ಪ್ರದಾತ
ಪಂತಕಟ್ಟಿ ಪಡಿಹುದೇನಿದೆ
ಇಲ್ಲಿ ಹಠಕಟ್ಟೆ ಸಾಧಿಸುವುದು ಏನಿದೆ
ನಾವು ನಮ್ಮೊಳಗಿರುವ ಪ್ರೇಮ ಪರದಿಯ ಅರಿದರೆ
ಕಠೋರ ಕಷ್ಟಗಳನ್ನೆಲ್ಲ ಸಹಿಸಿ ನೋಡು ಈ ಸುಂದರ ಧರೆ
ಕಲ್ಲಾಗಿದ್ದರು ನೀನು
ಧರೆಯ ಮೇಲೆ ಗಾಳಿ ಬಿಸಿಲು ಮಳೆ ಚಳಿ ನಿನ್ನ ಬಿಡಬಹುದೇನು?
ಜ್ಞಾನವಿಲ್ಲದೆ ಮಲಗಿದ್ದರೂ ನೀನು
ಕಾರ್ಮೋಡಗಳ ಅರ್ಭಟಕ್ಕೆ ಸಿಡಿಯಲಿಲ್ಲವೇ ನೀನು .
ಇರುವ ದಿನಗಳ ಮಧ್ಯೆ ದ್ವೇಷಿಯಾಗ ಬೇಡ
ಕೆತ್ತುವ ಶಿಲ್ಪಗಾರನ ಉಳಿಗೆ ತೆಗಳಬೇಡ
ನಾ ಕಲ್ಲಾಗಿ ಪಾಪಿಯಾದನೆಂದು ಕೊರಗಬೇಡ
ಜಗತ್ತಿನ ಜಗುಲಿಗೂ ಆಧಾರ ನೀನೆಂಬದು ಮರೆಯಬೇಡ .
ನಿನ್ನನ್ನು ನೀನು ಪ್ರೀತಿಸುವಷ್ಟು
ಆಗ ಜಗತ್ತು ಪ್ರೀತಿಸುವುದು ಬೇಕಾದಷ್ಟು
ಈ ಸೃಷ್ಟಿಯಲ್ಲಿ ನೀನೊಂದು ಅದ್ಭುತ
ಅಭಿಷೇಕ ಅರ್ಚನೆಗೆ ನೀನೇ ಪ್ರದಾತ .
ಪ್ರಾಣವೊಂದಿಲ್ಲ ನಿನಗೆ
ಮನಸ್ಸು ಅಂತು ಕಾಣಲಿಲ್ಲ ಮಾನವನಿಗೆ
ಪ್ರಾಣ ಇರುವ ಈ ಮನುಜನಿಗೆ
ನಿನಗೂ ಸುಮ್ಮನಾಗಲಿಲ್ಲ ಕಲ್ಲಿಗೆ .
– ಚನ್ನವೀರಸ್ವಾಮಿ ಹಿರೇಮಠ್ ಹೊಳಗುಂದಿ.