Oplus_131072

ಒಲವಿನ ದೀಪ

ಕತ್ತಲ ಮಡಿಲಲ್ಲಿ ಬೆಳಕಿನ ಸಿರಿಯುಓಟು
ದೇಗುಲಕ್ಕೆ ಕೈ ಮುಗಿಯೋಣ ಬನ್ನಿ
ಹಸಿರ ಉಸಿರುಟ್ಟು ಹಕ್ಕಿ ಹಾಡುತಾವ
ಜಗದ ಸೊಬಗ ನೋಡಬನ್ನಿ …
ಬನ್ನಿ…… ಬನ್ನಿ ಬನ್ನಿ…!

ತ್ಯಾಗದ ಮಹಿಮೆಗೆ ಜೋಗದ ಸಿರಿಬಂತು
ನೂರು ನೋವಿಗೂ ನಗೆ ಬೀರಿ ಬಾಳೋಣ
ಒಡಲ ಕಿಚ್ಚಿನ ಬೆಂಕಿ ಆರಿಸಿ
ಒಲವಿನ ದೀಪ ಹಚ್ಚೋಣ ಬನ್ನಿ..
ಬನ್ನಿ ಬನ್ನಿ ಬನ್ನಿ ಬನ್ನಿ…!!

ಹೆತ್ತ ಒಡಲಿನ ತುಂಬ ಮುತ್ತು ಸುರಿವ ಬನ್ನಿ
ಹಾಲುಂಡ ತವರ ನೆನೆಯೋಣ ಬನ್ನಿ
ಎದೆಯ ತುಂಬ ಉಕ್ಕಿ ಹರಿಯಲಿ ಪ್ರೀತಿ
ಹೊಸ ಯುಗಕ್ಕೆ ಮುನ್ನುಡಿ ಬರೆವ ಬನ್ನಿ…
ಬನ್ನಿ ! ಬನ್ನಿ !! ಬನ್ನಿ !!!

ಅಶೋಕ ಎಂ. ಬಿ.
ಕವಿ / ಕಲಾವಿದ
ಜವಾಹರ ನವೋದಯ ವಿದ್ಯಾಲಯ. ದಕ್ಷಿಣ ಕನ್ನಡ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *