Oplus_131072

ನೆನಪಿನ ಬುತ್ತಿ
ಪುನೀತ್ ರಾಜಕುಮಾರ್

  ಅದೊಂದು ರಾಜ್ಯ  ಅಸ್ಥಾನದ  ಮಹಾರಾಜರು ಯುವರಾಜರು ಅವರು.  ಭವ್ಯ ಅರಮನೆಯೂಳಗೆ ಇದ್ದು ರಾಜ್ಯ  ಮತ್ತು ಪ್ರಜೆಗಳ ಶಾಂತಿ  ಕ್ಷೇಮಕ್ಕಾಗಿ ವೃದ್ಧಿಗಾಗಿ ದರ್ಬಾರು ನಡೆಸಿ ಹೋದವರು ನಾನಾ ಭಾಗದ ರಾಜರು…..
ಅದು ಆ ಕಾಲ.

ಆದರೆ ಇಂದಿನ  ಈ ಕಲಿಯುಗದಲ್ಲಿ ಯಾವ ಅಸ್ಥಾನವಾಗಲಿ ಅರಮನೆ ವಾಗಲಿ ಪಟ್ಟ, ಕಿರೀಟ ಪೇಟ ತೊಡದೇ ನಮ್ಮ ಕರ್ನಾಟಕದ “ಗಂಧದ ಗುಡಿ” ಎಂಬ ನಾಡಲ್ಲಿ “ಅರಸು ” ಆದವರು ಪುನೀತ್ ರಾಜ್ ಕುಮಾರ್ .

“ಅಭಿಮಾನಿಗಳೇ ನಮ್ ಮನೆ ದೇವ್ರು “ಎಂದು ಅಭಿಮಾನಿಗಳ ಮನದಲ್ಲಿ ಉಳಿದವರು ನಮ್ಮ ವರನಟ
ಡಾ ರಾಜ್ ಕುಮಾರ್ .

ಅವರು ಕರುನಾಡಿಗೆ ರತ್ನ ವಾಗಿ ಕೊಟ್ಟ ಮುತ್ತು ರತ್ನವೇ   ನಮ್ಮ” ಪವರ್”  ಸ್ಟಾರ್ “ಯುವರತ್ನವೇ ಈ ನಮ್ಮ ಪುನೀತ್ ರಾಜ್‍ಕುಮಾರ್.

ವೇದ ಶ್ಲೋಕ  ಮಂತ್ರಗಳ ಧಾರ್ಮಿಕ ಚಲನಚಿತ್ರ “ಭಕ್ತ ಪ್ರಹ್ಲಾದ ” ಮತ್ತು”ಬೆಟ್ಟದ ಹೂವು ” ಚಿತ್ರಗಳಲ್ಲಿ ಬಾಲ ನಟನಾಗಿ,ಬೆಟ್ಟದ ಹೂವು ಚಿತ್ರದ
‘ರಾಮು’ ಪಾತ್ರದಲ್ಲಿ ಸಾಮಾನ್ಯ ಮುಗ್ದ ಮನಸುಗಳ ಆಸೆ ಕನಸುಗಳ ಹೊತ್ತು  ಛಲ ವಿದ್ದರೆ ಫಲ  ಎಂಬುದನ್ನು ನಿರೂಪಿಸಿ ಅಂತರ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಖ್ಯಾತ ರಾದವರು ನಮ್ಮ ಅಪ್ಪು.

“ಅಪ್ಪು” ಚಿತ್ರದ ಮೂಲಕ ಬಹು ಮೆಚ್ಚುಗೆ ಪಡೆದು ಅಭಿಮಾನಿಗಳ ಮನದಲ್ಲಿ “ಅಭಿ”ಯಾಗಿ ಬೆಳೆದವರು. ಯುವಕರ ಮನದಲ್ಲಿ”ಪೃಥ್ವಿ” ಯಾಗಿ ಸ್ನೇಹಕ್ಕೆ ಸದಾ ಸಿದ್ದನಾಗಿ  ಎಲ್ಲಾ” ಹುಡುಗರು” ನಮ್ಮವರೇ ! ಎಂದು ಕರುನಾಡೆ ನಮ್ಮ ಕುಟುಂಬದ ಆನಂದ ಸಾಗರ ‘ ಎಂಬ ಸಂತೋಷ ಸಡಗರದಲ್ಲಿ  ನಾನು ನಿಮ್ಮಲ್ಲರ ಜೊತೆ “ರಾಮು “ಅಗಿ ಬೆರೆತು ಇರುವೆ ಆದರೆ “ದೊಡ್ಮನೆ ಹುಡುಗ” ನಾನಲ್ಲ. ಆ ಅಹಂ ನಂಗೆ ಎಂದೂ ಇಲ್ಲ . ಎಂದು  ತಾಯಿಗೆ ತಕ್ಕ ಮಗ  ನಾನು   ಕರುಳಕುಡಿ ಮಿಡಿಯುವ ಹಾಗೆ “ವಂಶಿ” ಮನೆ ಮಗನಾಗಿ   ಕರುನಾಡಿನ ಜನತೆಯ ಜೊತೆ ಜೊತೆಯಲಿ ಪ್ರೀತಿಯ ಬಂಧ ನಿಮ್ಮ ಭಾಂದವ್ಯವೇ ಚೆಂದ ಎಂದು  ಪ್ರೀತಿ ಪ್ರೇಮದ “ಮಿಲನ “ಕ್ಕೆ ಸಾಕ್ಷಿಯಾಗಿ. ವಿನಯತೆ ಸೃಜನಶೀಲತೆ ಸಾರ್ಥಕತೆ ಭಾಂದವ್ಯತೆ  ಕಲೆ  ಸಂಸ್ಕೃತಿ ವೈಶಿಷ್ಟತೆ ಗಳ ಗುಣದೊಂದಿಗೆ  ನೊಂದು ಬೆಂದ ಅನಾಥ  ಮಕ್ಕಳಿಗೆ ವೃದ್ಧರಿಗೆ ರಕ್ಷಣೆಯೊಂದಿಗೆ ಆಶ್ರಯ ನೀಡಿ ಒಂದು  ಉತ್ತಮ ಬದುಕು ಕಲ್ಪಿಸಿ ಕೊಡಲು ಪಣ ತೊಟ್ಟ “ವೀರ ಕನ್ನಡಿಗ “.

“ಆಕಾಶ್” ಆಕಾಶ ದಷ್ಟು ಬೆಳಸಬೇಡಿ. ಕೈಗೊಂಡ ಕಾರ್ಯಗಳಿಗೆ ವಿಜಯ ವಾಗಲಿ . ಹಾರೈಸಿ ಎಂದು “ಅಜಯ್ ” ದೇವರಿಗೆ ಪ್ರಾರ್ಥನೆ ಮಾಡಿ ಹಾಗೂ ಸಾಧನೆಯ ಪರ್ವ ಏರಲು ಮುಂದಾದರು “ಮೌರ್ಯ”. ಮಂದಹಾಸದಿ ಸಮಾಜದಲ್ಲಿ ಸಾಮಾನ್ಯರಲ್ಲಿ  ಸಾಮಾನ್ಯವಾಗಿ ಇದ್ದು ಕರ್ನಾಟಕ ರಾಜ್ಯಸರ್ಕಾರದ ವಿವಿಧ ಯೋಜನೆಗಳ “ಅಣ್ಣಾ ಬಾಂಡ್” ರಾಯಭಾರಿಯಾಗಿ ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿಯೂ ಸೇವೆ ಸಲ್ಲಿಸಿದವರು.

“ಆಡಿಸಿಯೇ ನೋಡು ಬೀಳಿಸಿಯೇ ನೋಡು ಎಂದು ಸೋಲದು ಸೋತು ತಲೆಯಬಾಗದು”  ನಿಮ್ಮೆಲ್ಲರ ಮನದಲಿ ನಾನು ಮತ್ತು ನನ್ನ ನೆನಪುಗಳು  ಅಜರಾಮರ ನಿಮ್ಮೆಲ್ಲರ ” ಜೊತೆ ರಾಜನಾಗಿ ಮೆರೆದ” ನಟ ಸೌರ್ವಭೌಮ” ಕರುನಾಡ ಕಂದ “ರಾಜಕುಮಾರ” ಇಂದಿಗೂ ಜೋಶ್ ಸ್ಫೂರ್ತಿ ತುಂಬುವ ಜೇಮ್ಸ್ ಅಗಿ ಇರುವರು.

ಬಸವೇಶ. ಎಸ್
ಯೋಗ ಶಿಕ್ಷಕರು
ತಿ. ನರಸೀಪುರ.ಮೈಸೂರು

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *