ಸೋಲು ಸೋಲಿಸದು (ಪುಸ್ತಕ ಪರಿಚಯ)
ಗಜೇಂದ್ರಗಡ ದಲ್ಲಿ ಜರುಗಿದ ಹತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಭೇಟಿಯಾದ ಬಸವರಾಜ ಅವರು ನನಗೆ ತಮ್ಮ ಸಂಪಾದನೆಯ ಸೋಲು ಸೋಲಿಸದು ಪುಸ್ತಕ ವನ್ನು ಪ್ರೀತಿಯಿಂದ ಓದಲು ನೀಡಿದರು
ಪುಟ ತಿರುವಿದಂತೆ ಪುಸ್ತಕ ದಲ್ಲಿರುವ ಮೌಲಿಕ ಲೇಖನಗಳು ಮನಸೂರೆಗೊಂಡವು ಪ್ರತಿಯೊಬ್ಬರ ಲೇಖನಗಳು ಸಹ ಉತ್ಕೃಷ್ಟ ಬರಹಗಳಿಂದ ಓದುಗರ ಹೃದಯ ವನ್ನು ಮೀಟುತ್ತವೆ
ಸೋಲಿನ ವ್ಯಾಖ್ಯಾನಗಳನ್ನು ಅವರವರು ಕಂಡಂತೆ ನಿರೂಪಿಸುತ್ತಾ ಸಾಗಿದ್ದಾರೆ ಸೋಲಿಗೂ ಕೂಡಾ ನಾನಾ ಮುಖಗಳಿರುವದನ್ನು ಸಾದರಪಡಿಸುತ್ತಾ ಸಾಗುತ್ತಾರೆ
ಸೋಲು ನಮ್ಮನ್ನು ಸೋಲಿಸುವದಿಲ್ಲ ನಾವೇ ಸೋಲಿಗೆ ತಲೆಬಾಗಿರುತ್ತೇವೆ ಮತ್ತು ಅಪ್ಪಿಕೊಂಡಿರುತ್ತೇವೆ
ಹತಾಶೆಯ ಕೊನೆಯ ಮೆಟ್ಟಿಲು ಸೋಲು ಎಂದು ನಾವು ಕರೆಯುತ್ತೇವೆ
ಗೆಲುವಿನ ಗೆಣಸು ತಿನ್ನುವದು ಸುಲಭವಲ್ಲ ನಿರಂತರ ವಾಗಿ ಪ್ರಯತ್ನ ಗಳ ಹಾದಿಯಲ್ಲಿ ಪ್ರಮಾದ ಗಳ ಸಂಖ್ಯಯನ್ನು ಕಡಿಮೆ ಗೊಳಿಸುತ್ತಾ ಬಂದಾಗ ಗೆಲುವು ನಮ್ಮ ಪಾಲಾಗುತ್ತದೆ
ಮರಳಿ ಮರಳಿ ಯತ್ನಿಸುವ ನಮ್ಮ ಪ್ರಯತ್ನ ಗಳ ಸಂಖ್ಯ ಅಧಿಕವಾದಾಗ ಸೋಲು ಭಯಪಡುತ್ತಾ ಸಾಗುತ್ತದೆ ನಮ್ಮ ಹತ್ತಿರ ಸುಳಿಯಲೂ ಹಿಂಜರಿಯುತ್ತದೆ ಹಾಗಾಗಿ ನಾವು ಹಲವಾರು ಅಸಂಖ್ಯ ಪ್ರಯತ್ನ ಗಳ ಸಂಕಲನವೇ ಗೆಲುವು ಎಂದು ತಿಳಿದುಕೊಳ್ಳಬೇಕು . ೨೪ ಜನ ನಾಡಿನ ಮೂಲೆ ಮೂಲೆಗಳಲ್ಲಿರುವ ಲೇಖಕರ ಲೇಖಕಿಯರ ಲೇಖನಗಳನ್ನು ಓದಿ ಅವುಗಳನ್ನು ಆಯ್ಕೆ ಮಾಡಿದ ಸಿ,ಕೆ,ಗಣಪ್ಪನವರ ಮತ್ತು ಸಂಪಾದಕರಾದ ಬಸವರಾಜ ಬೆನ್ನೂರ ಅವರ ಶ್ರಮ ಸಾರ್ಥಕವಾಗಿದೆ.
ಸಂಪಾದಕರು- ಬಸವರಾಜ, ಶಿ,ಬೆನ್ನೂರ
ಪ್ರಕಾಶಕರು- ಕಪ್ಪತಗಿರಿ ನ್ಯೂಸ್
ಪುಸ್ತಕ ದ ಬೆಲೆ- 120
– ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ.ಗದಗ