳು ಆಕರ್ಷಿಣಿಯವಾಗಿವೆ. ಹಾಗೂ ಗಜಸೂರನ ವಧೆ ಮಹಿಶಾಸೂರಮರ್ಧಿನಿ ನರಸಿಂಹ, ವರಹ,
ವಿರಗಲ್ಲು, ಕಾಲಭೈರವ, ಕಾಕಶಾಸನ, ರಾಮ-ಲಕ್ಷಿಮಣ, ವಾಲಿ-ಸುಗ್ರೀವ ಮುಂತಾದ ಶಲ್ಪಗಳಲ್ಲಿ ಹೋರಾಟದ ದೃಶ್ಯಗಳಿವೆ. ಮತ್ತು ಶೃಂಗಾರರಸದ ವಿವಿಧ ಭಂಗಿ ನೋಡಲು ಮನಮೋಹಕವಾಗಿದೆ. ಇವುಗಳಂತಹ ರಾಷ್ಟ್ರೀಯ ವಸ್ತು ಸಂಗ್ರಹಾಲಯ , ದೆಹಲಿಯಿಂದ ಸಂಗ್ರಹಿಸಲ್ಪಟ್ಟ (ರಿಪ್ಲಿಕಾ) ಪಡಿಯಚ್ಚು ಕೃತಿಗಳಾದ ನರ್ತಕಿಯ ವಿಗ್ರಹ, ವೃಷಭವಿಗ್ರಹ, ಮುದ್ರೆಗಳು, ಭಾವಶಿಲ್ಪ, ದೇಹವಿಲ್ಲದ ಶಿರ , ಕೆಂಪ್ಪುಬಣ್ಣದ ಮೂರ್ತಿಗಳು, ನಟರಾಜನ ವಿಗ್ರಹ, ಪತ್ರ ಬರೆಯುತ್ತಿರುವ ಕನ್ಯ ಸ್ತ್ರೀ ವಿಗ್ರಹ , ಆಟಿಕೆ ಸಾಮಾನುಗಳು .ವಿಷ್ಣುವಿನ ವಿಗ್ರಹ ,ನಿಂತ ಸ್ತೀ ಮುರ್ತಿಗಳು ಮುಂತ್ತಾದವುಗಳು ಈ ಬಸವಕಲ್ಯಾಣ ವಸ್ತು ಸಂಗ್ರಹಾಲಯದಲ್ಲಿವೆ.
ಚಿತ್ರ ಲೇಖನ- ವೀರಶೆಟ್ಟಿ ಎಂ.ಪಾಟೀಲ್.
ಲೇಖಕರ ಪರಿಚಯ:

ವೀರಶೆಟ್ಟಿ ಎಂ.ಪಾಟೀಲ್ ರವರು ಹುಮನಾಬಾದ ತಾಲೂಕಿನ ಹುಣಸಗೇರಾದವರು. ಎಂ.ಎಫ್.ಎ.ಪದವಿಧರರಾದ ಇವರು ಚಿತ್ರಕಲಾ ಶಿಕ್ಷಕರಾಗಿ, ಫೋಟೊಗ್ರಾಫರ್, ಲೇಖಕರಾಗಿ ಗುತಿಸಲ್ಪಡುತ್ತಾರೆ. ಇವರ ಚಿತ್ರಕಲೆ ಹಾಗೂ ಫೋಟೊಗ್ರಾಫಿಗಳಿಗೆ ರಾಜ್ಯ, ರಾಷ್ಟ್ರ, ಮಟ್ಟದ ಪ್ರಶಸ್ತಿಗಳು ಲಭಿಸಿವೆ. ‘ ಓ ನನ್ನ ಕನ್ನಡ’ ‘ಮೂರನೇ ಮಹಾಯುದ್ಧ ‘ (ಕವನ ಸಂಕಲನಗಳು) ‘ ನಾರಾಯಣಪೂರ ವಾಸ್ತು ಶಿಲ್ಪ ಕ ಲೆಗಳ ವೈಭವ’, ‘ವ್ಯಸನಮುಕ್ತ ಸಮಾಜಕ್ಕಾಗಿ ಅಭಿನವ ಘನಲಿಂಗ ಜೋಳಿಗೆ’ ( ಲೇಖನ) ‘ ಸಾತ್ವಿಕ’, ‘ಸಾತ್ವಿಕ-ಸಾರ್ಥಕ’ ‘ವೈರಾಣು ಹೈರಾಣು, ವಿಶ್ವ ಮಹಾಯುದ್ಧ’ (ಹನಿಗವನ ಗಳು) ‘ ಕಲ್ಯಾಣದ ಶ್ರೀಗುರು ಘನಲಿಂಗ ರುದ್ರಮುನಿ ಗವಿಮಠ,’ ‘ನಗುಮೊಗದ ಜನ್ಮೋತ್ಸವ,ನೋಡ ಗವಿಮಠ, ಪೋಟೋ ಗ್ರಾಫಿ, ಕಲಿಯುಗ ಬನ್ನಿ ಮುಗಿಯುವ ಮುನ್ನ, ಅಭಿನವ ಶ್ರೀಗಳ ಮೊಬೈಲ್ ಜಾಗೃತಿ ಪಾದಯಾತ್ರೆ’ ಎಂಬ ಒಟ್ಟು 13 ಕೃತಿಗಳನ್ನು ಪ್ರಕಟಿಸಲಾಗಿದೆ.
ಅದ್ಭುತ
Super sir